<p><strong>ಕಲಬುರಗಿ</strong>: ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಕೊನೆಯ ಸ್ಥಾನದ ಹಣೆಪಟ್ಟಿ ಕಳಚಿಕೊಳ್ಳಲು ಕಲ್ಯಾಣ ಕರ್ನಾಟಕದ ಕೆಲ ಜಿಲ್ಲೆಗಳಿಗೆ ಇನ್ನೂ ಸಾಧ್ಯವಾಗಿಲ್ಲ. ಇದಕ್ಕೆ ಹಲವು ಕಾರಣಗಳಿದ್ದು, ಅವುಗಳಲ್ಲಿ ಶಿಕ್ಷಕರ ಕೊರತೆಯೂ ಒಂದಾಗಿದೆ.</p>.<p>ಏಳು ಜಿಲ್ಲೆಗಳಲ್ಲಿ ಪ್ರೌಢಶಾಲಾ ಶಿಕ್ಷಕರ 4,107 ಹುದ್ದೆಗಳು ಖಾಲಿ ಇವೆ. 11,745 ಹುದ್ದೆ ಮಂಜೂರಾಗಿದ್ದು, 7,638 ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. 34 ಬಿಇಒ ಕಚೇರಿಗಳ ಪೈಕಿ 25 ಬ್ಲಾಕ್ ವ್ಯಾಪ್ತಿಯ ಪ್ರೌಢಶಾಲೆಗಳು ತೀವ್ರ ಶಿಕ್ಷಕರ ಕೊರತೆ ಎದುರಿಸುತ್ತಿವೆ.</p>.<p>ಕೆಲ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವ್ಯಾಪ್ತಿಯಲ್ಲಿ ಮಂಜೂರಾದ ಹುದ್ದೆಗಳಲ್ಲಿ ಶೇ 50ಕ್ಕಿಂತ ಹೆಚ್ಚು ಹುದ್ದೆಗಳು ಖಾಲಿ ಇವೆ. ಇದು ವಿದ್ಯಾರ್ಥಿಗಳ ಕಲಿಕೆ ಹಾಗೂ ಫಲಿತಾಂಶದ ಮೇಲೆ ನೇರ ಪರಿಣಾಮ ಉಂಟು ಮಾಡುತ್ತಿದೆ.</p>.<p>ದೇವದುರ್ಗದಲ್ಲಿ ಹೆಚ್ಚು: ರಾಯಚೂರು ಜಿಲ್ಲೆಯ ದೇವದುರ್ಗ ಬಿಇಒ ಕಚೇರಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಶಿಕ್ಷಕರ ಹುದ್ದೆಗಳು ಅಂದರೆ, ಶೇ 62ಕ್ಕಿಂತ ಹೆಚ್ಚು ಖಾಲಿ ಇವೆ. ಮಂಜೂರಾದ 385 ಹುದ್ದೆಗಳಲ್ಲಿ ಬರೋಬ್ಬರಿ 200 ಹುದ್ದೆಗಳು ಖಾಲಿ ಬಿದ್ದಿವೆ ಎನ್ನುವ ಕಟು ವಾಸ್ತವವನ್ನು ಅಂಕಿ–ಅಂಶಗಳು ಪ್ರತಿಫಲಿಸುತ್ತವೆ.</p>.<p>ಮಾನ್ವಿ ಶೇ 57, ಬಳ್ಳಾರಿ ಜಿಲ್ಲೆಯ ಸಂಡೂರು, ಸಿರುಗುಪ್ಪ ತಲಾ ಶೇ 54, ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ಶೇ 51, ರಾಯಚೂರಿನ ಸಿಂಧನೂರು ಶೇ 49, ಯಾದಗಿರಿಯ ಶಹಾಪುರ ಶೇ 44, ಕೊಪ್ಪಳ ಜಿಲ್ಲೆ ಗಂಗಾವತಿ ಶೇ 43, ಯಲಬುರ್ಗಾ ಶೇ 41, ಕಲಬುರಗಿ ಜಿಲ್ಲೆಯ ಚಿಂಚೋಳಿ ಬಿಇಒ ಕಚೇರಿ ವ್ಯಾಪ್ತಿಯಲ್ಲಿ ಶೇ 40ರಷ್ಟು ಶಿಕ್ಷಕರ ಹುದ್ದೆಗಳು ಖಾಲಿ ಇವೆ.</p>.<p>‘ಕಾಯಂ ಶಿಕ್ಷಕರಿಲ್ಲದ ಕಾರಣ ಇಲಾಖೆಗೆ ‘ಅತಿಥಿ’ಗಳೇ ಆಸರೆಯಾಗಿದ್ದಾರೆ. ಶೈಕ್ಷಣಿಕ ಗುಣಮಟ್ಟ ಕುಸಿಯುತ್ತಿದೆ. ಹಿಂದುಳಿದ ಜಿಲ್ಲೆಗಳು ಎನ್ನುವ ಮೂದಲಿಕೆ ದೂರವಾಗುತ್ತಿಲ್ಲ. ಆದ್ದರಿಂದ ಸರ್ಕಾರ ಕಾಯಂ ಶಿಕ್ಷಕರನ್ನು ನೇಮಕ ಮಾಡಬೇಕು. ಹೊಸ ತಾಲ್ಲೂಕುಗಳಲ್ಲಿ ಬಿಇಒ ಕಚೇರಿಗಳನ್ನು ಸ್ಥಾಪಿಸಬೇಕು’ ಎಂದು ಈ ಭಾಗದ ಜನರು ಒತ್ತಾಯಿಸುತ್ತಾರೆ.</p>.<p>ಪ್ರತಿಕ್ರಿಯೆ ಪಡೆಯಲು ಶಾಲಾ ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತರನ್ನು ಸಂಪರ್ಕಿಸಿದಾಗ ಅವರು ಲಭ್ಯವಾಗಲಿಲ್ಲ.</p>.<div><blockquote>ಶಿಕ್ಷಕರ ಕೊರತೆಯ ನಡುವೆಯೂ ಅತಿಥಿ ಶಿಕ್ಷಕರು ಸೇರಿ ಹಲವರ ಸಹಕಾರದಿಂದ ತಾಲ್ಲೂಕಿಗೆ ಈ ಬಾರಿ ಉತ್ತಮ ಫಲಿತಾಂಶ ಬಂದಿದೆ </blockquote><span class="attribution">ಮಲ್ಲಿಕಾರ್ಜುನ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ದೇವದುರ್ಗ</span></div>. <p><strong>ಬಿಇಒ ಕಚೇರಿ ಸ್ಥಾಪನೆ ನನೆಗುದಿಗೆ</strong></p><p>ಮೇಲ್ವಿಚಾರಣೆ, ನಿರ್ವಹಣೆ ಹಾಗೂ ಇಲಾಖೆ ನೀತಿಗಳನ್ನು ತಳಮಟ್ಟದಲ್ಲಿ ಜಾರಿಗೆ ತರಲು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಅಗತ್ಯ. ಆದರೆ, ಕಲ್ಯಾಣದಲ್ಲಿ ಕೇವಲ 34 ತಾಲ್ಲೂಕುಗಳಲ್ಲಿ ಬಿಇಒ ಕಚೇರಿಗಳಿವೆ. ಬಹುತೇಕ ಹೊಸ ತಾಲ್ಲೂಕುಗಳಲ್ಲಿ ಕಚೇರಿಗಳಿಲ್ಲ. ಕಾರಣ ಶಿಕ್ಷಣ ಇಲಾಖೆ ಕೆಲಸಗಳಿಗೆ ಅವಿಭಜಿತ ತಾಲ್ಲೂಕುಗಳಿಗೆ ಎಡತಾಕುವುದು ಅನಿವಾರ್ಯವಾಗಿದೆ.</p><p>ಕಲ್ಯಾಣ ಕರ್ನಾಟಕದ 14 ಹೊಸ ತಾಲ್ಲೂಕುಗಳಲ್ಲಿ ಬಿಇಒ ಕಚೇರಿ ಸ್ಥಾಪಿಸಬೇಕು ಎಂದು ಛಾಯಾ ದೇಗಾಂವಕರ ನೇತೃತ್ವದ ಕೆಕೆಆರ್ಡಿಬಿಯ ಶಿಕ್ಷಣ ತಜ್ಞರ ಸಮಿತಿ ಶಿಫಾರಸು ಮಾಡಿದೆ. ಅಲ್ಲದೆ, ಇಲ್ಲಿಯ ಜನಪ್ರತಿನಿಧಿಗಳು ಬೇಡಿಕೆ ಹಾಗೂ ಶಿಫಾರಸು ಪತ್ರಗಳನ್ನು ನೀಡಿ ಕಚೇರಿಗಳ ಸ್ಥಾಪನೆಗೆ ಆಗ್ರಹಿಸಿದ್ದಾರೆ. </p><p>ಕಚೇರಿ ಸ್ಥಾಪನೆ ಬಳಿಕ ಮಂಜೂರಾತಿ ಹುದ್ದೆಗಳಿಗೆ ಮೂರು ವರ್ಷಗಳ ಅವಧಿಗೆ ಕೆಕೆಆರ್ಡಿಬಿಯಿಂದ ವೇತನ, ಮೂಲಸೌಕರ್ಯ ಹಾಗೂ ವಾಹನ ವ್ಯವಸ್ಥೆ ಮಾಡಲು ಮಂಡಳಿ ಒಪ್ಪಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತರು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಕಳೆದ ಜುಲೈನಲ್ಲಿಯೇ ಪ್ರಸ್ತಾವ ಕಳುಹಿಸಿದ್ದಾರೆ. ಆದರೂ ಅದು ಇನ್ನೂ ಸರ್ಕಾರದ ಹಂತದಲ್ಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ</strong>: ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಕೊನೆಯ ಸ್ಥಾನದ ಹಣೆಪಟ್ಟಿ ಕಳಚಿಕೊಳ್ಳಲು ಕಲ್ಯಾಣ ಕರ್ನಾಟಕದ ಕೆಲ ಜಿಲ್ಲೆಗಳಿಗೆ ಇನ್ನೂ ಸಾಧ್ಯವಾಗಿಲ್ಲ. ಇದಕ್ಕೆ ಹಲವು ಕಾರಣಗಳಿದ್ದು, ಅವುಗಳಲ್ಲಿ ಶಿಕ್ಷಕರ ಕೊರತೆಯೂ ಒಂದಾಗಿದೆ.</p>.<p>ಏಳು ಜಿಲ್ಲೆಗಳಲ್ಲಿ ಪ್ರೌಢಶಾಲಾ ಶಿಕ್ಷಕರ 4,107 ಹುದ್ದೆಗಳು ಖಾಲಿ ಇವೆ. 11,745 ಹುದ್ದೆ ಮಂಜೂರಾಗಿದ್ದು, 7,638 ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. 34 ಬಿಇಒ ಕಚೇರಿಗಳ ಪೈಕಿ 25 ಬ್ಲಾಕ್ ವ್ಯಾಪ್ತಿಯ ಪ್ರೌಢಶಾಲೆಗಳು ತೀವ್ರ ಶಿಕ್ಷಕರ ಕೊರತೆ ಎದುರಿಸುತ್ತಿವೆ.</p>.<p>ಕೆಲ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವ್ಯಾಪ್ತಿಯಲ್ಲಿ ಮಂಜೂರಾದ ಹುದ್ದೆಗಳಲ್ಲಿ ಶೇ 50ಕ್ಕಿಂತ ಹೆಚ್ಚು ಹುದ್ದೆಗಳು ಖಾಲಿ ಇವೆ. ಇದು ವಿದ್ಯಾರ್ಥಿಗಳ ಕಲಿಕೆ ಹಾಗೂ ಫಲಿತಾಂಶದ ಮೇಲೆ ನೇರ ಪರಿಣಾಮ ಉಂಟು ಮಾಡುತ್ತಿದೆ.</p>.<p>ದೇವದುರ್ಗದಲ್ಲಿ ಹೆಚ್ಚು: ರಾಯಚೂರು ಜಿಲ್ಲೆಯ ದೇವದುರ್ಗ ಬಿಇಒ ಕಚೇರಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಶಿಕ್ಷಕರ ಹುದ್ದೆಗಳು ಅಂದರೆ, ಶೇ 62ಕ್ಕಿಂತ ಹೆಚ್ಚು ಖಾಲಿ ಇವೆ. ಮಂಜೂರಾದ 385 ಹುದ್ದೆಗಳಲ್ಲಿ ಬರೋಬ್ಬರಿ 200 ಹುದ್ದೆಗಳು ಖಾಲಿ ಬಿದ್ದಿವೆ ಎನ್ನುವ ಕಟು ವಾಸ್ತವವನ್ನು ಅಂಕಿ–ಅಂಶಗಳು ಪ್ರತಿಫಲಿಸುತ್ತವೆ.</p>.<p>ಮಾನ್ವಿ ಶೇ 57, ಬಳ್ಳಾರಿ ಜಿಲ್ಲೆಯ ಸಂಡೂರು, ಸಿರುಗುಪ್ಪ ತಲಾ ಶೇ 54, ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ಶೇ 51, ರಾಯಚೂರಿನ ಸಿಂಧನೂರು ಶೇ 49, ಯಾದಗಿರಿಯ ಶಹಾಪುರ ಶೇ 44, ಕೊಪ್ಪಳ ಜಿಲ್ಲೆ ಗಂಗಾವತಿ ಶೇ 43, ಯಲಬುರ್ಗಾ ಶೇ 41, ಕಲಬುರಗಿ ಜಿಲ್ಲೆಯ ಚಿಂಚೋಳಿ ಬಿಇಒ ಕಚೇರಿ ವ್ಯಾಪ್ತಿಯಲ್ಲಿ ಶೇ 40ರಷ್ಟು ಶಿಕ್ಷಕರ ಹುದ್ದೆಗಳು ಖಾಲಿ ಇವೆ.</p>.<p>‘ಕಾಯಂ ಶಿಕ್ಷಕರಿಲ್ಲದ ಕಾರಣ ಇಲಾಖೆಗೆ ‘ಅತಿಥಿ’ಗಳೇ ಆಸರೆಯಾಗಿದ್ದಾರೆ. ಶೈಕ್ಷಣಿಕ ಗುಣಮಟ್ಟ ಕುಸಿಯುತ್ತಿದೆ. ಹಿಂದುಳಿದ ಜಿಲ್ಲೆಗಳು ಎನ್ನುವ ಮೂದಲಿಕೆ ದೂರವಾಗುತ್ತಿಲ್ಲ. ಆದ್ದರಿಂದ ಸರ್ಕಾರ ಕಾಯಂ ಶಿಕ್ಷಕರನ್ನು ನೇಮಕ ಮಾಡಬೇಕು. ಹೊಸ ತಾಲ್ಲೂಕುಗಳಲ್ಲಿ ಬಿಇಒ ಕಚೇರಿಗಳನ್ನು ಸ್ಥಾಪಿಸಬೇಕು’ ಎಂದು ಈ ಭಾಗದ ಜನರು ಒತ್ತಾಯಿಸುತ್ತಾರೆ.</p>.<p>ಪ್ರತಿಕ್ರಿಯೆ ಪಡೆಯಲು ಶಾಲಾ ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತರನ್ನು ಸಂಪರ್ಕಿಸಿದಾಗ ಅವರು ಲಭ್ಯವಾಗಲಿಲ್ಲ.</p>.<div><blockquote>ಶಿಕ್ಷಕರ ಕೊರತೆಯ ನಡುವೆಯೂ ಅತಿಥಿ ಶಿಕ್ಷಕರು ಸೇರಿ ಹಲವರ ಸಹಕಾರದಿಂದ ತಾಲ್ಲೂಕಿಗೆ ಈ ಬಾರಿ ಉತ್ತಮ ಫಲಿತಾಂಶ ಬಂದಿದೆ </blockquote><span class="attribution">ಮಲ್ಲಿಕಾರ್ಜುನ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ದೇವದುರ್ಗ</span></div>. <p><strong>ಬಿಇಒ ಕಚೇರಿ ಸ್ಥಾಪನೆ ನನೆಗುದಿಗೆ</strong></p><p>ಮೇಲ್ವಿಚಾರಣೆ, ನಿರ್ವಹಣೆ ಹಾಗೂ ಇಲಾಖೆ ನೀತಿಗಳನ್ನು ತಳಮಟ್ಟದಲ್ಲಿ ಜಾರಿಗೆ ತರಲು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಅಗತ್ಯ. ಆದರೆ, ಕಲ್ಯಾಣದಲ್ಲಿ ಕೇವಲ 34 ತಾಲ್ಲೂಕುಗಳಲ್ಲಿ ಬಿಇಒ ಕಚೇರಿಗಳಿವೆ. ಬಹುತೇಕ ಹೊಸ ತಾಲ್ಲೂಕುಗಳಲ್ಲಿ ಕಚೇರಿಗಳಿಲ್ಲ. ಕಾರಣ ಶಿಕ್ಷಣ ಇಲಾಖೆ ಕೆಲಸಗಳಿಗೆ ಅವಿಭಜಿತ ತಾಲ್ಲೂಕುಗಳಿಗೆ ಎಡತಾಕುವುದು ಅನಿವಾರ್ಯವಾಗಿದೆ.</p><p>ಕಲ್ಯಾಣ ಕರ್ನಾಟಕದ 14 ಹೊಸ ತಾಲ್ಲೂಕುಗಳಲ್ಲಿ ಬಿಇಒ ಕಚೇರಿ ಸ್ಥಾಪಿಸಬೇಕು ಎಂದು ಛಾಯಾ ದೇಗಾಂವಕರ ನೇತೃತ್ವದ ಕೆಕೆಆರ್ಡಿಬಿಯ ಶಿಕ್ಷಣ ತಜ್ಞರ ಸಮಿತಿ ಶಿಫಾರಸು ಮಾಡಿದೆ. ಅಲ್ಲದೆ, ಇಲ್ಲಿಯ ಜನಪ್ರತಿನಿಧಿಗಳು ಬೇಡಿಕೆ ಹಾಗೂ ಶಿಫಾರಸು ಪತ್ರಗಳನ್ನು ನೀಡಿ ಕಚೇರಿಗಳ ಸ್ಥಾಪನೆಗೆ ಆಗ್ರಹಿಸಿದ್ದಾರೆ. </p><p>ಕಚೇರಿ ಸ್ಥಾಪನೆ ಬಳಿಕ ಮಂಜೂರಾತಿ ಹುದ್ದೆಗಳಿಗೆ ಮೂರು ವರ್ಷಗಳ ಅವಧಿಗೆ ಕೆಕೆಆರ್ಡಿಬಿಯಿಂದ ವೇತನ, ಮೂಲಸೌಕರ್ಯ ಹಾಗೂ ವಾಹನ ವ್ಯವಸ್ಥೆ ಮಾಡಲು ಮಂಡಳಿ ಒಪ್ಪಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತರು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಕಳೆದ ಜುಲೈನಲ್ಲಿಯೇ ಪ್ರಸ್ತಾವ ಕಳುಹಿಸಿದ್ದಾರೆ. ಆದರೂ ಅದು ಇನ್ನೂ ಸರ್ಕಾರದ ಹಂತದಲ್ಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>