ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ ಡಾ.ಬಸವರಾಜ ಡೋಣೂರ ಅಧ್ಯಕ್ಷತೆ ವಹಿಸಿದ್ದರು. ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಉಪಾಧ್ಯಕ್ಷೆ ಹೇಮಾ ಕೊಡ್ಡಣ್ಣನವರ್ ಮಾತನಾಡಿದರು.ಸಾಹಿತಿಗಳಾದ ಎ.ಕೆ.ರಾಮೇಶ್ವರ ಅವರಿಗೆ ಜೀವಮಾನ ಸಾಧನೆ ಸಮ್ಮಾನ ಮತ್ತು ಡಾ.ಸರಸ್ವತಿ ಚಿಮ್ಮಲಗಿ ಅವರಿಗೆ ಸರಸ್ವತಿ ಸಮ್ಮಾನ ಗ್ರಂಥ ತುಲಾಭಾರ ಮಾಡಲಾಯಿತು.ವಿಶಾಲಾಕ್ಷಿ ಕರಡ್ಡಿ, ಮಹಿಪಾಲರೆಡ್ಡಿ ಮನ್ನೂರ, ಸಿ.ಎನ್.ಬಾಬಳಗಾಂವ, ಎಚ್.ಎನ್. ಮಹಾಬಲೇಶ್ವರಪ್ಪ ಅವರಿಗೆ ಯುಗದರ್ಶಿನಿ ಪ್ರಶಸ್ತಿ ನೀಡಲಾಯಿತು. ವಿವಿಧ ಕ್ಷೇತ್ರಗಳ ಸಾಧಕರಿಗೆ ಯುಗದರ್ಶಿನಿ ಪುರಸ್ಕಾರ ಮತ್ತು ಸಾವಿತ್ರಿಬಾಯಿ ಫುಲೆ ಪುರಸ್ಕಾರ ನೀಡಿ ಸನ್ಮಾನ ಮಾಡಲಾಯಿತು.