<p><strong>ಕಲಬುರಗಿ:</strong> ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಇಂಗ್ಲಿಷ್ ವಿಭಾಗದಿಂದ ಸೆಮಿನಾರ್ ಹಾಲ್ನಲ್ಲಿ ಏ.17 ಮತ್ತು 18ರಂದು ಸಂಶೋಧನಾ ವಿಧಾನ ಮತ್ತು ಶೈಕ್ಷಣಿಕ ಬರವಣಿಗೆ ಕುರಿತು ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರ ನಡೆಯಲಿದೆ.</p>.<p>ಈ ಕುರಿತು ವಿವಿಯಲ್ಲಿ ಬುಧವಾರ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ, ‘ಮಾನವಶಾಸ್ತ್ರ ಮತ್ತು ಭಾಷೆಗಳಲ್ಲಿನ ಸಂಶೋಧನೆಯು ಸಾಂಸ್ಕೃತಿಕ ತಿಳಿವಳಿಕೆ, ವಿಮರ್ಶಾತ್ಮಕ ವಿಚಾರಣೆ ಮತ್ತು ಮಾನವಿಕ ಜ್ಞಾನ ಉತ್ಪಾದನೆಯ ಬೌದ್ಧಿಕ ಮೂಲಾಧಾರವಾಗಿದೆ. ವಿದ್ಯಾರ್ಥಿಗಳು ಮತ್ತು ಸಂಶೋಧಕರು ತಮ್ಮ ವಿಷಯಗಳ ಬಗ್ಗೆ ಮತ್ತು ಸಂಶೋಧನಾ ವಿಧಾನ ಮತ್ತು ಶೈಕ್ಷಣಿಕ ಬರವಣಿಗೆಯಲ್ಲಿ ಉತ್ಸಾಹವನ್ನು ಹೊಂದಿರುತ್ತಾರೆ’ ಎಂದು ಹೇಳಿದರು.</p>.<p>ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಪ್ರೊ. ಬಸವರಾಜ ಡೋಣೂರ, ‘ಮಾನವಶಾಸ್ತ್ರದಲ್ಲಿನ ಸಂಶೋಧನಾ ವಿಧಾನವು ಏಕಶಿಲೆಯ ಶಿಸ್ತಲ್ಲ; ಆದಾಗ್ಯೂ, ಇದು ವ್ಯಾಖ್ಯಾನಾತ್ಮಕ, ವಿಮರ್ಶಾತ್ಮಕ, ಪ್ರಾಯೋಗಿಕ ಮತ್ತು ಮಿಶ್ರ ಚೌಕಟ್ಟುಗಳನ್ನು ಆಧರಿಸಿದೆ’ ಎಂದು ಹೇಳಿದರು.</p>.<p>ಕಾರ್ಯಾಗಾರದಲ್ಲಿ ಸಂಶೋಧನಾರ್ಥಿಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಬಹುದು. ಸ್ಥಳದಲ್ಲೇ ನೋಂದಣಿ ಕೂಡ ಲಭ್ಯವಿದೆ.</p>.<p>ಹೆಚ್ಚಿನ ವಿವರಗಳಿಗಾಗಿ ಮೊಬೈಲ್ ಸಂಖ್ಯೆ 9480146466 ಸಂಪರ್ಕಿಸಬಹುದು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260416-30-1788036361</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ:</strong> ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಇಂಗ್ಲಿಷ್ ವಿಭಾಗದಿಂದ ಸೆಮಿನಾರ್ ಹಾಲ್ನಲ್ಲಿ ಏ.17 ಮತ್ತು 18ರಂದು ಸಂಶೋಧನಾ ವಿಧಾನ ಮತ್ತು ಶೈಕ್ಷಣಿಕ ಬರವಣಿಗೆ ಕುರಿತು ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರ ನಡೆಯಲಿದೆ.</p>.<p>ಈ ಕುರಿತು ವಿವಿಯಲ್ಲಿ ಬುಧವಾರ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ, ‘ಮಾನವಶಾಸ್ತ್ರ ಮತ್ತು ಭಾಷೆಗಳಲ್ಲಿನ ಸಂಶೋಧನೆಯು ಸಾಂಸ್ಕೃತಿಕ ತಿಳಿವಳಿಕೆ, ವಿಮರ್ಶಾತ್ಮಕ ವಿಚಾರಣೆ ಮತ್ತು ಮಾನವಿಕ ಜ್ಞಾನ ಉತ್ಪಾದನೆಯ ಬೌದ್ಧಿಕ ಮೂಲಾಧಾರವಾಗಿದೆ. ವಿದ್ಯಾರ್ಥಿಗಳು ಮತ್ತು ಸಂಶೋಧಕರು ತಮ್ಮ ವಿಷಯಗಳ ಬಗ್ಗೆ ಮತ್ತು ಸಂಶೋಧನಾ ವಿಧಾನ ಮತ್ತು ಶೈಕ್ಷಣಿಕ ಬರವಣಿಗೆಯಲ್ಲಿ ಉತ್ಸಾಹವನ್ನು ಹೊಂದಿರುತ್ತಾರೆ’ ಎಂದು ಹೇಳಿದರು.</p>.<p>ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಪ್ರೊ. ಬಸವರಾಜ ಡೋಣೂರ, ‘ಮಾನವಶಾಸ್ತ್ರದಲ್ಲಿನ ಸಂಶೋಧನಾ ವಿಧಾನವು ಏಕಶಿಲೆಯ ಶಿಸ್ತಲ್ಲ; ಆದಾಗ್ಯೂ, ಇದು ವ್ಯಾಖ್ಯಾನಾತ್ಮಕ, ವಿಮರ್ಶಾತ್ಮಕ, ಪ್ರಾಯೋಗಿಕ ಮತ್ತು ಮಿಶ್ರ ಚೌಕಟ್ಟುಗಳನ್ನು ಆಧರಿಸಿದೆ’ ಎಂದು ಹೇಳಿದರು.</p>.<p>ಕಾರ್ಯಾಗಾರದಲ್ಲಿ ಸಂಶೋಧನಾರ್ಥಿಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಬಹುದು. ಸ್ಥಳದಲ್ಲೇ ನೋಂದಣಿ ಕೂಡ ಲಭ್ಯವಿದೆ.</p>.<p>ಹೆಚ್ಚಿನ ವಿವರಗಳಿಗಾಗಿ ಮೊಬೈಲ್ ಸಂಖ್ಯೆ 9480146466 ಸಂಪರ್ಕಿಸಬಹುದು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260416-30-1788036361</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>