ಕಲಬುರ್ಗಿ:‘ಗುಲಬರ್ಗಾ’ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ ಅವರ ಮತ ಬೀದರ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇರುವ ಕಾರಣ ಅವರು ತಮಗೆ ಮತ ಹಾಕಿಕೊಳ್ಳುವ ಅವಕಾಶದಿಂದ ವಂಚಿತರಾದರು.
ಜಾಧವ ಅವರ ಮತವು ಕಲಬುರ್ಗಿ ಜಿಲ್ಲೆಯ ಚಿಂಚೋಳಿ ಕ್ಷೇತ್ರದ ವ್ಯಾಪ್ತಿಯಕಾಳಗಿ ತಾಲ್ಲೂಕು ಬೆಡಸೂರ (ಮೇಲಿನ ತಾಂಡಾ)ದಲ್ಲಿದೆ.ಇದು ಬೀದರ್ ಲೋಕಸಭಾ ಕ್ಷೇತ್ರಕ್ಕೆ ಒಳಪಟ್ಟಿದೆ. ಬೆಳಿಗ್ಗೆ ಬೆಡಸೂರಿನ ಮತದಾನ ಕೇಂದ್ರಕ್ಕೆ ತೆರಳಿದ ಜಾಧವ ಅವರು ತಮ್ಮ ಹಕ್ಕು ಚಲಾಯಿಸಿದರು.