<p>ಕಲಬುರಗಿ: ವ್ಯಾಪಾರಿಯೊಬ್ಬರ ಮನೆ ಬೀಗ ಮುರಿದು ₹32.17 ಲಕ್ಷ ಮೌಲ್ಯದ 224.08 ಗ್ರಾಂ ಬಂಗಾರದ ಆಭರಣಗಳು ಮತ್ತು ₹55 ಸಾವಿರ ಕಳುವಾದ ಘಟನೆ ಪೀರಬಂಗಾಲಿ ದರ್ಗಾ ಹತ್ತಿರದ ಖಮರ್ ಕಾಲೊನಿಯಲ್ಲಿ ನಡೆದಿದೆ.</p>.<p>ರಫೀಕ್ ಮೊಹ್ಮದ ರುಕ್ಮುದ್ದೀನ್ ಅವರ ಮನೆಯಲ್ಲಿ ಏ.24/25ರ ಮಧ್ಯರಾತ್ರಿ ಕಳ್ಳತನ ನಡೆದಿದೆ. ರಫೀಕ್ ಅಣ್ಣನ ಹಾರ್ಟ್ ಚೆಕ್ಅಪ್ ಮಾಡಿಸಲು ಏ.24ರಂದು ರಾತ್ರಿ ಪತ್ನಿಯೊಂದಿಗೆ ಮನೆ ಕೀಲಿ ಹಾಕಿಕೊಂಡು ಬೆಂಗಳೂರಿಗೆ ಹೋದಾಗ ಘಟನೆ ನಡೆದಿದೆ.</p>.<p>ಆಲಮಾರಿಯಲ್ಲಿದ್ದ 42.79 ಗ್ರಾಂನ 4 ಬಂಗಾರದ ಬಳೆ, 45.02 ಗ್ರಾಂ ಡಿಸೈನ್ ಬಳೆ, 10.09 ಗ್ರಾಂ ಚಿನ್ನದ ಚೈನ್ ಜೊತೆಗೆ ಉಂಗುರಗಳು, ಪೆಂಡೆಂಟ್ ಸೆಟ್, ಖಡೆ, ಸರ, ಇಯರ್ ರಿಂಗ್ಸ್, ಲಾಕೆಟ್ ಸೇರಿದಂತೆ ಒಟ್ಟು 224.08 ಗ್ರಾಂ ಬಂಗಾರದ ಆಭರಣಗಳು ಮತ್ತು ನಗದು ಕಳವಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತು ರೋಜಾ ಪೊಲೀಸ್ ಠಾಣೆಯಲ್ಲಿ ಭಾನುವಾರ ಪ್ರಕರಣ ದಾಖಲಾಗಿದೆ.</p>.<p>ಕಲಬುರಗಿ: ಸಮೀಪದ ಬೇಲೂರ (ಜೆ) ಹತ್ತಿರದ ಇಟ್ಟಂಗಿ ಬಟ್ಟಿಯಲ್ಲಿ ಕೂಲಿ ಕೆಲಸದ ಜೊತೆಗೆ ಹೈನುಗಾರಿಕೆಗೆಂದು ಸಾಕಿದ್ದ ಮೂರು ಆಕಳುಗಳು ಕಳುವಾದ ಕುರಿತು ಸಬರ್ಬನ್ ಪೊಲೀಸ್ ಠಾಣೆಯಲ್ಲಿ ಭಾನುವಾರ ಪ್ರಕರಣ ದಾಖಲಾಗಿದೆ.</p>.<p>ಆಳಂದ ತಾಲ್ಲೂಕಿನ ಹಿತ್ತಲ ಶಿರೂರ ಗ್ರಾಮದ ಹುಸೇನಬಾಷಾ ಅತ್ತಾರ ಅವರು ಹೆಂಡತಿ ಮಕ್ಕಳೊಂದಿಗೆ ಬೇಲೂರ (ಜೆ) ಹತ್ತಿರದ ಇಟ್ಟಂಗಿ ಬಟ್ಟಿಯಲ್ಲಿ ವಾಸವಾಗಿದ್ದಾರೆ. ಮನೆ ಪಕ್ಕದ ಪತ್ರಾಸ್ ಶೆಡ್ ಹತ್ತಿರ ಏ.24ರಂದು ರಾತ್ರಿ ಕಟ್ಟಿದ ಹುಸೇನಬಾಷಾ ಅವರ ಆಕಳುಗಳು ಕಳುವಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260429-34-1206083675</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಲಬುರಗಿ: ವ್ಯಾಪಾರಿಯೊಬ್ಬರ ಮನೆ ಬೀಗ ಮುರಿದು ₹32.17 ಲಕ್ಷ ಮೌಲ್ಯದ 224.08 ಗ್ರಾಂ ಬಂಗಾರದ ಆಭರಣಗಳು ಮತ್ತು ₹55 ಸಾವಿರ ಕಳುವಾದ ಘಟನೆ ಪೀರಬಂಗಾಲಿ ದರ್ಗಾ ಹತ್ತಿರದ ಖಮರ್ ಕಾಲೊನಿಯಲ್ಲಿ ನಡೆದಿದೆ.</p>.<p>ರಫೀಕ್ ಮೊಹ್ಮದ ರುಕ್ಮುದ್ದೀನ್ ಅವರ ಮನೆಯಲ್ಲಿ ಏ.24/25ರ ಮಧ್ಯರಾತ್ರಿ ಕಳ್ಳತನ ನಡೆದಿದೆ. ರಫೀಕ್ ಅಣ್ಣನ ಹಾರ್ಟ್ ಚೆಕ್ಅಪ್ ಮಾಡಿಸಲು ಏ.24ರಂದು ರಾತ್ರಿ ಪತ್ನಿಯೊಂದಿಗೆ ಮನೆ ಕೀಲಿ ಹಾಕಿಕೊಂಡು ಬೆಂಗಳೂರಿಗೆ ಹೋದಾಗ ಘಟನೆ ನಡೆದಿದೆ.</p>.<p>ಆಲಮಾರಿಯಲ್ಲಿದ್ದ 42.79 ಗ್ರಾಂನ 4 ಬಂಗಾರದ ಬಳೆ, 45.02 ಗ್ರಾಂ ಡಿಸೈನ್ ಬಳೆ, 10.09 ಗ್ರಾಂ ಚಿನ್ನದ ಚೈನ್ ಜೊತೆಗೆ ಉಂಗುರಗಳು, ಪೆಂಡೆಂಟ್ ಸೆಟ್, ಖಡೆ, ಸರ, ಇಯರ್ ರಿಂಗ್ಸ್, ಲಾಕೆಟ್ ಸೇರಿದಂತೆ ಒಟ್ಟು 224.08 ಗ್ರಾಂ ಬಂಗಾರದ ಆಭರಣಗಳು ಮತ್ತು ನಗದು ಕಳವಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತು ರೋಜಾ ಪೊಲೀಸ್ ಠಾಣೆಯಲ್ಲಿ ಭಾನುವಾರ ಪ್ರಕರಣ ದಾಖಲಾಗಿದೆ.</p>.<p>ಕಲಬುರಗಿ: ಸಮೀಪದ ಬೇಲೂರ (ಜೆ) ಹತ್ತಿರದ ಇಟ್ಟಂಗಿ ಬಟ್ಟಿಯಲ್ಲಿ ಕೂಲಿ ಕೆಲಸದ ಜೊತೆಗೆ ಹೈನುಗಾರಿಕೆಗೆಂದು ಸಾಕಿದ್ದ ಮೂರು ಆಕಳುಗಳು ಕಳುವಾದ ಕುರಿತು ಸಬರ್ಬನ್ ಪೊಲೀಸ್ ಠಾಣೆಯಲ್ಲಿ ಭಾನುವಾರ ಪ್ರಕರಣ ದಾಖಲಾಗಿದೆ.</p>.<p>ಆಳಂದ ತಾಲ್ಲೂಕಿನ ಹಿತ್ತಲ ಶಿರೂರ ಗ್ರಾಮದ ಹುಸೇನಬಾಷಾ ಅತ್ತಾರ ಅವರು ಹೆಂಡತಿ ಮಕ್ಕಳೊಂದಿಗೆ ಬೇಲೂರ (ಜೆ) ಹತ್ತಿರದ ಇಟ್ಟಂಗಿ ಬಟ್ಟಿಯಲ್ಲಿ ವಾಸವಾಗಿದ್ದಾರೆ. ಮನೆ ಪಕ್ಕದ ಪತ್ರಾಸ್ ಶೆಡ್ ಹತ್ತಿರ ಏ.24ರಂದು ರಾತ್ರಿ ಕಟ್ಟಿದ ಹುಸೇನಬಾಷಾ ಅವರ ಆಕಳುಗಳು ಕಳುವಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260429-34-1206083675</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>