<p>ಕಲಬುರಗಿ: ‘ಸಂಗೀತವು ಮನಸ್ಸಿಗೆ ಶಾಂತಿ, ಸಮಾಧಾನ ನೆಮ್ಮದಿ ನೀಡಿ, ಜೀವನದಲ್ಲಿ ಹುರುಪು ಹುಮ್ಮಸ್ಸು ನೀಡಲು ಸಹಕಾರಿ ಆಗಿದೆ’ ಎಂದು ದೂರದರ್ಶನ ಕೇಂದ್ರದ ನಿವೃತ್ತ ನಿರ್ದೇಶಕ ಎಂ.ಬಿ. ಪಾಟೀಲ ಹೇಳಿದರು.</p>.<p>ನಗರದ ಕನ್ನಡ ಭವನದಲ್ಲಿ ಮಂಗಳವಾರ ಎಸ್.ಎನ್. ಕುಮುದಿನಿಬಾಯಿ ಮಿಟ್ಟಿಮನಿ ಸ್ಮರಣಾರ್ಥ ನಾದಪ್ರಿಯ ಫ್ರೆಂಡ್ಸ್ ಗ್ರೂಪ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಗಾಯಕನೊಬ್ಬ ಗಾಯನ ಪ್ರಕಾರ ವಿವಿಧ’ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಈ ಭಾಗದ ಅನೇಕ ಕಲಾವಿದರಿಗೆ ಆಕಾಶವಾಣಿ ಹಾಗೂ ದೂರದರ್ಶನ ಒಳ್ಳೆಯ ಅವಕಾಶ ನೀಡಿ ಸಂಗೀತ, ಕಲೆ, ಸಾಹಿತ್ಯ ಬೆಳೆಸಲು ಸಹಕಾರಿಯಾಯಿತು. ಆದರೆ, ಕರೋಕೆ ಯುಗದಲ್ಲಿ ಹಾಡುವವರೇ ಹೆಚ್ಚು. ಕೇಳುವವರೇ ಇಲ್ಲವಾಗಿದೆ’ ಎಂದು ವಿಷಾದಿಸಿದರು.</p>.<p>ಗುಲಬುರ್ಗಾ ವಿಶ್ವವಿದ್ಯಾಲಯದ ಮಾಜಿ ಪ್ರಭಾರ ಕುಲಪತಿ ಪ್ರೊ.ಅಬ್ಬುಲ್ ರಬ್ ಉಸ್ತಾದ್ ಮಾತನಾಡಿ, ‘ಸಂಗೀತದಲ್ಲಿ ಹಿಂದಿ ಚಲನಚಿತ್ರದಲ್ಲಿ ಮೊಹಮ್ಮದ್ ರಫಿ, ಕಿಶೋರ್, ಸಂಗೀತ ನಿರ್ದೇಶಕ ನೌಶಾದ್ ಉತ್ತಮ ಕೊಡುಗೆ ನೀಡಿದ್ದಾರೆ’ ಎಂದು ಸ್ಮರಿಸಿದರು.</p>.<p>ಹಿರಿಯ ಗಾಯಕ, 'ವಾಯ್ಸ್ ಆಫ್ ಕಿಶೋರ್ಕುಮಾರ್' ಖ್ಯಾತಿಯ ರಮೇಶ ಜೋಶಿ ಅವರು ವಿವಿಧ ಗಾಯನ ಪ್ರಕಾರಗಳನ್ನು ಪ್ರಸ್ತುತಪಡಿಸಿದರು. ಅವರ ಜತೆಗೆ ಅವರ ಮೊಮ್ಮಗಳು ಶ್ರೀಶಾ ಜೋಶಿ ಹಾಡಿದರು.</p>.<p>ತಬಲಾ ವಾದಕ ಜಯರಾವ ಕುಲಕರ್ಣಿ, ಸಂಗೀತ ಕಲಾವಿದ ಪ್ರಕಾಶ ಕುಲಕರ್ಣಿ, ನಾದಪ್ರಿಯ ಫ್ರೆಂಡ್ಸ್ ಗ್ರೂಪ್ ಅಧ್ಯಕ್ಷ ಕೆ.ಪಿ. ಗಿರಿಧರ, ಸಾಹಿತಿ ಅಂಬುಜಾ ಮಳಖೇಡಕರ ಉಪಸ್ಥಿತರಿದ್ದರು. ಪ್ರಸಾದ ಅಷ್ಟಗಿ ನಿರೂಪಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260604-34-1802432975</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಲಬುರಗಿ: ‘ಸಂಗೀತವು ಮನಸ್ಸಿಗೆ ಶಾಂತಿ, ಸಮಾಧಾನ ನೆಮ್ಮದಿ ನೀಡಿ, ಜೀವನದಲ್ಲಿ ಹುರುಪು ಹುಮ್ಮಸ್ಸು ನೀಡಲು ಸಹಕಾರಿ ಆಗಿದೆ’ ಎಂದು ದೂರದರ್ಶನ ಕೇಂದ್ರದ ನಿವೃತ್ತ ನಿರ್ದೇಶಕ ಎಂ.ಬಿ. ಪಾಟೀಲ ಹೇಳಿದರು.</p>.<p>ನಗರದ ಕನ್ನಡ ಭವನದಲ್ಲಿ ಮಂಗಳವಾರ ಎಸ್.ಎನ್. ಕುಮುದಿನಿಬಾಯಿ ಮಿಟ್ಟಿಮನಿ ಸ್ಮರಣಾರ್ಥ ನಾದಪ್ರಿಯ ಫ್ರೆಂಡ್ಸ್ ಗ್ರೂಪ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಗಾಯಕನೊಬ್ಬ ಗಾಯನ ಪ್ರಕಾರ ವಿವಿಧ’ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಈ ಭಾಗದ ಅನೇಕ ಕಲಾವಿದರಿಗೆ ಆಕಾಶವಾಣಿ ಹಾಗೂ ದೂರದರ್ಶನ ಒಳ್ಳೆಯ ಅವಕಾಶ ನೀಡಿ ಸಂಗೀತ, ಕಲೆ, ಸಾಹಿತ್ಯ ಬೆಳೆಸಲು ಸಹಕಾರಿಯಾಯಿತು. ಆದರೆ, ಕರೋಕೆ ಯುಗದಲ್ಲಿ ಹಾಡುವವರೇ ಹೆಚ್ಚು. ಕೇಳುವವರೇ ಇಲ್ಲವಾಗಿದೆ’ ಎಂದು ವಿಷಾದಿಸಿದರು.</p>.<p>ಗುಲಬುರ್ಗಾ ವಿಶ್ವವಿದ್ಯಾಲಯದ ಮಾಜಿ ಪ್ರಭಾರ ಕುಲಪತಿ ಪ್ರೊ.ಅಬ್ಬುಲ್ ರಬ್ ಉಸ್ತಾದ್ ಮಾತನಾಡಿ, ‘ಸಂಗೀತದಲ್ಲಿ ಹಿಂದಿ ಚಲನಚಿತ್ರದಲ್ಲಿ ಮೊಹಮ್ಮದ್ ರಫಿ, ಕಿಶೋರ್, ಸಂಗೀತ ನಿರ್ದೇಶಕ ನೌಶಾದ್ ಉತ್ತಮ ಕೊಡುಗೆ ನೀಡಿದ್ದಾರೆ’ ಎಂದು ಸ್ಮರಿಸಿದರು.</p>.<p>ಹಿರಿಯ ಗಾಯಕ, 'ವಾಯ್ಸ್ ಆಫ್ ಕಿಶೋರ್ಕುಮಾರ್' ಖ್ಯಾತಿಯ ರಮೇಶ ಜೋಶಿ ಅವರು ವಿವಿಧ ಗಾಯನ ಪ್ರಕಾರಗಳನ್ನು ಪ್ರಸ್ತುತಪಡಿಸಿದರು. ಅವರ ಜತೆಗೆ ಅವರ ಮೊಮ್ಮಗಳು ಶ್ರೀಶಾ ಜೋಶಿ ಹಾಡಿದರು.</p>.<p>ತಬಲಾ ವಾದಕ ಜಯರಾವ ಕುಲಕರ್ಣಿ, ಸಂಗೀತ ಕಲಾವಿದ ಪ್ರಕಾಶ ಕುಲಕರ್ಣಿ, ನಾದಪ್ರಿಯ ಫ್ರೆಂಡ್ಸ್ ಗ್ರೂಪ್ ಅಧ್ಯಕ್ಷ ಕೆ.ಪಿ. ಗಿರಿಧರ, ಸಾಹಿತಿ ಅಂಬುಜಾ ಮಳಖೇಡಕರ ಉಪಸ್ಥಿತರಿದ್ದರು. ಪ್ರಸಾದ ಅಷ್ಟಗಿ ನಿರೂಪಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260604-34-1802432975</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>