<p>ಕಾಳಗಿ: ತಾಲ್ಲೂಕಿನ ಹೆಬ್ಬಾಳ ಗ್ರಾಮದ ಅಣಿವೀರಭದ್ರೇಶ್ವರ ಜಾತ್ರಾ ಮಹೋತ್ಸವ ಗುರುವಾರ ಸಂಭ್ರಮದಿಂದ ತೆರೆ ಕಂಡಿತು.</p>.<p>ಭಕ್ತರು ವಿವಿಧ ವಾದ್ಯಮೇಳಗಳ ಝೇಂಕಾರದ ನಡುವೆ ಈಚೆಗೆ ರಾತ್ರಿ ಶ್ರದ್ಧಾ ಭಕ್ತಿಯಿಂದ ತೇರು ಎಳೆದು ಸಂಭ್ರಮಿಸಿದರು. ಜಯಘೋಷ ಹಾಕಿ ಉತ್ತತ್ತಿ, ಬಾಳೆಹಣ್ಣು ತೇರಿನ ಮೇಲೆ ತೂರಿ ಕೈಮುಗಿದು ನಮಿಸಿ ಹರಕೆ ಸಲ್ಲಿಸಿದರು. ಪಟಾಕಿ ಸದ್ದು, ವಿದ್ಯುತ್ ದೀಪಗಳ ಅಲಂಕಾರ ಭಕ್ತರನ್ನು ಆಕರ್ಷಿಸಿತು.</p>.<p>ಇದಕ್ಕೂ ಮುಂಚೆ ನಸುಕಿನ ಜಾವ ಮೆರವಣಿಗೆಯೊಂದಿಗೆ ಹೊರವಲಯದ ಅಣಿವೀರಭದ್ರೇಶ್ವರ ಗುಡಿಯಿಂದ ಹೂವು ತಂದು ಪೂಜೆ ಸಲ್ಲಿಸಿ ಪುರವಂತರೊಂದಿಗೆ ಭಕ್ತಿಭಾವದಿಂದ ಅಗ್ಗಿ ತುಳಿದರು. ವಿವಿಧೆಡೆಯ ಭಕ್ತರು ಅಣಿವೀರಭದ್ರೇಶ್ವರ ದೇವಸ್ಥಾನಕ್ಕೆ ಆಗಮಿಸಿ ಕಾಯಿಕರ್ಪೂರ, ನೈವೇದ್ಯ, ಹೂಹಾರ ಸಮರ್ಪಿಸಿದರು.</p>.<p>ಗುರುವಾರ ಜಂಗಿ ಕುಸ್ತಿಗಳು ಏರ್ಪಟ್ಟು ವಿಜೇತರಿಗೆ ಬಹುಮಾನ ನೀಡಲಾಯಿತು. ಜಾತ್ರೆ ನಿಮಿತ್ತ ದೇವರ ಗಂಗಾಭಿಷೇಕ, ದೇವರ ಪಲ್ಲಕ್ಕಿ ಮತ್ತು ನಂದಿ ಧ್ವಜದ ಮೆರವಣಿಗೆ ನೆರವೇರಿತು.</p>.<p>ಹೆಬ್ಬಾಳ, ಚಿಂಚೋಳಿ (ಎಚ್), ಕಮಕನೂರ, ತೊಂಚಿ, ಸಾವತಖೇಡ, ನಿಪ್ಪಾಣಿ, ಹುಳಗೇರಿ, ಕಂದಗೂಳ, ಬಣಬಿ ಸುತ್ತಲಿನ ವಿವಿಧೆಡೆಯ ಭಕ್ತರು ಪಾಲ್ಗೊಂಡು ದೇವರ ಪ್ರಸಾದ ಸ್ವೀಕರಿಸಿದರು.</p>.<p>ದೇವಸ್ಥಾನದ ಟ್ರಸ್ಟ್ ಕಮಿಟಿಯ ಪದಾಧಿಕಾರಿಗಳು ಸೇರಿದಂತೆ ಅಪಾರ ಭಕ್ತಸಮೂಹ ಭಾಗವಹಿಸಿತು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260504-31-203893441</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಾಳಗಿ: ತಾಲ್ಲೂಕಿನ ಹೆಬ್ಬಾಳ ಗ್ರಾಮದ ಅಣಿವೀರಭದ್ರೇಶ್ವರ ಜಾತ್ರಾ ಮಹೋತ್ಸವ ಗುರುವಾರ ಸಂಭ್ರಮದಿಂದ ತೆರೆ ಕಂಡಿತು.</p>.<p>ಭಕ್ತರು ವಿವಿಧ ವಾದ್ಯಮೇಳಗಳ ಝೇಂಕಾರದ ನಡುವೆ ಈಚೆಗೆ ರಾತ್ರಿ ಶ್ರದ್ಧಾ ಭಕ್ತಿಯಿಂದ ತೇರು ಎಳೆದು ಸಂಭ್ರಮಿಸಿದರು. ಜಯಘೋಷ ಹಾಕಿ ಉತ್ತತ್ತಿ, ಬಾಳೆಹಣ್ಣು ತೇರಿನ ಮೇಲೆ ತೂರಿ ಕೈಮುಗಿದು ನಮಿಸಿ ಹರಕೆ ಸಲ್ಲಿಸಿದರು. ಪಟಾಕಿ ಸದ್ದು, ವಿದ್ಯುತ್ ದೀಪಗಳ ಅಲಂಕಾರ ಭಕ್ತರನ್ನು ಆಕರ್ಷಿಸಿತು.</p>.<p>ಇದಕ್ಕೂ ಮುಂಚೆ ನಸುಕಿನ ಜಾವ ಮೆರವಣಿಗೆಯೊಂದಿಗೆ ಹೊರವಲಯದ ಅಣಿವೀರಭದ್ರೇಶ್ವರ ಗುಡಿಯಿಂದ ಹೂವು ತಂದು ಪೂಜೆ ಸಲ್ಲಿಸಿ ಪುರವಂತರೊಂದಿಗೆ ಭಕ್ತಿಭಾವದಿಂದ ಅಗ್ಗಿ ತುಳಿದರು. ವಿವಿಧೆಡೆಯ ಭಕ್ತರು ಅಣಿವೀರಭದ್ರೇಶ್ವರ ದೇವಸ್ಥಾನಕ್ಕೆ ಆಗಮಿಸಿ ಕಾಯಿಕರ್ಪೂರ, ನೈವೇದ್ಯ, ಹೂಹಾರ ಸಮರ್ಪಿಸಿದರು.</p>.<p>ಗುರುವಾರ ಜಂಗಿ ಕುಸ್ತಿಗಳು ಏರ್ಪಟ್ಟು ವಿಜೇತರಿಗೆ ಬಹುಮಾನ ನೀಡಲಾಯಿತು. ಜಾತ್ರೆ ನಿಮಿತ್ತ ದೇವರ ಗಂಗಾಭಿಷೇಕ, ದೇವರ ಪಲ್ಲಕ್ಕಿ ಮತ್ತು ನಂದಿ ಧ್ವಜದ ಮೆರವಣಿಗೆ ನೆರವೇರಿತು.</p>.<p>ಹೆಬ್ಬಾಳ, ಚಿಂಚೋಳಿ (ಎಚ್), ಕಮಕನೂರ, ತೊಂಚಿ, ಸಾವತಖೇಡ, ನಿಪ್ಪಾಣಿ, ಹುಳಗೇರಿ, ಕಂದಗೂಳ, ಬಣಬಿ ಸುತ್ತಲಿನ ವಿವಿಧೆಡೆಯ ಭಕ್ತರು ಪಾಲ್ಗೊಂಡು ದೇವರ ಪ್ರಸಾದ ಸ್ವೀಕರಿಸಿದರು.</p>.<p>ದೇವಸ್ಥಾನದ ಟ್ರಸ್ಟ್ ಕಮಿಟಿಯ ಪದಾಧಿಕಾರಿಗಳು ಸೇರಿದಂತೆ ಅಪಾರ ಭಕ್ತಸಮೂಹ ಭಾಗವಹಿಸಿತು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260504-31-203893441</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>