ಇದೇ 24ರಂದು ತಾಂಡಾದ ಶಾಲೆಗೆ ದಿಢೀರ್ ಭೇಟಿ ನೀಡಿದ್ದ ಸಂದರ್ಭದಲ್ಲಿ ಕಾಂತು ಶಾಲೆಗೆ ಬಂದಿರಲಿಲ್ಲ. ಅಲ್ಲದೇ, ಎರಡು ಕೊಠಡಿಗಳಿಗೆ ಬೀಗ ಹಾಕಿತ್ತು. ಶಾಲಾ ಆವರಣ ಅವ್ಯವಸ್ಥಿತವಾಗಿತ್ತು. ಕೋವಿಡ್ ಪ್ರಯುಕ್ತ ಶಾಲಾ ಆವರಣವನ್ನು ಸ್ಯಾನಿಟೈಜ್ ಮಾಡಿ ಸ್ವಚ್ಛವಾಗಿಟ್ಟುಕೊಳ್ಳುವಂತೆ ಸುತ್ತೋಲೆ ಹೊರಡಿಸಿದ್ದರೂ ಅದನ್ನು ಪಾಲನೆ ಮಾಡಿರಲಿಲ್ಲ ಎಂದು ಬಿಇಒ ವೆಂಕಯ್ಯ ತಿಳಿಸಿದ್ದಾರೆ.