<p><strong>ಕಲಬುರಗಿ:</strong> ಸರ್ದಾರ್ ವಲ್ಲಭಭಾಯಿ ಪಟೇಲ್ ಯೋಜನೆಯ ಹಂತ–1ರಲ್ಲಿ 30x40 ನಿವೇಶನ ಕೊಡಿಸುವುದಾಗಿ ವ್ಯಕ್ತಿಯೊಬ್ಬರಿಗೆ ₹35 ಲಕ್ಷ ವಂಚಿಸಿದ ಆರೋಪದಡಿ ತಾಯಿ–ಮಗನ ವಿರುದ್ಧ ಚೌಕ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.</p>.<p>ನಗರದ ಮುಸ್ಲಿಂ ಚೌಕನ ಮೋಮಿನಪುರದ ಬಟ್ಟೆ ವ್ಯಾಪಾರಿ ನಸೀರುದ್ದೀನ್ ಸತ್ತಾರ ವಂಚನೆಗೆ ಒಳಗಾದವರು.</p>.<p>‘ಸೈಯದ್ ಫಾರೂಕ್ ಹಾಗೂ ಅವರ ತಾಯಿ ಶಮೀಮ್ಬಾನು 15 ವರ್ಷಗಳಿಂದ ಪರಿಚಯ. 2023ರ ಅಕ್ಟೋಬರ್ 20ರಂದು ನಮ್ಮ ಮನೆಗೆ ಬಂದಾಗ ಕಲಬುರಗಿ ಜಿಡಿಎದಲ್ಲಿ ಅಧಿಕಾರಿಗಳ ಪರಿಚಯವಿದ್ದು, ಪಟೇಲ್ ಯೋಜನೆಯ ಹಂತ –1ರಲ್ಲಿ ₹35 ಲಕ್ಷಕ್ಕೆ 30x40 ನಿವೇಶನ ಕೊಡಿಸುವುದಾಗಿ ನಂಬಿಸಿದ್ದರು. ಬಳಿಕ ಹಂತ ಹಂತವಾಗಿ ಚೆಕ್ ಹಾಗೂ ಆರ್ಟಿಜಿಎಸ್ ಮೂಲಕ ₹35 ಲಕ್ಷ ಹಣ ಕೊಟ್ಟಿದ್ದೆ. ಆದರೆ ನಿವೇಶನಕ್ಕಾಗಿ ಕಾಯುತ್ತಿದ್ದೆ. ತಾಯಿ–ಮಗ ಇಬ್ಬರೂ ನಿವೇಶನ ತೋರಿಸದೇ ಕಾಲಹರಣ ಮಾಡುತ್ತಿದ್ದರು. ನಾನೇ ಜಿಡಿಎಗೆ ಹೋಗಿ ವಿಚಾರಿಸಿದಾಗ ಅಂಥ ಯಾವುದೇ ಯೋಜನೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಹೀಗಾಗಿ ನಿವೇಶನ ಕೊಡಿಸುವುದಾಗಿ ₹35 ಲಕ್ಷ ಹಣ ಪಡೆದು ಮೋಸ ಮಾಡಿದ ಇಬ್ಬರ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ನಸೀರುದ್ದೀನ್ ಸತ್ತಾರ ಒತ್ತಾಯಿಸಿದ್ದಾರೆ.</p>.<p>ಈ ದೂರಿನನ್ವಯ ಸೈಯದ್ ಫಾರೂಕ್ ಹಾಗೂ ಅವರ ತಾಯಿ ಶಮೀಮ್ಬಾನು ವಿರುದ್ಧ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><strong>9 ಎಮ್ಮೆ ಹಾಗೂ 10 ಕರುಗಳ ರಕ್ಷಣೆ</strong></p>.<p><strong>ಕಲಬುರಗಿ</strong>: ಗೂಡ್ಸ್ ವಾಹನವೊಂದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 9 ಎಮ್ಮೆ ಹಾಗೂ 10 ಎಮ್ಮೆ ಕರುಗಳನ್ನು ಪೊಲೀಸರು ರಕ್ಷಿಸಿದ್ದಾರೆ.</p>.<p>ಜಾನುವಾರುಗಳ ಸಾಗಣೆ ಬಳಸಿದ್ದ ₹5 ಲಕ್ಷ ಮೌಲ್ಯದ ವಾಹನ ಜಪ್ತಿ ಮಾಡಿದ್ದಾರೆ. ದನಗಳನ್ನು ಗೋಶಾಲೆಗೆ ರವಾನಿಸಿದ್ದಾರೆ.</p>.<p>ಜಾನುವಾರುಗಳ ಅಕ್ರಮ ಸಾಗಣೆಗೆ ಸಂಬಂಧಿಸಿದಂತೆ ವಾಹನದ ಚಾಲಕ ಹಾಗೂ ದನಗಳ ಮಾಲೀಕನ ವಿರುದ್ಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><strong>8 ಮಂದಿ ವಿರುದ್ಧ ಕ್ರಮ</strong></p>.<p><strong>ಕಲಬುರಗಿ:</strong> ನಗರದ ಹೊರವಲಯದ ಹಾಗರಗಾದಿಂದ ಭೂಪಾಲ ತೆಗನೂರ ಗ್ರಾಮದತ್ತ ಹೋಗುವ ದಾರಿಯಲ್ಲಿ ಇಸ್ಫೀಟ್ ಜೂಜಾಟದಲ್ಲಿ ತೊಡಗಿದ್ದ ಗುಂಪಿನ ಮೇಲೆ ದಾಳಿ ನಡೆಸಿರುವ ಪೊಲೀಸರು, 8 ಮಂದಿ ವಿರುದ್ಧ ಕ್ರಮಕೈಗೊಂಡಿದ್ದಾರೆ.</p>.<p>ಬಂಧಿತ ಆರೋಪಿಗಳಿಂದ ಜೂಜಾಟದ ಪಣಕ್ಕೆ ಹಚ್ಚಿದ್ದ ₹2,540 ಸೇರಿದಂತೆ ಒಟ್ಟು ₹11,940 ಜಪ್ತಿ ಮಾಡಿಕೊಂಡಿದ್ದಾರೆ. ಈ ಕುರಿತು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260526-34-1711811831</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ:</strong> ಸರ್ದಾರ್ ವಲ್ಲಭಭಾಯಿ ಪಟೇಲ್ ಯೋಜನೆಯ ಹಂತ–1ರಲ್ಲಿ 30x40 ನಿವೇಶನ ಕೊಡಿಸುವುದಾಗಿ ವ್ಯಕ್ತಿಯೊಬ್ಬರಿಗೆ ₹35 ಲಕ್ಷ ವಂಚಿಸಿದ ಆರೋಪದಡಿ ತಾಯಿ–ಮಗನ ವಿರುದ್ಧ ಚೌಕ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.</p>.<p>ನಗರದ ಮುಸ್ಲಿಂ ಚೌಕನ ಮೋಮಿನಪುರದ ಬಟ್ಟೆ ವ್ಯಾಪಾರಿ ನಸೀರುದ್ದೀನ್ ಸತ್ತಾರ ವಂಚನೆಗೆ ಒಳಗಾದವರು.</p>.<p>‘ಸೈಯದ್ ಫಾರೂಕ್ ಹಾಗೂ ಅವರ ತಾಯಿ ಶಮೀಮ್ಬಾನು 15 ವರ್ಷಗಳಿಂದ ಪರಿಚಯ. 2023ರ ಅಕ್ಟೋಬರ್ 20ರಂದು ನಮ್ಮ ಮನೆಗೆ ಬಂದಾಗ ಕಲಬುರಗಿ ಜಿಡಿಎದಲ್ಲಿ ಅಧಿಕಾರಿಗಳ ಪರಿಚಯವಿದ್ದು, ಪಟೇಲ್ ಯೋಜನೆಯ ಹಂತ –1ರಲ್ಲಿ ₹35 ಲಕ್ಷಕ್ಕೆ 30x40 ನಿವೇಶನ ಕೊಡಿಸುವುದಾಗಿ ನಂಬಿಸಿದ್ದರು. ಬಳಿಕ ಹಂತ ಹಂತವಾಗಿ ಚೆಕ್ ಹಾಗೂ ಆರ್ಟಿಜಿಎಸ್ ಮೂಲಕ ₹35 ಲಕ್ಷ ಹಣ ಕೊಟ್ಟಿದ್ದೆ. ಆದರೆ ನಿವೇಶನಕ್ಕಾಗಿ ಕಾಯುತ್ತಿದ್ದೆ. ತಾಯಿ–ಮಗ ಇಬ್ಬರೂ ನಿವೇಶನ ತೋರಿಸದೇ ಕಾಲಹರಣ ಮಾಡುತ್ತಿದ್ದರು. ನಾನೇ ಜಿಡಿಎಗೆ ಹೋಗಿ ವಿಚಾರಿಸಿದಾಗ ಅಂಥ ಯಾವುದೇ ಯೋಜನೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಹೀಗಾಗಿ ನಿವೇಶನ ಕೊಡಿಸುವುದಾಗಿ ₹35 ಲಕ್ಷ ಹಣ ಪಡೆದು ಮೋಸ ಮಾಡಿದ ಇಬ್ಬರ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ನಸೀರುದ್ದೀನ್ ಸತ್ತಾರ ಒತ್ತಾಯಿಸಿದ್ದಾರೆ.</p>.<p>ಈ ದೂರಿನನ್ವಯ ಸೈಯದ್ ಫಾರೂಕ್ ಹಾಗೂ ಅವರ ತಾಯಿ ಶಮೀಮ್ಬಾನು ವಿರುದ್ಧ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><strong>9 ಎಮ್ಮೆ ಹಾಗೂ 10 ಕರುಗಳ ರಕ್ಷಣೆ</strong></p>.<p><strong>ಕಲಬುರಗಿ</strong>: ಗೂಡ್ಸ್ ವಾಹನವೊಂದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 9 ಎಮ್ಮೆ ಹಾಗೂ 10 ಎಮ್ಮೆ ಕರುಗಳನ್ನು ಪೊಲೀಸರು ರಕ್ಷಿಸಿದ್ದಾರೆ.</p>.<p>ಜಾನುವಾರುಗಳ ಸಾಗಣೆ ಬಳಸಿದ್ದ ₹5 ಲಕ್ಷ ಮೌಲ್ಯದ ವಾಹನ ಜಪ್ತಿ ಮಾಡಿದ್ದಾರೆ. ದನಗಳನ್ನು ಗೋಶಾಲೆಗೆ ರವಾನಿಸಿದ್ದಾರೆ.</p>.<p>ಜಾನುವಾರುಗಳ ಅಕ್ರಮ ಸಾಗಣೆಗೆ ಸಂಬಂಧಿಸಿದಂತೆ ವಾಹನದ ಚಾಲಕ ಹಾಗೂ ದನಗಳ ಮಾಲೀಕನ ವಿರುದ್ಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><strong>8 ಮಂದಿ ವಿರುದ್ಧ ಕ್ರಮ</strong></p>.<p><strong>ಕಲಬುರಗಿ:</strong> ನಗರದ ಹೊರವಲಯದ ಹಾಗರಗಾದಿಂದ ಭೂಪಾಲ ತೆಗನೂರ ಗ್ರಾಮದತ್ತ ಹೋಗುವ ದಾರಿಯಲ್ಲಿ ಇಸ್ಫೀಟ್ ಜೂಜಾಟದಲ್ಲಿ ತೊಡಗಿದ್ದ ಗುಂಪಿನ ಮೇಲೆ ದಾಳಿ ನಡೆಸಿರುವ ಪೊಲೀಸರು, 8 ಮಂದಿ ವಿರುದ್ಧ ಕ್ರಮಕೈಗೊಂಡಿದ್ದಾರೆ.</p>.<p>ಬಂಧಿತ ಆರೋಪಿಗಳಿಂದ ಜೂಜಾಟದ ಪಣಕ್ಕೆ ಹಚ್ಚಿದ್ದ ₹2,540 ಸೇರಿದಂತೆ ಒಟ್ಟು ₹11,940 ಜಪ್ತಿ ಮಾಡಿಕೊಂಡಿದ್ದಾರೆ. ಈ ಕುರಿತು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260526-34-1711811831</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>