<p><strong>ಕಲಬುರಗಿ:</strong> ನಗರದ ಅಟಲ ಬಿಹಾರಿ ವಾಜಪೇಯಿ ಬಡಾವಣೆಯ ಶಿವನ ಕಟ್ಟೆಯ ಬಳಿ ಮದ್ಯ ಕುಡಿದು ಮಲಗಿದ್ದ ಪೊಲೀಸರೊಬ್ಬರ ಕೊರಳಲ್ಲಿದ್ದ ಚಿನ್ನಾಭರಣ, ಕಿಸೆಯಲ್ಲಿದ್ದ ಮೊಬೈಲ್ ಫೋನ್ ಹಾಗೂ ಪಕ್ಕದಲ್ಲೇ ನಿಲ್ಲಿಸಿದ್ದ ಬೈಕ್ ಕದ್ದು ಕಳ್ಳರು ಪರಾರಿಯಾಗಿದ್ದಾರೆ.</p>.<p>ವಿಶ್ವಜ್ಯೋತಿ ಕಾಲೊನಿ ನಿವಾಸಿ ಮಲ್ಲಿಕಾರ್ಜುನ ಸಂಕಾಲಿ ಚಿನ್ನಾಭರಣ ಹಾಗೂ ಬೈಕ್ ಕಳೆದುಕೊಂಡವರು. ‘ಕೊರಳಲ್ಲಿದ್ದ 35 ಗ್ರಾಂ ಬಂಗಾರ ಚೈನು, ₹30 ಸಾವಿರ ಮೊತ್ತ ದ್ವಿಚಕ್ರ ವಾಹನ ಹಾಗೂ ₹10 ಸಾವಿರ ಮೌಲ್ಯದ ಮೊಬೈಲ್ ಕಳುವಾಗಿದೆ’ ಎಂದು ಮಲ್ಲಿಕಾರ್ಜುನ ಅವರು ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><strong>ಹಣ್ಣಿನ ವ್ಯಾಪಾರಿ ನೇಣಿಗೆ ಶರಣು</strong></p><p>ಕಲಬುರಗಿಯ ರಾಮತೀರ್ಥ ನಗರದಲ್ಲಿ ಹಣ್ಣಿನ ವ್ಯಾಪಾರಿಯೊಬ್ಬರು ನೇಣಿಗೆ ಶರಣಾಗಿದ್ದಾರೆ. ಜಿತೇಶ ಪವಾರ (25) ಮೃತರು. ಈ ಕುರಿತು ಸಬರ್ಬನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><strong>ಚಿನ್ನಾಭರಣ ಕಳವು</strong></p><p>ಮನೆಗೆ ಹಾಕಿದ್ದ ಬೀಗ ಒಡೆದ ಕಳ್ಳವರು ₹1 ಲಕ್ಷ ಮೌಲ್ಯದ 20 ಗಾಂ ಚಿನ್ನದ ಬಳೆ ಕದ್ದು ಪರಾರಿಯಾಗಿದ್ದಾರೆ.</p>.<p>ಕಲಬುರಗಿಯ ಮಿಸ್ಬಾ ನಗರದ ನಿವಾಸಿ ಜಬಿನ್ ಫಾತಿಮಾ ಚಿನ್ನಾಭರಣ ಕಳೆದುಕೊಂಡವರು.</p>.<p>‘ಸಂಬಂಧಿಕರ ಮದುವೆ ಸಮಾರಂಭಕ್ಕೆ ಮನೆಗೆ ಬೀಗಹಾಕಿ ಹೋಗಿದ್ದಾಗ ಕಳವು ನಡೆದಿದೆ’ ಎಂದು ದೂರಿನಲ್ಲಿ ಜಬಿನ್ ಫಾತಿಮಾ ತಿಳಿಸಿದ್ದಾರೆ. ಈ ಕುರಿತು ಸಬರ್ಬನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><strong>ಹಲ್ಲೆ ಆರೋಪ: ಪ್ರಕರಣ ದಾಖಲು</strong></p><p>ಕಲಬುರಗಿ ತಾಲ್ಲೂಕಿನ ಧರ್ಮಾಪುರ ತಾಂಡಾದಲ್ಲಿ ದೀಪಾವಳಿ ಹಬ್ಬದ ಆಚರಣೆ ವೇಳೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. </p>.<p>ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿದ್ದಾರೆ ಎಂದು ಎರಡೂ ಗುಂಪಿನವರು ಪರಸ್ಪರರ ವಿರುದ್ಧ ದೂರು ನೀಡಿದ್ದಾರೆ.</p>.<p>ಗುಂಡುರಾಜ ಶಂಕರ ನೀಡಿದ ದೂರಿನನ್ವಯ ಎಂಟು ಮಂದಿ ವಿರುದ್ಧ ಹಾಗೂ ಕಮಲಾಬಾಯಿ ಪವಾರ ನೀಡಿದ ದೂರಿನನ್ವಯ 13ಕ್ಕೂ ಹೆಚ್ಚು ಮಂದಿ ವಿರುದ್ಧ ನಗರದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><strong>ಪಿಡಿಒ ವಿರುದ್ಧ ಪ್ರಕರಣ</strong></p><p>ರಸ್ತೆಗೆ ಮುರುಂ ಹಾಕಿಸುವಂತೆ ಪದೇಪದೆ ಒತ್ತಾಯಿಸಿದ್ದಕ್ಕೆ ಕೋಪಗೊಂಡು ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಹಾಕಿದ ಆರೋಪದಡಿ ಕಲಬುರಗಿ ಜಿಲ್ಲೆಯ ಕಾಳಗಿ ತಾಲ್ಲೂಕಿನ ಪೇಠಶಿರೂರ ಪಿಡಿಒ ವಿರುದ್ಧ ಪ್ರಕರಣ ದಾಖಲಾಗಿದೆ.</p>.<p>ಈ ಕುರಿತು ಬೆನ್ನೂರ(ಬಿ) ಗ್ರಾಮದ ಮಾತಾ ಮಾಣಿಕೇಶ್ವರ ಆಶ್ರಮದ ಪೀಠಾಧಿಪತಿ ಭಾರದ್ವಾಜ ಸ್ವಾಮೀಜಿ ದೂರು ನೀಡಿದ್ದರು.</p>.<p>ಅದರನ್ವಯ ಪೇಠಶಿರೂರ ಪಿಡಿಒ ಬಾಬುರಾವ್ ವಿರುದ್ಧ ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ:</strong> ನಗರದ ಅಟಲ ಬಿಹಾರಿ ವಾಜಪೇಯಿ ಬಡಾವಣೆಯ ಶಿವನ ಕಟ್ಟೆಯ ಬಳಿ ಮದ್ಯ ಕುಡಿದು ಮಲಗಿದ್ದ ಪೊಲೀಸರೊಬ್ಬರ ಕೊರಳಲ್ಲಿದ್ದ ಚಿನ್ನಾಭರಣ, ಕಿಸೆಯಲ್ಲಿದ್ದ ಮೊಬೈಲ್ ಫೋನ್ ಹಾಗೂ ಪಕ್ಕದಲ್ಲೇ ನಿಲ್ಲಿಸಿದ್ದ ಬೈಕ್ ಕದ್ದು ಕಳ್ಳರು ಪರಾರಿಯಾಗಿದ್ದಾರೆ.</p>.<p>ವಿಶ್ವಜ್ಯೋತಿ ಕಾಲೊನಿ ನಿವಾಸಿ ಮಲ್ಲಿಕಾರ್ಜುನ ಸಂಕಾಲಿ ಚಿನ್ನಾಭರಣ ಹಾಗೂ ಬೈಕ್ ಕಳೆದುಕೊಂಡವರು. ‘ಕೊರಳಲ್ಲಿದ್ದ 35 ಗ್ರಾಂ ಬಂಗಾರ ಚೈನು, ₹30 ಸಾವಿರ ಮೊತ್ತ ದ್ವಿಚಕ್ರ ವಾಹನ ಹಾಗೂ ₹10 ಸಾವಿರ ಮೌಲ್ಯದ ಮೊಬೈಲ್ ಕಳುವಾಗಿದೆ’ ಎಂದು ಮಲ್ಲಿಕಾರ್ಜುನ ಅವರು ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><strong>ಹಣ್ಣಿನ ವ್ಯಾಪಾರಿ ನೇಣಿಗೆ ಶರಣು</strong></p><p>ಕಲಬುರಗಿಯ ರಾಮತೀರ್ಥ ನಗರದಲ್ಲಿ ಹಣ್ಣಿನ ವ್ಯಾಪಾರಿಯೊಬ್ಬರು ನೇಣಿಗೆ ಶರಣಾಗಿದ್ದಾರೆ. ಜಿತೇಶ ಪವಾರ (25) ಮೃತರು. ಈ ಕುರಿತು ಸಬರ್ಬನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><strong>ಚಿನ್ನಾಭರಣ ಕಳವು</strong></p><p>ಮನೆಗೆ ಹಾಕಿದ್ದ ಬೀಗ ಒಡೆದ ಕಳ್ಳವರು ₹1 ಲಕ್ಷ ಮೌಲ್ಯದ 20 ಗಾಂ ಚಿನ್ನದ ಬಳೆ ಕದ್ದು ಪರಾರಿಯಾಗಿದ್ದಾರೆ.</p>.<p>ಕಲಬುರಗಿಯ ಮಿಸ್ಬಾ ನಗರದ ನಿವಾಸಿ ಜಬಿನ್ ಫಾತಿಮಾ ಚಿನ್ನಾಭರಣ ಕಳೆದುಕೊಂಡವರು.</p>.<p>‘ಸಂಬಂಧಿಕರ ಮದುವೆ ಸಮಾರಂಭಕ್ಕೆ ಮನೆಗೆ ಬೀಗಹಾಕಿ ಹೋಗಿದ್ದಾಗ ಕಳವು ನಡೆದಿದೆ’ ಎಂದು ದೂರಿನಲ್ಲಿ ಜಬಿನ್ ಫಾತಿಮಾ ತಿಳಿಸಿದ್ದಾರೆ. ಈ ಕುರಿತು ಸಬರ್ಬನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><strong>ಹಲ್ಲೆ ಆರೋಪ: ಪ್ರಕರಣ ದಾಖಲು</strong></p><p>ಕಲಬುರಗಿ ತಾಲ್ಲೂಕಿನ ಧರ್ಮಾಪುರ ತಾಂಡಾದಲ್ಲಿ ದೀಪಾವಳಿ ಹಬ್ಬದ ಆಚರಣೆ ವೇಳೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. </p>.<p>ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿದ್ದಾರೆ ಎಂದು ಎರಡೂ ಗುಂಪಿನವರು ಪರಸ್ಪರರ ವಿರುದ್ಧ ದೂರು ನೀಡಿದ್ದಾರೆ.</p>.<p>ಗುಂಡುರಾಜ ಶಂಕರ ನೀಡಿದ ದೂರಿನನ್ವಯ ಎಂಟು ಮಂದಿ ವಿರುದ್ಧ ಹಾಗೂ ಕಮಲಾಬಾಯಿ ಪವಾರ ನೀಡಿದ ದೂರಿನನ್ವಯ 13ಕ್ಕೂ ಹೆಚ್ಚು ಮಂದಿ ವಿರುದ್ಧ ನಗರದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><strong>ಪಿಡಿಒ ವಿರುದ್ಧ ಪ್ರಕರಣ</strong></p><p>ರಸ್ತೆಗೆ ಮುರುಂ ಹಾಕಿಸುವಂತೆ ಪದೇಪದೆ ಒತ್ತಾಯಿಸಿದ್ದಕ್ಕೆ ಕೋಪಗೊಂಡು ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಹಾಕಿದ ಆರೋಪದಡಿ ಕಲಬುರಗಿ ಜಿಲ್ಲೆಯ ಕಾಳಗಿ ತಾಲ್ಲೂಕಿನ ಪೇಠಶಿರೂರ ಪಿಡಿಒ ವಿರುದ್ಧ ಪ್ರಕರಣ ದಾಖಲಾಗಿದೆ.</p>.<p>ಈ ಕುರಿತು ಬೆನ್ನೂರ(ಬಿ) ಗ್ರಾಮದ ಮಾತಾ ಮಾಣಿಕೇಶ್ವರ ಆಶ್ರಮದ ಪೀಠಾಧಿಪತಿ ಭಾರದ್ವಾಜ ಸ್ವಾಮೀಜಿ ದೂರು ನೀಡಿದ್ದರು.</p>.<p>ಅದರನ್ವಯ ಪೇಠಶಿರೂರ ಪಿಡಿಒ ಬಾಬುರಾವ್ ವಿರುದ್ಧ ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>