<p><strong>ಕಲಬುರಗಿ:</strong> ಒಡೆದುಹೋದ ಟೈಲ್ಸ್, ಅಲ್ಲಲ್ಲಿ ಬೆಳೆದ ಹುಲ್ಲು, ಕುರುಚಲು ಗಿಡಗಳು, ಹಾಳಾದ ಕುರ್ಚಿಗಳು, ಅಸ್ವಚ್ಛತೆ ಮತ್ತಿತರ ಕಾರಣಗಳಿಂದಾಗಿ ಇಲ್ಲಿಯ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದ ಗ್ಯಾಲರಿ ಆಕರ್ಷಣೆ ಕಳೆದುಕೊಂಡಿದ್ದು, ಕ್ರೀಡಾಪಟುಗಳು, ಕ್ರೀಡಾಸಕ್ತರನ್ನು ಸೆಳೆಯುವಲ್ಲಿ ವಿಫಲವಾಗಿದೆ. ಸುಮಾರು 30 ವರ್ಷಗಳ ಹಿಂದೆ ನಿರ್ಮಿಸಿರುವ ಈ ಕ್ರೀಡಾಂಗಣದ ಗ್ಯಾಲರಿ ನವೀಕರಣ ಅಥವಾ ದುರಸ್ತಿ ಕಾಣದೇ ಪಾಳುಬಿದ್ದಂತಾಗಿದೆ.</p>.<p>ಕ್ರೀಡಾಂಗಣದಲ್ಲಿರುವ ಮುಖ್ಯ ಕಚೇರಿಯೂ ಹಳೆಯದಾಗಿದೆ. ಟೇಬಲ್ ಟೆನಿಸ್ ಅಂಕಣದ ಕಿಟಕಿಗಳು ಮುರಿದು ಎಷ್ಟೋ ವರ್ಷಗಳಾದರೂ ದುರಸ್ತಿ ಮಾಡಿಸುವ ಗೋಜಿಗೆ ಅಧಿಕಾರಿಗಳು ಮುಂದಾಗಿಲ್ಲ.</p>.<p>‘ಮೂಲಸೌಕರ್ಯ ಕಾಣದ ಕ್ರೀಡಾಂಗಣ, ಹಳೆಯ ಕಟ್ಟಡಗಳು, ಸ್ವಚ್ಛತೆಯ ಕೊರತೆ ಮತ್ತಿತರ ಕಾರಣಗಳಿಂದ ನಮ್ಮ ಮಕ್ಕಳನ್ನು ಇಲ್ಲಿ ತರಬೇತಿಗೆ ಕಳುಹಿಸಲು ಹಿಂದೇಟು ಹಾಕುವಂತಾಗಿದೆ. ಹಲವು ಕೊರತೆ ಗಳಿಂದಾಗಿ ಜಿಲ್ಲೆಯ ಕ್ರೀಡಾಪಟುಗಳಿಗೆ ರಾಜ್ಯ, ರಾಷ್ಟ್ರಮಟ್ಟದಲ್ಲಿ ಸಾಧನೆಗೆ ತೊಡಕಾಗಿದೆ’ ಎಂದು ಪೋಷಕರು ಆರೋಪಿಸುತ್ತಾರೆ.</p>.<p>‘ಇಲ್ಲಿ ವ್ಯವಸ್ಥೆ ಸರಿಯಿಲ್ಲದ್ದರಿಂದ ಮೈಸೂರು, ಬೆಂಗಳೂರಿನವರೇ ಪದಕ ಜಾಸ್ತಿ ಗೆಲ್ಲುತ್ತಾರೆ. ನಮ್ಮವರು ಹಿಂದುಳಿಯುತ್ತಾರೆ. ಅವರ ಎದುರು ಕನಿಷ್ಠ ಪೈಪೋಟಿ ನೀಡುವಷ್ಟಾದರೂ ನಮ್ಮ ಮಕ್ಕಳಿಗೆ ಪ್ರೋತ್ಸಾಹ, ಮೂಲಸೌಕರ್ಯ ಸಿಗಬೇಕಿದೆ’ ಎಂದು ಪೋಷಕರು ಬಯಸುತ್ತಾರೆ.</p>.<p>‘ಮಧುಮೇಹಿಗಳು, ವಯಸ್ಸಾದವರಿಗೆ ಕ್ರೀಡಾಂಗಣದಲ್ಲಿ ವಾಕಿಂಗ್ಗೆ ಅವಕಾಶ ಮಾಡಲಾಗುತ್ತಿದೆ. ಇದು ಕ್ರೀಡಾಪಟುಗಳಿಗೆ ಮಾತ್ರ ಮೀಸಲಾಗಿರ ಬೇಕು’ ಎಂದು ಕೆಲವರು ಪ್ರತಿಪಾದಿಸಿದರು. ಗ್ಯಾಲರಿಗೆ ಆರಂಭದಲ್ಲಿ ಟ್ರ್ಯಾಕ್ ಇರಲಿಲ್ಲ. ಹೀಗಾಗಿ ಇಲ್ಲಿ ರಣಜಿ ಕ್ರಿಕೆಟ್ ಪಂದ್ಯಗಳನ್ನು ಆಡಿಸಲಾಗಿತ್ತು. ಆಗ ಚೆನ್ನಾಗಿದ್ದ ಗ್ಯಾಲರಿ ಬರುಬರುತ್ತಾ ಹಾಳಾಯಿತು. ಆಗಾಗ ಸಣ್ಣ ಸಣ್ಣ ರಿಪೇರಿ ಕೆಲಸ ನಡೆಯುತ್ತದೆ. ಕರಿ ಕಲ್ಲು ಹಾಕಿ ಪಿಚ್ಚಿಂಗ್ ಮಾಡಲಾಗಿದೆ. ಆದರೆ ದೊಡ್ಡಮಟ್ಟದಲ್ಲಿ ನವೀಕರಣ ಆಗಿಲ್ಲ.</p>.<p>‘ಈಚೆಗೆ ಜಿಲ್ಲಾಧಿಕಾರಿಯವರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದರು. ಆಗ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ಗಳು, ‘ಈಗಾಗಲೇ ಅಂದಾಜು ಪಟ್ಟಿ ತಯಾರಿಸಿದ್ದು, ಅನುದಾನ ಬಿಡುಗಡೆಯಾದರೆ ಈಗಿನ ಗ್ಯಾಲರಿಯನ್ನು ನೆಲಸಮ ಮಾಡಿ ಹೊಸದಾಗಿ ನಿರ್ಮಿಸಲಾಗುವುದು’ ಎಂದು ಪ್ರಸ್ತಾಪವಿಟ್ಟಿದ್ದಾರೆ. ಈ ಕುರಿತು ಚರ್ಚಿಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ’ ಎಂದು ಕ್ರೀಡಾ ಇಲಾಖೆಯ ಮೂಲಗಳು ಹೇಳುತ್ತವೆ.</p>.<p>‘ಕ್ರೀಡಾಂಗಣ ಸಮುಚ್ಛಯದಲ್ಲಿರುವ ಕಚೇರಿಯ ಹಳೆಯ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣಕ್ಕೂ ಕೆಆರ್ಐಡಿಎಲ್ ಅಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಸಲ್ಲಿಸಿದ್ದಾರೆ. ಸರ್ಕಾರದಿಂದ ಅನುದಾನ ಬಿಡುಗಡೆಯಾಗಬೇಕಿದೆ’ ಎಂದು ತಿಳಿಸಿವೆ.</p>.<p>ಪೂರಕ ಮಾಹಿತಿ: ಗುಂಡಪ್ಪ ಕರೆಮನೋರ, ತೀರ್ಥಕುಮಾರ ಬೆಳಕೋಟಾ, ನಿಂಗಣ್ಣ ಜಂಬಗಿ, ಮಂಜುನಾಥ ದೊಡಮನಿ</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260525-34-1880926585</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ:</strong> ಒಡೆದುಹೋದ ಟೈಲ್ಸ್, ಅಲ್ಲಲ್ಲಿ ಬೆಳೆದ ಹುಲ್ಲು, ಕುರುಚಲು ಗಿಡಗಳು, ಹಾಳಾದ ಕುರ್ಚಿಗಳು, ಅಸ್ವಚ್ಛತೆ ಮತ್ತಿತರ ಕಾರಣಗಳಿಂದಾಗಿ ಇಲ್ಲಿಯ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದ ಗ್ಯಾಲರಿ ಆಕರ್ಷಣೆ ಕಳೆದುಕೊಂಡಿದ್ದು, ಕ್ರೀಡಾಪಟುಗಳು, ಕ್ರೀಡಾಸಕ್ತರನ್ನು ಸೆಳೆಯುವಲ್ಲಿ ವಿಫಲವಾಗಿದೆ. ಸುಮಾರು 30 ವರ್ಷಗಳ ಹಿಂದೆ ನಿರ್ಮಿಸಿರುವ ಈ ಕ್ರೀಡಾಂಗಣದ ಗ್ಯಾಲರಿ ನವೀಕರಣ ಅಥವಾ ದುರಸ್ತಿ ಕಾಣದೇ ಪಾಳುಬಿದ್ದಂತಾಗಿದೆ.</p>.<p>ಕ್ರೀಡಾಂಗಣದಲ್ಲಿರುವ ಮುಖ್ಯ ಕಚೇರಿಯೂ ಹಳೆಯದಾಗಿದೆ. ಟೇಬಲ್ ಟೆನಿಸ್ ಅಂಕಣದ ಕಿಟಕಿಗಳು ಮುರಿದು ಎಷ್ಟೋ ವರ್ಷಗಳಾದರೂ ದುರಸ್ತಿ ಮಾಡಿಸುವ ಗೋಜಿಗೆ ಅಧಿಕಾರಿಗಳು ಮುಂದಾಗಿಲ್ಲ.</p>.<p>‘ಮೂಲಸೌಕರ್ಯ ಕಾಣದ ಕ್ರೀಡಾಂಗಣ, ಹಳೆಯ ಕಟ್ಟಡಗಳು, ಸ್ವಚ್ಛತೆಯ ಕೊರತೆ ಮತ್ತಿತರ ಕಾರಣಗಳಿಂದ ನಮ್ಮ ಮಕ್ಕಳನ್ನು ಇಲ್ಲಿ ತರಬೇತಿಗೆ ಕಳುಹಿಸಲು ಹಿಂದೇಟು ಹಾಕುವಂತಾಗಿದೆ. ಹಲವು ಕೊರತೆ ಗಳಿಂದಾಗಿ ಜಿಲ್ಲೆಯ ಕ್ರೀಡಾಪಟುಗಳಿಗೆ ರಾಜ್ಯ, ರಾಷ್ಟ್ರಮಟ್ಟದಲ್ಲಿ ಸಾಧನೆಗೆ ತೊಡಕಾಗಿದೆ’ ಎಂದು ಪೋಷಕರು ಆರೋಪಿಸುತ್ತಾರೆ.</p>.<p>‘ಇಲ್ಲಿ ವ್ಯವಸ್ಥೆ ಸರಿಯಿಲ್ಲದ್ದರಿಂದ ಮೈಸೂರು, ಬೆಂಗಳೂರಿನವರೇ ಪದಕ ಜಾಸ್ತಿ ಗೆಲ್ಲುತ್ತಾರೆ. ನಮ್ಮವರು ಹಿಂದುಳಿಯುತ್ತಾರೆ. ಅವರ ಎದುರು ಕನಿಷ್ಠ ಪೈಪೋಟಿ ನೀಡುವಷ್ಟಾದರೂ ನಮ್ಮ ಮಕ್ಕಳಿಗೆ ಪ್ರೋತ್ಸಾಹ, ಮೂಲಸೌಕರ್ಯ ಸಿಗಬೇಕಿದೆ’ ಎಂದು ಪೋಷಕರು ಬಯಸುತ್ತಾರೆ.</p>.<p>‘ಮಧುಮೇಹಿಗಳು, ವಯಸ್ಸಾದವರಿಗೆ ಕ್ರೀಡಾಂಗಣದಲ್ಲಿ ವಾಕಿಂಗ್ಗೆ ಅವಕಾಶ ಮಾಡಲಾಗುತ್ತಿದೆ. ಇದು ಕ್ರೀಡಾಪಟುಗಳಿಗೆ ಮಾತ್ರ ಮೀಸಲಾಗಿರ ಬೇಕು’ ಎಂದು ಕೆಲವರು ಪ್ರತಿಪಾದಿಸಿದರು. ಗ್ಯಾಲರಿಗೆ ಆರಂಭದಲ್ಲಿ ಟ್ರ್ಯಾಕ್ ಇರಲಿಲ್ಲ. ಹೀಗಾಗಿ ಇಲ್ಲಿ ರಣಜಿ ಕ್ರಿಕೆಟ್ ಪಂದ್ಯಗಳನ್ನು ಆಡಿಸಲಾಗಿತ್ತು. ಆಗ ಚೆನ್ನಾಗಿದ್ದ ಗ್ಯಾಲರಿ ಬರುಬರುತ್ತಾ ಹಾಳಾಯಿತು. ಆಗಾಗ ಸಣ್ಣ ಸಣ್ಣ ರಿಪೇರಿ ಕೆಲಸ ನಡೆಯುತ್ತದೆ. ಕರಿ ಕಲ್ಲು ಹಾಕಿ ಪಿಚ್ಚಿಂಗ್ ಮಾಡಲಾಗಿದೆ. ಆದರೆ ದೊಡ್ಡಮಟ್ಟದಲ್ಲಿ ನವೀಕರಣ ಆಗಿಲ್ಲ.</p>.<p>‘ಈಚೆಗೆ ಜಿಲ್ಲಾಧಿಕಾರಿಯವರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದರು. ಆಗ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ಗಳು, ‘ಈಗಾಗಲೇ ಅಂದಾಜು ಪಟ್ಟಿ ತಯಾರಿಸಿದ್ದು, ಅನುದಾನ ಬಿಡುಗಡೆಯಾದರೆ ಈಗಿನ ಗ್ಯಾಲರಿಯನ್ನು ನೆಲಸಮ ಮಾಡಿ ಹೊಸದಾಗಿ ನಿರ್ಮಿಸಲಾಗುವುದು’ ಎಂದು ಪ್ರಸ್ತಾಪವಿಟ್ಟಿದ್ದಾರೆ. ಈ ಕುರಿತು ಚರ್ಚಿಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ’ ಎಂದು ಕ್ರೀಡಾ ಇಲಾಖೆಯ ಮೂಲಗಳು ಹೇಳುತ್ತವೆ.</p>.<p>‘ಕ್ರೀಡಾಂಗಣ ಸಮುಚ್ಛಯದಲ್ಲಿರುವ ಕಚೇರಿಯ ಹಳೆಯ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣಕ್ಕೂ ಕೆಆರ್ಐಡಿಎಲ್ ಅಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಸಲ್ಲಿಸಿದ್ದಾರೆ. ಸರ್ಕಾರದಿಂದ ಅನುದಾನ ಬಿಡುಗಡೆಯಾಗಬೇಕಿದೆ’ ಎಂದು ತಿಳಿಸಿವೆ.</p>.<p>ಪೂರಕ ಮಾಹಿತಿ: ಗುಂಡಪ್ಪ ಕರೆಮನೋರ, ತೀರ್ಥಕುಮಾರ ಬೆಳಕೋಟಾ, ನಿಂಗಣ್ಣ ಜಂಬಗಿ, ಮಂಜುನಾಥ ದೊಡಮನಿ</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260525-34-1880926585</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>