<p><strong>ಕಮಲಾಪುರ:</strong> ತಾಲ್ಲೂಕಿನ ಎಮಜಿನಾಯಕ ತಾಂಡಾದಲ್ಲಿ ಅಂಗನವಾಡಿ ಕಂಪೌಂಡ್ ಕಾಮಗಾರಿ ಕೈಗೊಳ್ಳದೆ ಸಂಪೂರ್ಣ ಬಿಲ್ ಪಾವತಿ ಮಾಡಿ ಅಕ್ರಮ ನಡೆಸಿರುವ ಸಹಾಯಕ ಎಂಜಿನಿಯರ್ ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ತಾಂಡಾ ನಿವಾಸಿಗಳು ಒತ್ತಾಯಿಸಿದ್ದಾರೆ.</p>.<p>ಅಂಗನವಾಡಿಗೆ 1 ಕಪಾಟು, 1 ಕುರ್ಚಿ, 1 ಟೇಬಲ್, 1 ಬ್ಲಾಂಕೆಟ್, 1 ಗ್ರೈಂಡರ್ ಹಾಗೂ ಸುತ್ತಲೂ ಕಾಂಪೌಂಡ್ ನಿರ್ಮಾಣಕ್ಕೆ ಜಿಲ್ಲಾ ಪಂಚಾಯಿತಿ ಅನಿರ್ಬಂಧಿತ ಯೋಜನೆಯಡಿ ₹ 3,95,573 ಅನುದಾನ ಒದಗಿಸಲಾಗಿತ್ತು. ಈ ಕಾಮಗಾರಿ ಸುನಿಲ ರಾಠೋಡ ಎಂಬುವವರಿಗೆ ಟೆಂಡರ್ ಆಗಿದೆ.</p>.<p>ಸದ್ಯ 1 ಕಪಾಟು, 2 ಕುರ್ಚಿ, 1 ಟೇಬಲ್ ಮಾತ್ರ ಅಂಗನವಾಡಿಗೆ ಕೊಟ್ಟಿದ್ದಾರೆ. 20 ದಿನಗಳ ಹಿಂದೆಯೇ ₹3,69,305 ಬಿಲ್ ಪಾವತಿ ಮಾಡಿಕೊಂಡಿದ್ದಾರೆ. ಇದರ ಬಗ್ಗೆ ಸಾರ್ವಜನಿಕರು ಪರಿಶೀಲನೆ ನಡೆಸಿದ್ದು, ಬಿಲ್ ಪಾವತಿಸಿದ ಸಹಾಯಕ ಎಂಜಿನಿಯರ್ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ. ಆಗ ಸ್ವಲ್ಪ ಮರಳು, ಕೆಂಪು ಕಲ್ಲುಗಳನ್ನು ತಂದು ಹಾಕಿದಂತೆ ಮಾಡಿದ್ದಾರೆ. ಕಾಮಗಾರಿ ಮಾತ್ರ ಇನ್ನೂ ಆರಂಭಿಸಿಲ್ಲ.</p>.<p>‘ಸಹಾಯಕ ಎಂಜಿನಿಯರ್ ಅವರೇ ತಮಗೆ ಬೇಕಾದವರಿಗೆ ಕೆಲಸ ಒದಗಿಸಿ ಲಕ್ಷಗಟ್ಟಲೆ ಹಣ ಲಪಟಾಯಿಸುತ್ತಿದ್ದಾರೆ’ ಎಂದು ಮುಖಂಡರಾದ ರಾಜು ಜಾಧವ, ಮಾರುತಿ ಜಾಧವ, ಕಿರಣ ಜಾಧವ, ಹುಚ್ಚಪ್ಪ ಪಾಟೀಲ, ಮಂಜು ಚೀಲಿ ಆರೋಪಿಸಿದ್ದಾರೆ.</p>.<p>ಕಮಲಾಪುರ ತಾಲ್ಲೂಕಿನಲ್ಲಿ ತಾ.ಪಂ, ಜಿ.ಪಂ.ನ ಅನಿರ್ಬಂಧಿತ ಯೋಜನೆಯ ಕಾಮಗಾರಿಗಳೆಲ್ಲ ಬೋಗಸ್ ಆಗುತ್ತಿವೆ. ರಾಜಕೀಯ ಪಕ್ಷದ ಕಾರ್ಯಕರ್ತರು, ಎಂಜಿನಿಯರ್ಗಳು ಸೇರಿ ಕೋಟ್ಯಂತರ ರೂಪಾಯಿ ಲಪಟಾಯಿಸುತ್ತಿದ್ದಾರೆ. ದೂರು ನೀಡಿದರೆ ಪರಿಶೀಲನೆ ಮಾಡುವವರು ಸಹ ಭ್ರಷ್ಟರೇ ಇದ್ದಾರೆ. ಅವರು ಪರಿಶೀಲನೆಗೆ ಬಂದಾಗ ದೂರುದಾರರಿಗೆ ಮಾಹಿತಿಯೇ ಇರುವುದಿಲ್ಲ. ಎಲ್ಲವೂ ಸರಿಯಿದೆ ಎಂದು ವರದಿ ಮಾಡುತ್ತಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.</p>.<p>ಕಮಲಾಪುರ ತಾಲ್ಲೂಕಿನಲ್ಲಿ ಕೈಗೊಂಡ ಕಾಮಗಾರಿಗಳ ಕುರಿತು ಲೋಕಾಯುಕ್ತರು ಪರಿಶೀಲನೆ ನಡೆಸಬೇಕು. ಆಗ ಅಕ್ರಮ ಹೊರ ಬೀಳುತ್ತದೆ ಎಂದು ತಾಲ್ಲೂಕಿನ ಜನರ ಒತ್ತಾಯವಾಗಿದೆ.</p>.<div><blockquote>ಮಾರ್ಚ್ ತಿಂಗಳು ಮುಗಿದರೆ ಅನುದಾನ ಲ್ಯಾಪ್ಸ್ ಆಗುತ್ತದೆ. ಗುತ್ತಿಗೆದಾರರಿಗೆ ಪೂರ್ತಿ ಬಿಲ್ ಪಾವತಿಸಲಾಗಿದ್ದು, ಕಾಮಗಾರಿ ಕೈಗೊಳ್ಳಲಾಗುವುದು </blockquote><span class="attribution">ರಾಜೇಂದ್ರ ಪಂಚಾಯತ್ ರಾಜ್ ಜೆಇ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಮಲಾಪುರ:</strong> ತಾಲ್ಲೂಕಿನ ಎಮಜಿನಾಯಕ ತಾಂಡಾದಲ್ಲಿ ಅಂಗನವಾಡಿ ಕಂಪೌಂಡ್ ಕಾಮಗಾರಿ ಕೈಗೊಳ್ಳದೆ ಸಂಪೂರ್ಣ ಬಿಲ್ ಪಾವತಿ ಮಾಡಿ ಅಕ್ರಮ ನಡೆಸಿರುವ ಸಹಾಯಕ ಎಂಜಿನಿಯರ್ ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ತಾಂಡಾ ನಿವಾಸಿಗಳು ಒತ್ತಾಯಿಸಿದ್ದಾರೆ.</p>.<p>ಅಂಗನವಾಡಿಗೆ 1 ಕಪಾಟು, 1 ಕುರ್ಚಿ, 1 ಟೇಬಲ್, 1 ಬ್ಲಾಂಕೆಟ್, 1 ಗ್ರೈಂಡರ್ ಹಾಗೂ ಸುತ್ತಲೂ ಕಾಂಪೌಂಡ್ ನಿರ್ಮಾಣಕ್ಕೆ ಜಿಲ್ಲಾ ಪಂಚಾಯಿತಿ ಅನಿರ್ಬಂಧಿತ ಯೋಜನೆಯಡಿ ₹ 3,95,573 ಅನುದಾನ ಒದಗಿಸಲಾಗಿತ್ತು. ಈ ಕಾಮಗಾರಿ ಸುನಿಲ ರಾಠೋಡ ಎಂಬುವವರಿಗೆ ಟೆಂಡರ್ ಆಗಿದೆ.</p>.<p>ಸದ್ಯ 1 ಕಪಾಟು, 2 ಕುರ್ಚಿ, 1 ಟೇಬಲ್ ಮಾತ್ರ ಅಂಗನವಾಡಿಗೆ ಕೊಟ್ಟಿದ್ದಾರೆ. 20 ದಿನಗಳ ಹಿಂದೆಯೇ ₹3,69,305 ಬಿಲ್ ಪಾವತಿ ಮಾಡಿಕೊಂಡಿದ್ದಾರೆ. ಇದರ ಬಗ್ಗೆ ಸಾರ್ವಜನಿಕರು ಪರಿಶೀಲನೆ ನಡೆಸಿದ್ದು, ಬಿಲ್ ಪಾವತಿಸಿದ ಸಹಾಯಕ ಎಂಜಿನಿಯರ್ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ. ಆಗ ಸ್ವಲ್ಪ ಮರಳು, ಕೆಂಪು ಕಲ್ಲುಗಳನ್ನು ತಂದು ಹಾಕಿದಂತೆ ಮಾಡಿದ್ದಾರೆ. ಕಾಮಗಾರಿ ಮಾತ್ರ ಇನ್ನೂ ಆರಂಭಿಸಿಲ್ಲ.</p>.<p>‘ಸಹಾಯಕ ಎಂಜಿನಿಯರ್ ಅವರೇ ತಮಗೆ ಬೇಕಾದವರಿಗೆ ಕೆಲಸ ಒದಗಿಸಿ ಲಕ್ಷಗಟ್ಟಲೆ ಹಣ ಲಪಟಾಯಿಸುತ್ತಿದ್ದಾರೆ’ ಎಂದು ಮುಖಂಡರಾದ ರಾಜು ಜಾಧವ, ಮಾರುತಿ ಜಾಧವ, ಕಿರಣ ಜಾಧವ, ಹುಚ್ಚಪ್ಪ ಪಾಟೀಲ, ಮಂಜು ಚೀಲಿ ಆರೋಪಿಸಿದ್ದಾರೆ.</p>.<p>ಕಮಲಾಪುರ ತಾಲ್ಲೂಕಿನಲ್ಲಿ ತಾ.ಪಂ, ಜಿ.ಪಂ.ನ ಅನಿರ್ಬಂಧಿತ ಯೋಜನೆಯ ಕಾಮಗಾರಿಗಳೆಲ್ಲ ಬೋಗಸ್ ಆಗುತ್ತಿವೆ. ರಾಜಕೀಯ ಪಕ್ಷದ ಕಾರ್ಯಕರ್ತರು, ಎಂಜಿನಿಯರ್ಗಳು ಸೇರಿ ಕೋಟ್ಯಂತರ ರೂಪಾಯಿ ಲಪಟಾಯಿಸುತ್ತಿದ್ದಾರೆ. ದೂರು ನೀಡಿದರೆ ಪರಿಶೀಲನೆ ಮಾಡುವವರು ಸಹ ಭ್ರಷ್ಟರೇ ಇದ್ದಾರೆ. ಅವರು ಪರಿಶೀಲನೆಗೆ ಬಂದಾಗ ದೂರುದಾರರಿಗೆ ಮಾಹಿತಿಯೇ ಇರುವುದಿಲ್ಲ. ಎಲ್ಲವೂ ಸರಿಯಿದೆ ಎಂದು ವರದಿ ಮಾಡುತ್ತಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.</p>.<p>ಕಮಲಾಪುರ ತಾಲ್ಲೂಕಿನಲ್ಲಿ ಕೈಗೊಂಡ ಕಾಮಗಾರಿಗಳ ಕುರಿತು ಲೋಕಾಯುಕ್ತರು ಪರಿಶೀಲನೆ ನಡೆಸಬೇಕು. ಆಗ ಅಕ್ರಮ ಹೊರ ಬೀಳುತ್ತದೆ ಎಂದು ತಾಲ್ಲೂಕಿನ ಜನರ ಒತ್ತಾಯವಾಗಿದೆ.</p>.<div><blockquote>ಮಾರ್ಚ್ ತಿಂಗಳು ಮುಗಿದರೆ ಅನುದಾನ ಲ್ಯಾಪ್ಸ್ ಆಗುತ್ತದೆ. ಗುತ್ತಿಗೆದಾರರಿಗೆ ಪೂರ್ತಿ ಬಿಲ್ ಪಾವತಿಸಲಾಗಿದ್ದು, ಕಾಮಗಾರಿ ಕೈಗೊಳ್ಳಲಾಗುವುದು </blockquote><span class="attribution">ರಾಜೇಂದ್ರ ಪಂಚಾಯತ್ ರಾಜ್ ಜೆಇ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>