<p><strong>ಕಲಬುರಗಿ</strong>: ಅತಿ ಹೆಚ್ಚು ಅಂಕ ಗಳಿಸಿ, ಎರಡು ಚಿನ್ನದ ಪದಕಗಳನ್ನು ಮಗ ಪಡೆಯುವುದನ್ನು ಕಣ್ಣಾರೆ ಕಾಣಲು ದೂರದ ಮಧ್ಯಪ್ರದೇಶದ ಉಜ್ಜಯಿನಿಯಿಂದ ಬಂದಿದ್ದ ವಿದ್ಯಾರ್ಥಿ ದಿವ್ಯಾಂಶು ಸಕ್ಸೇನಾ ಅವರ ತಂದೆ ಶಿವಕುಮಾರ್ ಸಕ್ಸೇನಾ ಅವರು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಬರುತ್ತಿರುವಾಗ ಮಾರ್ಗಮಧ್ಯೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. </p><p>ತಂದೆಯ ಮರಣದ ಸುದ್ದಿ ಕೇಳಿ ದಿವ್ಯಾಂಶು ಘಟನಾ ಸ್ಥಳಕ್ಕೆ ತೆರಳಿದ್ದರಿಂದ ಚಿನ್ನದ ಪದಕ ಪಡೆಯಲು ಸಾಧ್ಯವಾಗಲಿಲ್ಲ.</p><p>ಮಧ್ಯಪ್ರದೇಶದಿಂದ ಬಂದಿದ್ದ ಶಿವಕುಮಾರ್ ದಂಪತಿ ಮಂಗಳವಾರ ರಾತ್ರಿ ಕಲಬುರಗಿಯಲ್ಲೇ ವಾಸ್ತವ್ಯ ಮಾಡಿದ್ದರು. ಬುಧವಾರ ಬೆಳಿಗ್ಗೆ ಆಟೊದಲ್ಲಿ ಕಡಗಂಚಿಯ ವಿ.ವಿ.ಯತ್ತ ಹೋಗುತ್ತಿದ್ದ ಸಂದರ್ಭದಲ್ಲಿ ಆಳಂದ ರಸ್ತೆಯ ಪಟ್ಟಣ ಕ್ರಾಸ್ ಬಳಿ ಆಟೊ ಪಲ್ಟಿಯಾಯಿತು. ಶಿವಕುಮಾರ್ ಸಕ್ಸೇನಾ ಸ್ಥಳದಲ್ಲೇ ಮೃತಪಟ್ಟರು. ತಾಯಿ ಮಾಲತಿ ಸಕ್ಸೇನಾ ಅವರಿಗೆ ಗಾಯಗಳಾಗಿವೆ.</p><p>ಜಿಲ್ಲೆಯ ಆಳಂದ ತಾಲ್ಲೂಕಿನ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಬುಧವಾರ 10ನೇ ಘಟಿಕೋತ್ಸವ ನಡೆದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ</strong>: ಅತಿ ಹೆಚ್ಚು ಅಂಕ ಗಳಿಸಿ, ಎರಡು ಚಿನ್ನದ ಪದಕಗಳನ್ನು ಮಗ ಪಡೆಯುವುದನ್ನು ಕಣ್ಣಾರೆ ಕಾಣಲು ದೂರದ ಮಧ್ಯಪ್ರದೇಶದ ಉಜ್ಜಯಿನಿಯಿಂದ ಬಂದಿದ್ದ ವಿದ್ಯಾರ್ಥಿ ದಿವ್ಯಾಂಶು ಸಕ್ಸೇನಾ ಅವರ ತಂದೆ ಶಿವಕುಮಾರ್ ಸಕ್ಸೇನಾ ಅವರು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಬರುತ್ತಿರುವಾಗ ಮಾರ್ಗಮಧ್ಯೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. </p><p>ತಂದೆಯ ಮರಣದ ಸುದ್ದಿ ಕೇಳಿ ದಿವ್ಯಾಂಶು ಘಟನಾ ಸ್ಥಳಕ್ಕೆ ತೆರಳಿದ್ದರಿಂದ ಚಿನ್ನದ ಪದಕ ಪಡೆಯಲು ಸಾಧ್ಯವಾಗಲಿಲ್ಲ.</p><p>ಮಧ್ಯಪ್ರದೇಶದಿಂದ ಬಂದಿದ್ದ ಶಿವಕುಮಾರ್ ದಂಪತಿ ಮಂಗಳವಾರ ರಾತ್ರಿ ಕಲಬುರಗಿಯಲ್ಲೇ ವಾಸ್ತವ್ಯ ಮಾಡಿದ್ದರು. ಬುಧವಾರ ಬೆಳಿಗ್ಗೆ ಆಟೊದಲ್ಲಿ ಕಡಗಂಚಿಯ ವಿ.ವಿ.ಯತ್ತ ಹೋಗುತ್ತಿದ್ದ ಸಂದರ್ಭದಲ್ಲಿ ಆಳಂದ ರಸ್ತೆಯ ಪಟ್ಟಣ ಕ್ರಾಸ್ ಬಳಿ ಆಟೊ ಪಲ್ಟಿಯಾಯಿತು. ಶಿವಕುಮಾರ್ ಸಕ್ಸೇನಾ ಸ್ಥಳದಲ್ಲೇ ಮೃತಪಟ್ಟರು. ತಾಯಿ ಮಾಲತಿ ಸಕ್ಸೇನಾ ಅವರಿಗೆ ಗಾಯಗಳಾಗಿವೆ.</p><p>ಜಿಲ್ಲೆಯ ಆಳಂದ ತಾಲ್ಲೂಕಿನ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಬುಧವಾರ 10ನೇ ಘಟಿಕೋತ್ಸವ ನಡೆದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>