‘ಹಿಂದೂ ಧರ್ಮದ ಹೆಸರಿನಲ್ಲಿ ನಡೆಯುವ ಕಾರ್ಯಕ್ರಮಗಳೆಲ್ಲವೂ ಕೋಮುವಾದದಿಂದ ತುಂಬಿವೆ’ ಎಂಬುದು ಹೆಚ್ಚಿನ ಬುದ್ಧಿಜೀವಿಗಳ, ವಿಚಾರವಂತರ ಅಭಿಪ್ರಾಯವಾಗಿದೆ. ನಮ್ಮ ದೇಶದಲ್ಲಿ ಶ್ರೀರಾಮ ನವಮಿಯನ್ನಾಗಲೀ, ಕೃಷ್ಣಾಷ್ಟಮಿಯನ್ನಾಗಲೀ ರಾಷ್ಟ್ರೀಯ ಹಬ್ಬಗಳೆಂದು ಪರಿಗಣಿಸಲಾಗಿಲ್ಲ. ಆದರೆ, ಬುದ್ಧ ಪೂರ್ಣಿಮೆ ಹಾಗೂ ಮಹಾವೀರ ಜಯಂತಿಗಳನ್ನು ರಾಷ್ಟ್ರೀಯ ಹಬ್ಬಗಳ ಸಾಲಿನಲ್ಲಿ ಸೇರಿಸಲಾಗಿದೆ. ಮಾತ್ರವಲ್ಲ, ಆ ದಿನಗಳಂದು ರಜೆ ಘೋಷಿಸಿ, ಮಾಂಸ ಮಾರಾಟ ಮಾಡುವುದನ್ನು ಸಹ ನಿಷೇಧಿಸಲಾಗಿದೆ. ಇದೇಕೆ ಹೀಗೆ?