ಬಸವಣ್ಣನವರ ಬಗ್ಗೆ ಬಸನಗೌಡ ಪಾಟೀಲ ಯತ್ನಾಳ ಅಗೌರವದ ಹೇಳಿಕೆ ನೀಡಿದರೂ ಬಿಜೆಪಿಯವರು ತುಟಿಬಿಚ್ಚುತ್ತಿಲ್ಲ. ಕ್ರಿಮಿನಲ್ ಕೆಲಸ ಮಾಡಿ ಜೈಶ್ರೀರಾಮ್ ಎಂದರೆ ಎಲ್ಲಾ ಮುಚ್ಚಿಹೋಗುವುದಿಲ್ಲ
ಪ್ರಿಯಾಂಕ್ ಖರ್ಗೆ ಜಿಲ್ಲಾ ಉಸ್ತುವಾರಿ ಸಚಿವ
ಆಂದೋಲಾ ಶ್ರೀ ಸ್ವಾಮೀಜಿನಾ?
‘ಆಂದೋಲಾ ಸಿದ್ದಲಿಂಗ ಶ್ರೀ ಸ್ವಾಮೀಜಿನಾ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದರು. ಬಸವಕಲ್ಯಾಣದ ಮೂಲ ಅನುಭವ ಮಂಟಪ ಒತ್ತುವರಿಯಾಗಿದ್ದು ಪೀರ್ ಪಾಷಾ ಬಂಗ್ಲಾ ಆಗಿರುವ ಕುರಿತು ಸಿದ್ದಲಿಂಗ ಸ್ವಾಮೀಜಿ ಹಾಗೂ ದೆಹಲಿ ಚಲೋ ನಡೆಸುತ್ತಿರುವ ಬಗ್ಗೆ ಪ್ರಶ್ನಿಸಿದಾಗ ‘ಅವರ ಕಟ್ಟಡದ ಬಗ್ಗೆ ಹೈಕೋರ್ಟ್ ತೀರ್ಪು ನೀಡಿದೆ. ಅದನ್ನು ಮೊದಲು ನೋಡಿಕೊಳ್ಳಲಿ. ನ್ಯಾಯಾಲಯಕ್ಕೆ ಬೆಲೆ ಕೊಟ್ಟು ಅವರೇ ಅತಿಕ್ರಮಣ ತೆರವುಗೊಳಿಸಲಿ. ಇಲ್ಲದಿದ್ದರೆ ನಾನೂ ಇಲ್ಲಿ ಬುಲ್ಡೋಜರ್ ಬಾಬಾ ಆಗಬೇಕಾಗುತ್ತದೆ’ ಎಂದರು.