ಕಲಬುರ್ಗಿ: ಕ್ವಾರಂಟೈನ್ ಅವಧಿ ಮುಗಿಸಿದರೂ ಅಂತಿಮ ತಪಾಸಣಾ ವರದಿ ಬಂದಿಲ್ಲ ಎಂದು ನೆಪ ಹೇಳಿ ವೈದ್ಯರು ಬಿಡುಗಡೆ ಮಾಡುತ್ತಿಲ್ಲ ಎಂದು ಹಲವು ಮಂದಿ ಆರೋಪಿಸಿದ್ದಾರೆ. ಇಲ್ಲಿನ ಕೆಸರಟಗಿ ಗ್ರಾಮದ ಬಳಿ ಇರುವ ಕ್ವಾರಂಟೈನ್ ಕೇಂದ್ರದಲ್ಲಿ ಶುಕ್ರವಾರ ಬೆಳಿಗ್ಗೆ ವೈದ್ಯರೊಂದಿಗೆ ವಾಗ್ವಾದ ನಡೆಸಿದರು.
ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿರುವ ಕೊರೊನಾ ಪಾಸಿಟಿವ್ ಬಂದ ಸೋಂಕಿತರು ಈ ಆರೋಪ ಮಾಡಿದ್ದಾರೆ.
ವರದಿ ನೀಡುವಲ್ಲಿ ವಿಳಂಬ ನೀತಿ ಅನುಸರಿಸಲಾಗುತ್ತಿದ್ದು, ಪ್ರಭಾವಿಗಳಿಗೆ ಅರ್ಧಗಂಟೆಯಲ್ಲೇ ತಪಾಸಣಾ ವರದಿ ನೀಡಿ ಬಿಡುಗಡೆ ಮಾಡುತ್ತಿದ್ದಾರೆ ಎಂದೂ ಹಲವರು ಆಕ್ಷೇಪಿಸಿದರು.
ಗಂಟಲು ದ್ರವ ತೆಗೆದುಕೊಂಡು ವಾರ ಕಳೆದರೂ ಫಲಿತಾಂಶ ಬಂದಿಲ್ಲ. ನಮ್ಮನ್ನು ಬಿಟ್ಟುಬಿಡಿ ಎಂಬ ಬೇಡಿಕೆಗೆ ಮಣಿದ ವೈದ್ಯರು ಪಾಸಿಟಿವ್ ಬಂದರೆ ಮತ್ತೆ ಕ್ವಾರಂಟೈನ್ ಕೇಂದ್ರಕ್ಕೆ ದಾಖಲಾಗಬೇಕು ಎಂಬ ಷರತ್ತು ವಿಧಿಸಿ ಕೆಲವರನ್ನು ಬಿಡುಗಡೆ ಮಾಡಿದರು.