<p><strong>ಕಲಬುರಗಿ (ಲಿಂ.ಶರಣಬಸವಪ್ಪ ಅಪ್ಪ ವೇದಿಕೆ):</strong> ‘ಸಾಹಿತ್ಯಕ್ಕೆ ಯಾವುದೇ ಇಸಂಗಳ ಹಂಗು ಬೇಡ. ಸರ್ವ ಜನಾಂಗದ ಶ್ರೀಸಾಮಾನ್ಯರ ಬದುಕಿಗೊಂದು ಅರ್ಥ ನೀಡುವ, ದಾರಿದೀಪವಾಗುವ ಸಾಹಿತ್ಯ ಪ್ರಸ್ತುತ ಅಗತ್ಯ’ ಎಂದು ಕಲಬುರಗಿ ಜಿಲ್ಲಾ 22ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಮುಡುಬಿ ಗುಂಡೇರಾವ ಪ್ರತಿಪಾದಿಸಿದರು.</p>.<p>ನಗರದ ಕನ್ನಡ ಭವನದ ಆವರಣದ ಬಾಪುಗೌಡ ರಂಗಮಂದಿರದಲ್ಲಿ ಸೋಮವಾರ ಆರಂಭವಾದ ಎರಡು ದಿನಗಳ ಸಮ್ಮೇಳನದಲ್ಲಿ ಅವರು ಮಾತನಾಡಿದರು.</p>.<p>‘ಬಡವರ, ಶೋಷಿತರ ಬದುಕಿನ ಚಿತ್ರಣ ಬದಲಿಸುವ, ಪ್ರಚಲಿತ ವಿದ್ಯಮಾನಗಳಿಗೆ ಸ್ಪಂದಿಸುವ ಗಟ್ಟಿ ಸಾಹಿತ್ಯ ಈ ನೆಲದಿಂದ ಹೊಮ್ಮಬೇಕು. ಸಮಾಜದ ಓರೆ–ಕೋರೆ ತಿದ್ದುವ, ಸಮಾಜದ ಕೀಲು ಮುರಿಯುತ್ತಿರುವ ಮೌಢ್ಯ–ಕಂದಾಚಾರಗಳಿಗೆ ಕೊಡಲಿ ಏಟು ನೀಡುವ ಸಾಹಿತ್ಯ ರಚನೆಯಾಗಬೇಕು’ ಎಂದು ಅಭಿಪ್ರಾಯಪಟ್ಟರು.</p>.<p>‘ಕನ್ನಡ ಎರಡೂವರೆ ಸಾವಿರ ವರ್ಷಗಳ ಇತಿಹಾಸವುಳ್ಳ ಶ್ರೀಮಂತ ಭಾಷೆ. ಆದರೆ, ಇಂಗ್ಲಿಷ್ ಭಾಷೆಯ ವ್ಯಾಮೋಹದ ಹಾವಳಿಗೆ ಕನ್ನಡ ನಲುಗುತ್ತಿದೆ. ಅದನ್ನು ಉಳಿಸಿ–ಬೆಳೆಸಲು ಕನ್ನಡ ಭಾಷಾ ಸ್ವಾಭಿಮಾನ ಜಾಗೃತಗೊಳ್ಳಬೇಕಿದೆ. ಕನ್ನಡಿಗರಿಗೆ ಕನ್ನಡವೇ ಕೂಡಲಸಂಗಮ ಎಂಬ ಸುಬುದ್ಧಿ ಎಲ್ಲರಲ್ಲೂ ಮೂಡಬೇಕಿದೆ’ ಎಂದು ಆಶಿಸಿದರು.</p>.<p>‘ಕಲಬುರಗಿ ಹಲವಾರು ಧರ್ಮಗಳ ಶಿಶುಗಳನ್ನು ಒಂದೇ ತೊಟ್ಟಿಲಲ್ಲಿ ಮಲಗಿಸಿ ಜೋಗುಳ ಹಾಡಿದ ನಾಡು’ ಎಂದು ಈ ನೆಲದ ಅಸ್ಮಿತೆ ಬಣ್ಣಿಸಿದ ಅವರು, ‘ಈ ನೆಲದಲ್ಲಿ ಶೈಕ್ಷಣಿಕ ಕ್ರಾಂತಿಯ ಅಗತ್ಯವಿದೆ. ಸಮಾಜದ ಎಲ್ಲ ಸಮಸ್ಯೆಗಳ ನಿವಾರಣೆಗೂ ಶಿಕ್ಷಣ ಮತ್ತು ಜ್ಞಾನವೇ ಮದ್ದು ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕಿದೆ. ಸರ್ಕಾರಿ ಶಾಲೆಗಳ ಸಬಲೀಕರಣ, ಶಿಕ್ಷಕರ ಹುದ್ದೆಗಳ ಭರ್ತಿ ಆಗಬೇಕಿದೆ’ ಎಂದು ಒತ್ತಿ ಹೇಳಿದರು.</p>.<p>‘ಅಶೋಕ ಚಕ್ರವರ್ತಿ ನೆಲೆನಿಂತ ಸನ್ನತಿಯು ನಮ್ಮ ಸಾಹಿತ್ಯಕ್ಕೆ ಪ್ರೇರಣೆಯಾಗಬೇಕು. ಮನುಷ್ಯತ್ವ ನಿರ್ಮಿಸುವ ಸಾಹಿತ್ಯ ಹೊರಹೊಮ್ಮಬೇಕು’ ಎಂದು ಆಗ್ರಹಿಸಿದರು.</p>.<p>ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ‘ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಸಿಗಲು ಕವಿರಾಜಮಾರ್ಗ ಗ್ರಂಥವೇ ಪ್ರೇರಣೆಯಾಯಿತು. ಉತ್ತರ ಕರ್ನಾಟಕವು ವಚನ ಸಾಹಿತ್ಯ, ದಾಸ ಸಾಹಿತ್ಯ, ಅನೇಕ ತತ್ವಪದ ಸಾಹಿತ್ಯದ ಮೂಲಕ ಅನೇಕ ಕೊಡುಗೆ ನೀಡಿದೆ’ ಎಂದರು.</p>.<p>‘ಪಾಶ್ಚಾತ್ಯ ಭಾಷೆಗಳ ಪ್ರಭಾವ ಹಾಗೂ ಔದ್ಯೋಗಿಕ ಸೇರಿದಂತೆ ಹತ್ತಾರು ಕಾರಣಗಳಿಂದಾಗಿ ನಾವೆಲ್ಲ ಅನ್ಯ ಭಾಷೆಗಳನ್ನು ಬಳಸುತ್ತಿದ್ದೇವೆ. ಇದರಿಂದ ಕನ್ನಡಕ್ಕೆ ಹಿನ್ನಡೆಯಾಗುತ್ತಿದೆ’ ಎಂದರು.</p>.<p>ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಆಶಯ ನುಡಿಗಳನ್ನಾಡಿದರು. ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಜಗನ್ನಾಥ ಶೇಗಜಿ, ಅಮರೇಶ್ವರಿ ಬಾಬುರಾವ ಚಿಂಚನಸೂರ, ಮೋಹಸಿನ್ ಪಟೇಲ್ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು. ಮಕ್ಕಳ ಭರತನಾಟ್ಯ, ರಂಗ ರೂಪಕಗಳ ಪ್ರದರ್ಶನಗಳು ಚಪ್ಪಾಳೆ ಗಿಟ್ಟಿಸಿದವು.</p>.<h2>ಮೆರವಣಿಗೆ:</h2>.<p>ಕನ್ನಡ ಭವನದ ಆವರಣದಲ್ಲಿ ರಾಷ್ಟ್ರಧ್ವಜಾರೋಹಣ, ನಾಡಧ್ವಜಾರೋಹಣ ಹಾಗೂ ಪರಿಷತ್ ಧ್ವಜಾರೋಹಣದೊಂದಿಗೆ ಸೋಮವಾರ ಬೆಳಿಗ್ಗೆ ಸಮ್ಮೇಳನಕ್ಕೆ ಔಪಚಾರಿಕ ಚಾಲನೆ ನೀಡಲಾಯಿತು. ಬಳಿಕ ವಿವಿಧ ಕಲಾತಂಡಗಳೊಂದಿಗೆ ಸಾರೋಟಿನಲ್ಲಿ ಸಮ್ಮೇಳನದ ಅಧ್ಯಕ್ಷ ಮುಡಬಿ ಗುಂಡೇರಾವ ದಂಪತಿ ಮೆರವಣಿಗೆ ನಡೆಸಲಾಯಿತು.</p>.<p>ಡೊಳ್ಳು ಕುಣಿತ, ಮಹಿಳೆಯರ ಹಲಗೆ ವಾದನ, ಸಾಂಪ್ರದಾಯಿಕ ವೇಷತೊಟ್ಟ ಲಂಬಾಣಿ ಕಲಾವಿದರ ಕುಣಿತ, ಸಂಬಾಳ ವಾದನಗಳು ಮೆರವಣಿಗೆ ಅಂದ ಹೆಚ್ಚಿಸಿದವು.</p>.<div><blockquote>ಮಾತೃಭಾಷೆ ಹಾಗೂ ತಾಯಿ ವಾತ್ಸಲ್ಯಕ್ಕೆ ಸರಿಸಾಟಿ ಯಾವುದೂ ಇಲ್ಲ. ಸಂಸ್ಕೃತಿ ಉಳಿಯಬೇಕಾದರೆ ಮಾತೃ ಭಾಷೆ ಉಳಿಯಬೇಕು</blockquote><span class="attribution">ಡಾ.ಶರಣಪ್ರಕಾಶ ಪಾಟೀಲ ಸಚಿವ</span></div>.<div><blockquote>‘ಸರ್ವಜನಾಂಗದ ಶಾಂತಿ ತೋಟ’ದ ಮಾರ್ಗದಲ್ಲಿ ಕಲಬುರಗಿ ಕಸಾಪ ಸಾಗುತ್ತಿದೆ. 4 ವರ್ಷ 2 ತಿಂಗಳಲ್ಲಿ ಐದು ಜಿಲ್ಲಾ ಸಮ್ಮೇಳನ 12 ವಿಶೇಷ ಸಮ್ಮೇಳನ ಮಾಡಲಾಗಿದೆ</blockquote><span class="attribution"> ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಕಸಾಪ ಜಿಲ್ಲಾಧ್ಯಕ್ಷ</span></div>.<h2>ನೆನಕೆಗಳೂ... 20 ಹಕ್ಕೊತ್ತಾಯಗಳೂ... </h2>.<p>ಸಮ್ಮೇಳನಾಧ್ಯಕ್ಷ ಮುಡುಬಿ ಗುಂಡೇರಾವ ತಮ್ಮ ಭಾಷಣವನ್ನು ‘ಜೈನರ ಕಾವ್ಯದ ಶರಣರ ವಚನದ ದಾಸರ ಹಾಡಿನದಿ ಈ ನಾಡು’ ಎಂಬ ವರಕವಿ ದ.ರಾ.ಬೇಂದ್ರೆ ಸಾಲಿನೊಂದಿಗೆ ಆರಂಭಿಸಿದರು. ತಾನು ಹುಟ್ಟಿದ ಮಡಿಲು ನಿಂತ ನೆಲ ಕಲಿತ ಶಾಲೆ ಕೆಲಸದ ತಾಣ ಅಕ್ಷರ ಕಲಿಸಿದ ಗುರುಗಳನ್ನು ಸ್ಮರಿಸಿದರು. ಕಸಾಪ ಜಿಲ್ಲಾಧ್ಯಕ್ಷರ ಹೆಸರುಗಳನ್ನೂ ಪಟ್ಟಿ ಮಾಡಿದರು. ಈ ನೆಲದ ಶ್ರೀಮಂತಿಕೆ ಹೆಚ್ಚಿಸಿದ ನೃಪತುಂಗ ಅಮೋಘವರ್ಷರಿಂದ ಹಿಡಿದು ಜಾತ್ಯತೀತವಾಗಿ ಸಾಹಿತಿಗಳು ಕಲಾವಿದರು ಹೋರಾಟಗಾರು ಜನಪ್ರತಿನಿಧಿಗಳನ್ನೂ ಅನೇಕಾನೇಕ ತೀರ್ಥಕ್ಷೇತ್ರಗಳನ್ನೂ ಭಾಷಣದಲ್ಲಿ ಉಲ್ಲೇಖಿಸಿದರು. ಪ್ರತಿ ತಾಲ್ಲೂಕಿಗೊಂದು ಕನ್ನಡ ಭವನ ಸ್ಥಾಪನೆ ಸರೋಜಿನಿ ಮಹಿಷಿ ವರದಿ ಜಾರಿ ಕವಿರಾಜಮಾರ್ಗ ರಾಷ್ಟ್ರಕೂಟ ಉತ್ಸವ ನಾಗಾವಿ ನಾಡು ಉತ್ಸವ ಆಚರಣೆಗೆ ಕ್ರಮವಹಿಸುವುದು ಸೇರಿದಂತೆ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ 20 ಹಕ್ಕೊತ್ತಾಯಗಳನ್ನು ಮಾಡಿದರು.</p>.<h2> ‘ಜಾನಪದ ಎಲ್ಲ ಸಾಹಿತ್ಯಗಳ ಜೀವದ್ರವ್ಯ’</h2>.<p> ‘ಜಾನಪದದಲ್ಲಿ ತಾಯಿಯೊಬ್ಬಳು ತನ್ನ ಮಗನಿಗೆ ‘ಆಚಾರಕ್ಕೆ ಅರಸಾಗು ನೀತಿಗೆ ಪ್ರಭುವಾಗು...’ ಎಂದು ಹೇಳುತ್ತಾಳೆ. ಇಂಥ ಜಾನಪದ ಸಾಹಿತ್ಯ ಎಲ್ಲ ಸಾಹಿತ್ಯಗಳ ಜೀವದ್ರವ್ಯ’ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ.ಸೋಮಶೇಖರ ಹೇಳಿದರು. ಎರಡು ದಿನಗಳ 22ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ‘ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ...’ ಎನ್ನುವ ಸಪ್ತ ಸೂತ್ರಗಳ ಜೀವನ ಸಂವಿಧಾನವನ್ನು ವಚನಕಾರರು ಜಗಕ್ಕೆ ಕೊಟ್ಟಿದ್ದಾರೆ’ ಎಂದು ಬಣ್ಣಿಸಿದರು. ‘ಯಾವುದೇ ಸಾಹಿತ್ಯ ರಚನೆಗೆ ಸಾಮಾಜಿಕ ಬದ್ಧತೆ ಇರಬೇಕು. ತನ್ನ ಮನದ ಉಲ್ಲಾಸಕ್ಕಾಗಿ ಸಾಹಿತ್ಯ ರಚನೆಯಾಗಬಾರದು. ಎಲ್ಲ ದರ್ಶನಿಕರ ಸಾಹಿತ್ಯ ರಚನೆಗೆ ಸಮಾಜೋದ್ಧಾರದ ಪರಮ ಗುರಿ ಹೊಂದಿತ್ತು’ ಎಂದರು.</p>.<h2>ಹತ್ತರಲ್ಲಿ ಪುಸ್ತಕ ಮಳಿಗೆ ಒಂದೇ! </h2>.<p>ಸಮ್ಮೇಳನದಲ್ಲಿ 10 ಮಳಿಗೆಗಳನ್ನು ಸ್ಥಾಪಿಸಲಾಗಿದ್ದು ಅದರಲ್ಲಿ ಮೂರಲ್ಲಿ ಬಟ್ಟೆ ಮಾರಾಟ ತಲಾ ಒಂದರಲ್ಲಿ ಆಹಾರ ಪದಾರ್ಥ ಹಾಗೂ ಪುಸ್ತಕಗಳ ಮಾರಾಟ ನಡೆಯುತ್ತಿದೆ. ಇನ್ನೊಂದರಲ್ಲಿ ಆರೋಗ್ಯ ತಪಾಸಣೆ ಆಯೋಜಿಸಲಾಗಿದೆ. ಇನ್ನುಳಿದ ನಾಲ್ಕು ಮಳಿಗೆ ಸಮ್ಮೇಳನಕ್ಕೆ ಬಂದವರ ನೋಂದಣಿಗೆ ಸೀಮಿತವಾಗಿದ್ದವು. ಸಮ್ಮೇಳನದಲ್ಲಿ ಪಾಲ್ಗೊಂಡವರಿಗೆ ಮಧ್ಯಾಹ್ನ ಸಜ್ಜಕ ಮತ್ತು ಪುಲಾವ್ ಮೊಸರು ಬಜ್ಜಿ ಉಣಬಡಿಸಲಾಯಿತು. ನೋಂದಣಿ ವಿವರ: ಜಿಲ್ಲಾ ಸಮ್ಮೇಳನಕ್ಕೆ ಸರ್ಕಾರಿ ನೌಕರರಿಗೆ ಒಒಡಿ ಸೌಲಭ್ಯ ಕಲ್ಪಿಸಲಾಗಿದ್ದು ಸಮ್ಮೇಳನಕ್ಕೆ 850ಕ್ಕೂ ಶಿಕ್ಷಕರು ನೋಂದಣಿ ಮಾಡಿಕೊಂಡಿದ್ದರು. ಆದರೆ ಬಹುತೇಕರು ಕಿಟ್ ಪಡೆದು ಸಮಾರಂಭದಲ್ಲಿ ಕೆಲಕಾಲ ಪಾಲ್ಗೊಂಡಂತೆ ಮಾಡಿ ಮಳಿಗೆಗಳತ್ತ ಹಾದು ಮನೆಗಳತ್ತ ಮುಖ ಮಾಡಿದರು.</p>.<h2>ಮೊದಲ ದಿನ ಮೂರು ಗೋಷ್ಠಿ </h2>.<p>‘ಕಲ್ಲರಳಿ ಹೂವಾಗಿ’ ಗೋಷ್ಠಿಯಲ್ಲಿ ‘ಕಲಬುರಗಿ ಜಿಲ್ಲಾ ಸಾಂಸ್ಕೃತಿಕ ಪರಂಪರೆ’ ಕುರಿತು ಕಲ್ಯಾಣರಾವ ಜಿ.ಪಾಟೀಲ ‘ಕಲಬುರಗಿ ಜಿಲ್ಲಾ ಸಾಹಿತ್ಯಿಕ ನೋಟ’ ಕುರಿತು ಶ್ರೀಶೈಲ ನಾಗರಾಳ ವಿಚಾರ ಮಂಡಿಸಿದರು. ಸಾಹಿತಿ ಸ್ವಾಮಿರಾವ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ‘ಮಾತೆಂಬುದು ಜ್ಯೋತಿರ್ಲಿಂಗ’ ಗೋಷ್ಠಿಯಲ್ಲಿ ‘ಕೀರ್ತನ ಮತ್ತು ತತ್ವಪದಾವಲೋಕ’ ಕುರಿತು ಜಗನ್ನಾಥ ತರನಳ್ಳಿ ಹಾಗೂ ‘ವಚನ ದರ್ಶನ ಮತ್ತು ಭಾರತ ಸಂವಿಧಾನ’ ಒಂದು ಅವಲೋಕನ ಕುರಿತು ಪ್ರೊ.ಸಂಜಯ ಮಾಕಲ್ ವಿಚಾರ ಮಂಡಿಸಿದರು. ಶಾರದಾದೇವಿ ಜಾಧವ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಸದಾನಂದ ಪೆರ್ಲ ಅಧ್ಯಕ್ಷತೆಯ ‘ಕಾವ್ಯಧೇನು’ ಕವಿಗೋಷ್ಠಿಯಲ್ಲಿ ಹಲವು ಕವಿಗಳು ಕವನ ವಾಚಿಸಿದರು. ನರಸಿಂಗರಾವ ಹೇಮನೂರ ಮಹ್ಮದ್ ಅಯಾಜುದ್ದೀನ್ ಪಟೇಲ್ ಅತಿಥಿಗಳಾಗಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ (ಲಿಂ.ಶರಣಬಸವಪ್ಪ ಅಪ್ಪ ವೇದಿಕೆ):</strong> ‘ಸಾಹಿತ್ಯಕ್ಕೆ ಯಾವುದೇ ಇಸಂಗಳ ಹಂಗು ಬೇಡ. ಸರ್ವ ಜನಾಂಗದ ಶ್ರೀಸಾಮಾನ್ಯರ ಬದುಕಿಗೊಂದು ಅರ್ಥ ನೀಡುವ, ದಾರಿದೀಪವಾಗುವ ಸಾಹಿತ್ಯ ಪ್ರಸ್ತುತ ಅಗತ್ಯ’ ಎಂದು ಕಲಬುರಗಿ ಜಿಲ್ಲಾ 22ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಮುಡುಬಿ ಗುಂಡೇರಾವ ಪ್ರತಿಪಾದಿಸಿದರು.</p>.<p>ನಗರದ ಕನ್ನಡ ಭವನದ ಆವರಣದ ಬಾಪುಗೌಡ ರಂಗಮಂದಿರದಲ್ಲಿ ಸೋಮವಾರ ಆರಂಭವಾದ ಎರಡು ದಿನಗಳ ಸಮ್ಮೇಳನದಲ್ಲಿ ಅವರು ಮಾತನಾಡಿದರು.</p>.<p>‘ಬಡವರ, ಶೋಷಿತರ ಬದುಕಿನ ಚಿತ್ರಣ ಬದಲಿಸುವ, ಪ್ರಚಲಿತ ವಿದ್ಯಮಾನಗಳಿಗೆ ಸ್ಪಂದಿಸುವ ಗಟ್ಟಿ ಸಾಹಿತ್ಯ ಈ ನೆಲದಿಂದ ಹೊಮ್ಮಬೇಕು. ಸಮಾಜದ ಓರೆ–ಕೋರೆ ತಿದ್ದುವ, ಸಮಾಜದ ಕೀಲು ಮುರಿಯುತ್ತಿರುವ ಮೌಢ್ಯ–ಕಂದಾಚಾರಗಳಿಗೆ ಕೊಡಲಿ ಏಟು ನೀಡುವ ಸಾಹಿತ್ಯ ರಚನೆಯಾಗಬೇಕು’ ಎಂದು ಅಭಿಪ್ರಾಯಪಟ್ಟರು.</p>.<p>‘ಕನ್ನಡ ಎರಡೂವರೆ ಸಾವಿರ ವರ್ಷಗಳ ಇತಿಹಾಸವುಳ್ಳ ಶ್ರೀಮಂತ ಭಾಷೆ. ಆದರೆ, ಇಂಗ್ಲಿಷ್ ಭಾಷೆಯ ವ್ಯಾಮೋಹದ ಹಾವಳಿಗೆ ಕನ್ನಡ ನಲುಗುತ್ತಿದೆ. ಅದನ್ನು ಉಳಿಸಿ–ಬೆಳೆಸಲು ಕನ್ನಡ ಭಾಷಾ ಸ್ವಾಭಿಮಾನ ಜಾಗೃತಗೊಳ್ಳಬೇಕಿದೆ. ಕನ್ನಡಿಗರಿಗೆ ಕನ್ನಡವೇ ಕೂಡಲಸಂಗಮ ಎಂಬ ಸುಬುದ್ಧಿ ಎಲ್ಲರಲ್ಲೂ ಮೂಡಬೇಕಿದೆ’ ಎಂದು ಆಶಿಸಿದರು.</p>.<p>‘ಕಲಬುರಗಿ ಹಲವಾರು ಧರ್ಮಗಳ ಶಿಶುಗಳನ್ನು ಒಂದೇ ತೊಟ್ಟಿಲಲ್ಲಿ ಮಲಗಿಸಿ ಜೋಗುಳ ಹಾಡಿದ ನಾಡು’ ಎಂದು ಈ ನೆಲದ ಅಸ್ಮಿತೆ ಬಣ್ಣಿಸಿದ ಅವರು, ‘ಈ ನೆಲದಲ್ಲಿ ಶೈಕ್ಷಣಿಕ ಕ್ರಾಂತಿಯ ಅಗತ್ಯವಿದೆ. ಸಮಾಜದ ಎಲ್ಲ ಸಮಸ್ಯೆಗಳ ನಿವಾರಣೆಗೂ ಶಿಕ್ಷಣ ಮತ್ತು ಜ್ಞಾನವೇ ಮದ್ದು ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕಿದೆ. ಸರ್ಕಾರಿ ಶಾಲೆಗಳ ಸಬಲೀಕರಣ, ಶಿಕ್ಷಕರ ಹುದ್ದೆಗಳ ಭರ್ತಿ ಆಗಬೇಕಿದೆ’ ಎಂದು ಒತ್ತಿ ಹೇಳಿದರು.</p>.<p>‘ಅಶೋಕ ಚಕ್ರವರ್ತಿ ನೆಲೆನಿಂತ ಸನ್ನತಿಯು ನಮ್ಮ ಸಾಹಿತ್ಯಕ್ಕೆ ಪ್ರೇರಣೆಯಾಗಬೇಕು. ಮನುಷ್ಯತ್ವ ನಿರ್ಮಿಸುವ ಸಾಹಿತ್ಯ ಹೊರಹೊಮ್ಮಬೇಕು’ ಎಂದು ಆಗ್ರಹಿಸಿದರು.</p>.<p>ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ‘ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಸಿಗಲು ಕವಿರಾಜಮಾರ್ಗ ಗ್ರಂಥವೇ ಪ್ರೇರಣೆಯಾಯಿತು. ಉತ್ತರ ಕರ್ನಾಟಕವು ವಚನ ಸಾಹಿತ್ಯ, ದಾಸ ಸಾಹಿತ್ಯ, ಅನೇಕ ತತ್ವಪದ ಸಾಹಿತ್ಯದ ಮೂಲಕ ಅನೇಕ ಕೊಡುಗೆ ನೀಡಿದೆ’ ಎಂದರು.</p>.<p>‘ಪಾಶ್ಚಾತ್ಯ ಭಾಷೆಗಳ ಪ್ರಭಾವ ಹಾಗೂ ಔದ್ಯೋಗಿಕ ಸೇರಿದಂತೆ ಹತ್ತಾರು ಕಾರಣಗಳಿಂದಾಗಿ ನಾವೆಲ್ಲ ಅನ್ಯ ಭಾಷೆಗಳನ್ನು ಬಳಸುತ್ತಿದ್ದೇವೆ. ಇದರಿಂದ ಕನ್ನಡಕ್ಕೆ ಹಿನ್ನಡೆಯಾಗುತ್ತಿದೆ’ ಎಂದರು.</p>.<p>ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಆಶಯ ನುಡಿಗಳನ್ನಾಡಿದರು. ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಜಗನ್ನಾಥ ಶೇಗಜಿ, ಅಮರೇಶ್ವರಿ ಬಾಬುರಾವ ಚಿಂಚನಸೂರ, ಮೋಹಸಿನ್ ಪಟೇಲ್ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು. ಮಕ್ಕಳ ಭರತನಾಟ್ಯ, ರಂಗ ರೂಪಕಗಳ ಪ್ರದರ್ಶನಗಳು ಚಪ್ಪಾಳೆ ಗಿಟ್ಟಿಸಿದವು.</p>.<h2>ಮೆರವಣಿಗೆ:</h2>.<p>ಕನ್ನಡ ಭವನದ ಆವರಣದಲ್ಲಿ ರಾಷ್ಟ್ರಧ್ವಜಾರೋಹಣ, ನಾಡಧ್ವಜಾರೋಹಣ ಹಾಗೂ ಪರಿಷತ್ ಧ್ವಜಾರೋಹಣದೊಂದಿಗೆ ಸೋಮವಾರ ಬೆಳಿಗ್ಗೆ ಸಮ್ಮೇಳನಕ್ಕೆ ಔಪಚಾರಿಕ ಚಾಲನೆ ನೀಡಲಾಯಿತು. ಬಳಿಕ ವಿವಿಧ ಕಲಾತಂಡಗಳೊಂದಿಗೆ ಸಾರೋಟಿನಲ್ಲಿ ಸಮ್ಮೇಳನದ ಅಧ್ಯಕ್ಷ ಮುಡಬಿ ಗುಂಡೇರಾವ ದಂಪತಿ ಮೆರವಣಿಗೆ ನಡೆಸಲಾಯಿತು.</p>.<p>ಡೊಳ್ಳು ಕುಣಿತ, ಮಹಿಳೆಯರ ಹಲಗೆ ವಾದನ, ಸಾಂಪ್ರದಾಯಿಕ ವೇಷತೊಟ್ಟ ಲಂಬಾಣಿ ಕಲಾವಿದರ ಕುಣಿತ, ಸಂಬಾಳ ವಾದನಗಳು ಮೆರವಣಿಗೆ ಅಂದ ಹೆಚ್ಚಿಸಿದವು.</p>.<div><blockquote>ಮಾತೃಭಾಷೆ ಹಾಗೂ ತಾಯಿ ವಾತ್ಸಲ್ಯಕ್ಕೆ ಸರಿಸಾಟಿ ಯಾವುದೂ ಇಲ್ಲ. ಸಂಸ್ಕೃತಿ ಉಳಿಯಬೇಕಾದರೆ ಮಾತೃ ಭಾಷೆ ಉಳಿಯಬೇಕು</blockquote><span class="attribution">ಡಾ.ಶರಣಪ್ರಕಾಶ ಪಾಟೀಲ ಸಚಿವ</span></div>.<div><blockquote>‘ಸರ್ವಜನಾಂಗದ ಶಾಂತಿ ತೋಟ’ದ ಮಾರ್ಗದಲ್ಲಿ ಕಲಬುರಗಿ ಕಸಾಪ ಸಾಗುತ್ತಿದೆ. 4 ವರ್ಷ 2 ತಿಂಗಳಲ್ಲಿ ಐದು ಜಿಲ್ಲಾ ಸಮ್ಮೇಳನ 12 ವಿಶೇಷ ಸಮ್ಮೇಳನ ಮಾಡಲಾಗಿದೆ</blockquote><span class="attribution"> ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಕಸಾಪ ಜಿಲ್ಲಾಧ್ಯಕ್ಷ</span></div>.<h2>ನೆನಕೆಗಳೂ... 20 ಹಕ್ಕೊತ್ತಾಯಗಳೂ... </h2>.<p>ಸಮ್ಮೇಳನಾಧ್ಯಕ್ಷ ಮುಡುಬಿ ಗುಂಡೇರಾವ ತಮ್ಮ ಭಾಷಣವನ್ನು ‘ಜೈನರ ಕಾವ್ಯದ ಶರಣರ ವಚನದ ದಾಸರ ಹಾಡಿನದಿ ಈ ನಾಡು’ ಎಂಬ ವರಕವಿ ದ.ರಾ.ಬೇಂದ್ರೆ ಸಾಲಿನೊಂದಿಗೆ ಆರಂಭಿಸಿದರು. ತಾನು ಹುಟ್ಟಿದ ಮಡಿಲು ನಿಂತ ನೆಲ ಕಲಿತ ಶಾಲೆ ಕೆಲಸದ ತಾಣ ಅಕ್ಷರ ಕಲಿಸಿದ ಗುರುಗಳನ್ನು ಸ್ಮರಿಸಿದರು. ಕಸಾಪ ಜಿಲ್ಲಾಧ್ಯಕ್ಷರ ಹೆಸರುಗಳನ್ನೂ ಪಟ್ಟಿ ಮಾಡಿದರು. ಈ ನೆಲದ ಶ್ರೀಮಂತಿಕೆ ಹೆಚ್ಚಿಸಿದ ನೃಪತುಂಗ ಅಮೋಘವರ್ಷರಿಂದ ಹಿಡಿದು ಜಾತ್ಯತೀತವಾಗಿ ಸಾಹಿತಿಗಳು ಕಲಾವಿದರು ಹೋರಾಟಗಾರು ಜನಪ್ರತಿನಿಧಿಗಳನ್ನೂ ಅನೇಕಾನೇಕ ತೀರ್ಥಕ್ಷೇತ್ರಗಳನ್ನೂ ಭಾಷಣದಲ್ಲಿ ಉಲ್ಲೇಖಿಸಿದರು. ಪ್ರತಿ ತಾಲ್ಲೂಕಿಗೊಂದು ಕನ್ನಡ ಭವನ ಸ್ಥಾಪನೆ ಸರೋಜಿನಿ ಮಹಿಷಿ ವರದಿ ಜಾರಿ ಕವಿರಾಜಮಾರ್ಗ ರಾಷ್ಟ್ರಕೂಟ ಉತ್ಸವ ನಾಗಾವಿ ನಾಡು ಉತ್ಸವ ಆಚರಣೆಗೆ ಕ್ರಮವಹಿಸುವುದು ಸೇರಿದಂತೆ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ 20 ಹಕ್ಕೊತ್ತಾಯಗಳನ್ನು ಮಾಡಿದರು.</p>.<h2> ‘ಜಾನಪದ ಎಲ್ಲ ಸಾಹಿತ್ಯಗಳ ಜೀವದ್ರವ್ಯ’</h2>.<p> ‘ಜಾನಪದದಲ್ಲಿ ತಾಯಿಯೊಬ್ಬಳು ತನ್ನ ಮಗನಿಗೆ ‘ಆಚಾರಕ್ಕೆ ಅರಸಾಗು ನೀತಿಗೆ ಪ್ರಭುವಾಗು...’ ಎಂದು ಹೇಳುತ್ತಾಳೆ. ಇಂಥ ಜಾನಪದ ಸಾಹಿತ್ಯ ಎಲ್ಲ ಸಾಹಿತ್ಯಗಳ ಜೀವದ್ರವ್ಯ’ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ.ಸೋಮಶೇಖರ ಹೇಳಿದರು. ಎರಡು ದಿನಗಳ 22ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ‘ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ...’ ಎನ್ನುವ ಸಪ್ತ ಸೂತ್ರಗಳ ಜೀವನ ಸಂವಿಧಾನವನ್ನು ವಚನಕಾರರು ಜಗಕ್ಕೆ ಕೊಟ್ಟಿದ್ದಾರೆ’ ಎಂದು ಬಣ್ಣಿಸಿದರು. ‘ಯಾವುದೇ ಸಾಹಿತ್ಯ ರಚನೆಗೆ ಸಾಮಾಜಿಕ ಬದ್ಧತೆ ಇರಬೇಕು. ತನ್ನ ಮನದ ಉಲ್ಲಾಸಕ್ಕಾಗಿ ಸಾಹಿತ್ಯ ರಚನೆಯಾಗಬಾರದು. ಎಲ್ಲ ದರ್ಶನಿಕರ ಸಾಹಿತ್ಯ ರಚನೆಗೆ ಸಮಾಜೋದ್ಧಾರದ ಪರಮ ಗುರಿ ಹೊಂದಿತ್ತು’ ಎಂದರು.</p>.<h2>ಹತ್ತರಲ್ಲಿ ಪುಸ್ತಕ ಮಳಿಗೆ ಒಂದೇ! </h2>.<p>ಸಮ್ಮೇಳನದಲ್ಲಿ 10 ಮಳಿಗೆಗಳನ್ನು ಸ್ಥಾಪಿಸಲಾಗಿದ್ದು ಅದರಲ್ಲಿ ಮೂರಲ್ಲಿ ಬಟ್ಟೆ ಮಾರಾಟ ತಲಾ ಒಂದರಲ್ಲಿ ಆಹಾರ ಪದಾರ್ಥ ಹಾಗೂ ಪುಸ್ತಕಗಳ ಮಾರಾಟ ನಡೆಯುತ್ತಿದೆ. ಇನ್ನೊಂದರಲ್ಲಿ ಆರೋಗ್ಯ ತಪಾಸಣೆ ಆಯೋಜಿಸಲಾಗಿದೆ. ಇನ್ನುಳಿದ ನಾಲ್ಕು ಮಳಿಗೆ ಸಮ್ಮೇಳನಕ್ಕೆ ಬಂದವರ ನೋಂದಣಿಗೆ ಸೀಮಿತವಾಗಿದ್ದವು. ಸಮ್ಮೇಳನದಲ್ಲಿ ಪಾಲ್ಗೊಂಡವರಿಗೆ ಮಧ್ಯಾಹ್ನ ಸಜ್ಜಕ ಮತ್ತು ಪುಲಾವ್ ಮೊಸರು ಬಜ್ಜಿ ಉಣಬಡಿಸಲಾಯಿತು. ನೋಂದಣಿ ವಿವರ: ಜಿಲ್ಲಾ ಸಮ್ಮೇಳನಕ್ಕೆ ಸರ್ಕಾರಿ ನೌಕರರಿಗೆ ಒಒಡಿ ಸೌಲಭ್ಯ ಕಲ್ಪಿಸಲಾಗಿದ್ದು ಸಮ್ಮೇಳನಕ್ಕೆ 850ಕ್ಕೂ ಶಿಕ್ಷಕರು ನೋಂದಣಿ ಮಾಡಿಕೊಂಡಿದ್ದರು. ಆದರೆ ಬಹುತೇಕರು ಕಿಟ್ ಪಡೆದು ಸಮಾರಂಭದಲ್ಲಿ ಕೆಲಕಾಲ ಪಾಲ್ಗೊಂಡಂತೆ ಮಾಡಿ ಮಳಿಗೆಗಳತ್ತ ಹಾದು ಮನೆಗಳತ್ತ ಮುಖ ಮಾಡಿದರು.</p>.<h2>ಮೊದಲ ದಿನ ಮೂರು ಗೋಷ್ಠಿ </h2>.<p>‘ಕಲ್ಲರಳಿ ಹೂವಾಗಿ’ ಗೋಷ್ಠಿಯಲ್ಲಿ ‘ಕಲಬುರಗಿ ಜಿಲ್ಲಾ ಸಾಂಸ್ಕೃತಿಕ ಪರಂಪರೆ’ ಕುರಿತು ಕಲ್ಯಾಣರಾವ ಜಿ.ಪಾಟೀಲ ‘ಕಲಬುರಗಿ ಜಿಲ್ಲಾ ಸಾಹಿತ್ಯಿಕ ನೋಟ’ ಕುರಿತು ಶ್ರೀಶೈಲ ನಾಗರಾಳ ವಿಚಾರ ಮಂಡಿಸಿದರು. ಸಾಹಿತಿ ಸ್ವಾಮಿರಾವ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ‘ಮಾತೆಂಬುದು ಜ್ಯೋತಿರ್ಲಿಂಗ’ ಗೋಷ್ಠಿಯಲ್ಲಿ ‘ಕೀರ್ತನ ಮತ್ತು ತತ್ವಪದಾವಲೋಕ’ ಕುರಿತು ಜಗನ್ನಾಥ ತರನಳ್ಳಿ ಹಾಗೂ ‘ವಚನ ದರ್ಶನ ಮತ್ತು ಭಾರತ ಸಂವಿಧಾನ’ ಒಂದು ಅವಲೋಕನ ಕುರಿತು ಪ್ರೊ.ಸಂಜಯ ಮಾಕಲ್ ವಿಚಾರ ಮಂಡಿಸಿದರು. ಶಾರದಾದೇವಿ ಜಾಧವ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಸದಾನಂದ ಪೆರ್ಲ ಅಧ್ಯಕ್ಷತೆಯ ‘ಕಾವ್ಯಧೇನು’ ಕವಿಗೋಷ್ಠಿಯಲ್ಲಿ ಹಲವು ಕವಿಗಳು ಕವನ ವಾಚಿಸಿದರು. ನರಸಿಂಗರಾವ ಹೇಮನೂರ ಮಹ್ಮದ್ ಅಯಾಜುದ್ದೀನ್ ಪಟೇಲ್ ಅತಿಥಿಗಳಾಗಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>