<p><strong>ಕಲಬುರಗಿ</strong>: ಪ್ರಮುಖ ಮಹಾನಗರಗಳನ್ನು ಸಂಪರ್ಕಿಸುವ ಸುವರ್ಣ ಚತುಷ್ಪಥ (ಗೋಲ್ಡನ್ ಕ್ವಾಡ್ರಿಲ್ಯಾಟರಲ್) ಯೋಜನೆಯಡಿ ಬರುವ ಚೆನ್ನೈ–ಮುಂಬೈ ನಡುವಿನ ರೈಲು ಮಾರ್ಗದ ಗುಂತಕಲ್–ವಾಡಿ ನಡುವೆ 3–4ನೇ ರೈಲು ಹಳಿ ನಿರ್ಮಾಣಕ್ಕೆ ಮೇ 5ರಂದು ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.</p>.<p>ಯೋಜನೆ ಜಾರಿಯಿಂದ ಈ ಭಾಗದ ಕೈಗಾರಿಕಾ ರೈಲ್ವೆ ಸಂಪರ್ಕ, ಸರಕು ಸಾಗಣೆ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆಯಲಿದೆ. ಪ್ರಯಾಣಿಕ ಹಾಗೂ ಸರಕು ಸಾಗಣೆ ರೈಲುಗಳ ದಟ್ಟಣೆ ಹಾಗೂ ಪರಿಸರ ಮಾಲಿನ್ಯವೂ ತಗ್ಗಲಿದೆ.</p>.<p>ಈ ಯೋಜನೆಯಡಿ 230 ಕಿ.ಮೀ ಹಳಿ ನಿರ್ಮಾಣ ಮಾಡಲಾಗುತ್ತದೆ. ಅಂದಾಜು ಯೋಜನಾ ವೆಚ್ಚ ₹4,758 ಕೋಟಿ ಆಗಿದೆ. ಯೋಜನೆ 2 ದೊಡ್ಡ ಸೇತುವೆ, 35 ಪ್ರಮುಖ ಹಾಗೂ 382 ಸಣ್ಣ ಸೇತುವೆಗಳ ನಿರ್ಮಾಣವನ್ನೂ ಒಳಗೊಂಡಿದೆ. 4 ವರ್ಷಗಳಲ್ಲಿ ಕಾಮಗಾರಿ ಮುಗಿಸುವ ಗುರಿ ಇಟ್ಟುಕೊಳ್ಳಲಾಗಿದೆ. 156 ಲಕ್ಷ ಮಾನವ ದಿನಗಳು ಉದ್ಯೋಗ ಸೃಷ್ಟಿಯಾಗಲಿದೆ.</p>.<p>ವಿದ್ಯುದ್ದೀಕರಣ ಮಾರ್ಗ ಇದಾಗಿರುವುದರಿಂದ ಪ್ರತಿ ವರ್ಷ 36 ಕೋಟಿ ಕೆ.ಜಿ ಕಾರ್ಬನ್ ಡೈ ಆಕ್ಸೈಡ್ ಬಿಡುಗಡೆ ಆಗುವುದು ನಿಂತು, ಪರಿಸರ ಮಾಲಿನ್ಯ ಭಾರಿ ಪ್ರಮಾಣದಲ್ಲಿ ತಗ್ಗಲಿದೆ.</p>.<p>ಯಾವ ಜಿಲ್ಲೆಗಳಿಗೆ ಅನುಕೂಲ?: ನೀತಿ ಆಯೋಗ ಹಿಂದುಳಿದ ಜಿಲ್ಲೆಗಳು ಎಂದು ಗುರುತಿಸಿರುವ ರಾಯಚೂರು, ಯಾದಗಿರಿ, ಕಲ್ಯಾಣ ಕರ್ನಾಟಕದ ದೊಡ್ಡ ಜಿಲ್ಲೆಯಾದ ಕಲಬುರಗಿ (ಕರ್ನಾಟಕ), ಅನಂತಪುರ, ಕರ್ನೂಲ್ (ಆಂಧ್ರಪ್ರದೇಶ), ನಾರಾಯಣಪೇಟೆ (ತೆಲಂಗಾಣ) ಜಿಲ್ಲೆಗಳು ಯೋಜನೆಯ ಲಾಭ ಪಡೆಯಲಿವೆ.</p>.<p>ಆರ್ಟಿಪಿಎಸ್, ವೈಟಿಪಿಎಸ್ ಹಾಗೂ ಬಿಟಿಪಿಎಸ್ ಅವಶ್ಯಕತೆಗಳ ಪೂರೈಕೆಗೂ ಅನುಕೂಲವಾಗಲಿದೆ.</p>.<p>ಪ್ರವಾಸೋದ್ಯಮಕ್ಕೆ ಉತ್ತೇಜನ: ಯೋಜನೆಯಿಂದ ಈ ಮಾರ್ಗದಲ್ಲಿ ಬರುವ ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠ (ಕರ್ನೂಲ್ ಜಿಲ್ಲೆ), ಕಸಪುರಂನ ನೆಟ್ಟಿಕಂಟಿ ಆಂಜನೇಯ ದೇವಾಲಯ (ಅನಂತಪುರ ಜಿಲ್ಲೆ), ರಾಯಚೂರಿನ ಸ್ಥಳಗಳು (ಕರ್ನಾಟಕ) ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ಸಂಪರ್ಕ ಇನ್ನಷ್ಟು ಸುಲಭವಾಗಲಿದೆ.</p>.<p>ಫ್ಲಾಟ್ ಫಾರಂ ನಿರ್ಮಾಣ: 3 ಮತ್ತು 4ನೇ ಹಳಿ ನಿರ್ಮಾಣದ ಕಾರಣಕ್ಕೆ ಈ ಮಾರ್ಗದ ಕೆಲ ನಿಲ್ದಾಣಗಳಲ್ಲಿ ಹೆಚ್ಚುವರಿ ಫ್ಲಾಟ್ ಫಾರಂ ನಿರ್ಮಾಣ ಮಾಡಲಾಗುತ್ತದೆ. ಇದರಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ನಿಲ್ದಾಣಗಳು ಸಹ ಮೂಲಸೌಕರ್ಯದ ಮೂಲಕ ಹೊಸ ಸ್ವರೂಪ ಪಡೆಯಲಿವೆ. ಹೆಚ್ಚು ರೈಲುಗಳ ಓಡಾಟ ಸಾಧ್ಯವಾಗಲಿದೆ.</p>.<p>ಕಲಬುರಗಿ–ಪುಣೆ ಮಾರ್ಗದಲ್ಲಿ ಸರ್ವೆ: ಮುಂದಿನ ಹಂತದಲ್ಲಿ ಕಲಬುರಗಿ–ಪುಣೆ ನಡುವೆ 3 ಮತ್ತು 4ನೇ ಹಳಿ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಸರ್ವೆ ಕಾರ್ಯ ಪ್ರಗತಿಯಲ್ಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ</strong>: ಪ್ರಮುಖ ಮಹಾನಗರಗಳನ್ನು ಸಂಪರ್ಕಿಸುವ ಸುವರ್ಣ ಚತುಷ್ಪಥ (ಗೋಲ್ಡನ್ ಕ್ವಾಡ್ರಿಲ್ಯಾಟರಲ್) ಯೋಜನೆಯಡಿ ಬರುವ ಚೆನ್ನೈ–ಮುಂಬೈ ನಡುವಿನ ರೈಲು ಮಾರ್ಗದ ಗುಂತಕಲ್–ವಾಡಿ ನಡುವೆ 3–4ನೇ ರೈಲು ಹಳಿ ನಿರ್ಮಾಣಕ್ಕೆ ಮೇ 5ರಂದು ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.</p>.<p>ಯೋಜನೆ ಜಾರಿಯಿಂದ ಈ ಭಾಗದ ಕೈಗಾರಿಕಾ ರೈಲ್ವೆ ಸಂಪರ್ಕ, ಸರಕು ಸಾಗಣೆ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆಯಲಿದೆ. ಪ್ರಯಾಣಿಕ ಹಾಗೂ ಸರಕು ಸಾಗಣೆ ರೈಲುಗಳ ದಟ್ಟಣೆ ಹಾಗೂ ಪರಿಸರ ಮಾಲಿನ್ಯವೂ ತಗ್ಗಲಿದೆ.</p>.<p>ಈ ಯೋಜನೆಯಡಿ 230 ಕಿ.ಮೀ ಹಳಿ ನಿರ್ಮಾಣ ಮಾಡಲಾಗುತ್ತದೆ. ಅಂದಾಜು ಯೋಜನಾ ವೆಚ್ಚ ₹4,758 ಕೋಟಿ ಆಗಿದೆ. ಯೋಜನೆ 2 ದೊಡ್ಡ ಸೇತುವೆ, 35 ಪ್ರಮುಖ ಹಾಗೂ 382 ಸಣ್ಣ ಸೇತುವೆಗಳ ನಿರ್ಮಾಣವನ್ನೂ ಒಳಗೊಂಡಿದೆ. 4 ವರ್ಷಗಳಲ್ಲಿ ಕಾಮಗಾರಿ ಮುಗಿಸುವ ಗುರಿ ಇಟ್ಟುಕೊಳ್ಳಲಾಗಿದೆ. 156 ಲಕ್ಷ ಮಾನವ ದಿನಗಳು ಉದ್ಯೋಗ ಸೃಷ್ಟಿಯಾಗಲಿದೆ.</p>.<p>ವಿದ್ಯುದ್ದೀಕರಣ ಮಾರ್ಗ ಇದಾಗಿರುವುದರಿಂದ ಪ್ರತಿ ವರ್ಷ 36 ಕೋಟಿ ಕೆ.ಜಿ ಕಾರ್ಬನ್ ಡೈ ಆಕ್ಸೈಡ್ ಬಿಡುಗಡೆ ಆಗುವುದು ನಿಂತು, ಪರಿಸರ ಮಾಲಿನ್ಯ ಭಾರಿ ಪ್ರಮಾಣದಲ್ಲಿ ತಗ್ಗಲಿದೆ.</p>.<p>ಯಾವ ಜಿಲ್ಲೆಗಳಿಗೆ ಅನುಕೂಲ?: ನೀತಿ ಆಯೋಗ ಹಿಂದುಳಿದ ಜಿಲ್ಲೆಗಳು ಎಂದು ಗುರುತಿಸಿರುವ ರಾಯಚೂರು, ಯಾದಗಿರಿ, ಕಲ್ಯಾಣ ಕರ್ನಾಟಕದ ದೊಡ್ಡ ಜಿಲ್ಲೆಯಾದ ಕಲಬುರಗಿ (ಕರ್ನಾಟಕ), ಅನಂತಪುರ, ಕರ್ನೂಲ್ (ಆಂಧ್ರಪ್ರದೇಶ), ನಾರಾಯಣಪೇಟೆ (ತೆಲಂಗಾಣ) ಜಿಲ್ಲೆಗಳು ಯೋಜನೆಯ ಲಾಭ ಪಡೆಯಲಿವೆ.</p>.<p>ಆರ್ಟಿಪಿಎಸ್, ವೈಟಿಪಿಎಸ್ ಹಾಗೂ ಬಿಟಿಪಿಎಸ್ ಅವಶ್ಯಕತೆಗಳ ಪೂರೈಕೆಗೂ ಅನುಕೂಲವಾಗಲಿದೆ.</p>.<p>ಪ್ರವಾಸೋದ್ಯಮಕ್ಕೆ ಉತ್ತೇಜನ: ಯೋಜನೆಯಿಂದ ಈ ಮಾರ್ಗದಲ್ಲಿ ಬರುವ ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠ (ಕರ್ನೂಲ್ ಜಿಲ್ಲೆ), ಕಸಪುರಂನ ನೆಟ್ಟಿಕಂಟಿ ಆಂಜನೇಯ ದೇವಾಲಯ (ಅನಂತಪುರ ಜಿಲ್ಲೆ), ರಾಯಚೂರಿನ ಸ್ಥಳಗಳು (ಕರ್ನಾಟಕ) ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ಸಂಪರ್ಕ ಇನ್ನಷ್ಟು ಸುಲಭವಾಗಲಿದೆ.</p>.<p>ಫ್ಲಾಟ್ ಫಾರಂ ನಿರ್ಮಾಣ: 3 ಮತ್ತು 4ನೇ ಹಳಿ ನಿರ್ಮಾಣದ ಕಾರಣಕ್ಕೆ ಈ ಮಾರ್ಗದ ಕೆಲ ನಿಲ್ದಾಣಗಳಲ್ಲಿ ಹೆಚ್ಚುವರಿ ಫ್ಲಾಟ್ ಫಾರಂ ನಿರ್ಮಾಣ ಮಾಡಲಾಗುತ್ತದೆ. ಇದರಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ನಿಲ್ದಾಣಗಳು ಸಹ ಮೂಲಸೌಕರ್ಯದ ಮೂಲಕ ಹೊಸ ಸ್ವರೂಪ ಪಡೆಯಲಿವೆ. ಹೆಚ್ಚು ರೈಲುಗಳ ಓಡಾಟ ಸಾಧ್ಯವಾಗಲಿದೆ.</p>.<p>ಕಲಬುರಗಿ–ಪುಣೆ ಮಾರ್ಗದಲ್ಲಿ ಸರ್ವೆ: ಮುಂದಿನ ಹಂತದಲ್ಲಿ ಕಲಬುರಗಿ–ಪುಣೆ ನಡುವೆ 3 ಮತ್ತು 4ನೇ ಹಳಿ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಸರ್ವೆ ಕಾರ್ಯ ಪ್ರಗತಿಯಲ್ಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>