<p>ಕಲಬುರಗಿ: ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಹೊರಡಿಸಿದ್ದ ಗಡಿಪಾರು ಆದೇಶ ಉಲ್ಲಂಘಿಸಿ ನಗರಕ್ಕೆ ಅಕ್ರಮವಾಗಿ ಪ್ರವೇಶಿಸಿದ ರೌಡಿಶೀಟರ್ ಖಾಜಾಪಾಷಾ ವಿರುದ್ಧ ರಾಘವೇಂದ್ರ ನಗರ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.</p>.<p>ಠಾಣೆಯ ರೌಡಿಶೀಟರ್ ಆಗಿರುವ ಖಾಜಾಪಾಷಾ ಎಂಬಾತನಿಗೆ 2025ರ ನವೆಂಬರ್ ತಿಂಗಳಲ್ಲಿ ಒಂದು ವರ್ಷದ ಅವಧಿಗೆ ಬೆಂಗಳೂರಿನ ಕೋಣನಕುಂಟೆ ಠಾಣಾ ವ್ಯಾಪ್ತಿ ಗಡಿಪಾರು ಆದೇಶಿಸಲಾಗಿತ್ತು. ಆದರೆ, ಈ ಆದೇಶವನ್ನು ಉಲ್ಲಂಘಿಸಿ ಆತ ಕಲಬುರಗಿ ನಗರಕ್ಕೆ ಮರಳಿ ಬಂದಿರುವುದು ಬೆಳಕಿಗೆ ಬಂದಿದೆ.</p>.<p>ಬಸವ ನಗರದ ನಿವಾಸಿ, ಮದುವೆ ಸಮಾರಂಭಗಳಲ್ಲಿ ವೇಟರ್ ಕೆಲಸ ಮಾಡುವ ಆದರ್ಶ್ (22) ಎಂಬಾತ ಮೇ 10ರಂದು ಸಂಜೆ 5 ಗಂಟೆಗೆ ಮಹ್ಮದಿ ಚೌಕ್ ಹತ್ತಿರದ ರಿಯಾಸತ್ ಫಂಕ್ಷನ್ ಹಾಲ್ನಲ್ಲಿ ಕೆಲಸದ ಅವಧಿಯಲ್ಲಿ ಟೀ ಕುಡಿಯಲು ಹೋದಾಗ ಖಾಜಾಪಾಷಾ ನಗರದಲ್ಲಿಯೇ ಇರುವುದನ್ನು ಗಮನಿಸಿದ್ದ.</p>.<p>ಬಳಿಕ ಪೊಲೀಸರಿಗೆ ಈ ಸಂಬಂಧ ದೂರು ನೀಡಿದ್ದ. ಅದರಂತೆ ಖಾಜಾಪಾಷಾ ವಿರುದ್ಧ ಎಫ್ಐಆರ್ ದಾಖಲಾಗಿದೆ.</p>.<p>ಈ ನಡುವೆ ಮೇ 10ರಂದೇ ರಾತ್ರಿ 7.30ರ ಸುಮಾರಿಗೆ ರಿಯಾಸತ್ ಫಂಕ್ಷನ್ ಹಾಲ್ ಸಮೀಪ ರೌಡಿಶೀಟರ್ ಖಾಜಾಪಾಷಾ ಮತ್ತು ರೆಹಾನ್ ಎಂಬಾತನ ನಡುವೆ ಗಲಾಟೆ ನಡೆದಿತ್ತು. ಖಾಜಾಪಾಷಾ ಗಾಯಗೊಂಡು ಜಿಮ್ಸ್ಗೆ ದಾಖಲಾಗಿದ್ದ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260519-30-813791808</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಲಬುರಗಿ: ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಹೊರಡಿಸಿದ್ದ ಗಡಿಪಾರು ಆದೇಶ ಉಲ್ಲಂಘಿಸಿ ನಗರಕ್ಕೆ ಅಕ್ರಮವಾಗಿ ಪ್ರವೇಶಿಸಿದ ರೌಡಿಶೀಟರ್ ಖಾಜಾಪಾಷಾ ವಿರುದ್ಧ ರಾಘವೇಂದ್ರ ನಗರ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.</p>.<p>ಠಾಣೆಯ ರೌಡಿಶೀಟರ್ ಆಗಿರುವ ಖಾಜಾಪಾಷಾ ಎಂಬಾತನಿಗೆ 2025ರ ನವೆಂಬರ್ ತಿಂಗಳಲ್ಲಿ ಒಂದು ವರ್ಷದ ಅವಧಿಗೆ ಬೆಂಗಳೂರಿನ ಕೋಣನಕುಂಟೆ ಠಾಣಾ ವ್ಯಾಪ್ತಿ ಗಡಿಪಾರು ಆದೇಶಿಸಲಾಗಿತ್ತು. ಆದರೆ, ಈ ಆದೇಶವನ್ನು ಉಲ್ಲಂಘಿಸಿ ಆತ ಕಲಬುರಗಿ ನಗರಕ್ಕೆ ಮರಳಿ ಬಂದಿರುವುದು ಬೆಳಕಿಗೆ ಬಂದಿದೆ.</p>.<p>ಬಸವ ನಗರದ ನಿವಾಸಿ, ಮದುವೆ ಸಮಾರಂಭಗಳಲ್ಲಿ ವೇಟರ್ ಕೆಲಸ ಮಾಡುವ ಆದರ್ಶ್ (22) ಎಂಬಾತ ಮೇ 10ರಂದು ಸಂಜೆ 5 ಗಂಟೆಗೆ ಮಹ್ಮದಿ ಚೌಕ್ ಹತ್ತಿರದ ರಿಯಾಸತ್ ಫಂಕ್ಷನ್ ಹಾಲ್ನಲ್ಲಿ ಕೆಲಸದ ಅವಧಿಯಲ್ಲಿ ಟೀ ಕುಡಿಯಲು ಹೋದಾಗ ಖಾಜಾಪಾಷಾ ನಗರದಲ್ಲಿಯೇ ಇರುವುದನ್ನು ಗಮನಿಸಿದ್ದ.</p>.<p>ಬಳಿಕ ಪೊಲೀಸರಿಗೆ ಈ ಸಂಬಂಧ ದೂರು ನೀಡಿದ್ದ. ಅದರಂತೆ ಖಾಜಾಪಾಷಾ ವಿರುದ್ಧ ಎಫ್ಐಆರ್ ದಾಖಲಾಗಿದೆ.</p>.<p>ಈ ನಡುವೆ ಮೇ 10ರಂದೇ ರಾತ್ರಿ 7.30ರ ಸುಮಾರಿಗೆ ರಿಯಾಸತ್ ಫಂಕ್ಷನ್ ಹಾಲ್ ಸಮೀಪ ರೌಡಿಶೀಟರ್ ಖಾಜಾಪಾಷಾ ಮತ್ತು ರೆಹಾನ್ ಎಂಬಾತನ ನಡುವೆ ಗಲಾಟೆ ನಡೆದಿತ್ತು. ಖಾಜಾಪಾಷಾ ಗಾಯಗೊಂಡು ಜಿಮ್ಸ್ಗೆ ದಾಖಲಾಗಿದ್ದ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260519-30-813791808</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>