ಪ್ಯಾಕೇಜ್ ಕೊಡಿ:‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದುಡಿಯುವ ವರ್ಗವನ್ನು ಸಂಪೂರ್ಣ ನಿರ್ಲಕ್ಷ ಮಾಡಿವೆ. ರಾಜ್ಯದಲ್ಲಿ ವಲಸೆ ಕಾರ್ಮಿಕರು ಅನ್ನ, ಆಶ್ರಯಕ್ಕೆ ಪರದಾಡುವಂತಾಗಿದೆ. ಊರುಗಳಿಗೆ ಬರಲಾಗದೇ ದೊಡ್ಡ ನಗರಗಳಲ್ಲಿ ಸಿಲುಕಿರುವ ಜನ ಒಂದೆಡೆಯಾದರೆ, ಊರಿಗೆ ಬಂದು ನಿರುದ್ಯೋಗಿಗಳಾಗಿರುವ ಕಾರ್ಮಿಕರು ಮತ್ತೊಂದು ಕಡೆ ಇದ್ದಾರೆ. ಕೂಡಲೇ ಅವರ ಅನುಕೂಲಕ್ಕೆ ಪ್ರತ್ಯೇಕ ಪ್ಯಾಕೇಜ್ ಘೋಷಿಸಬೇಕು’ ಎಂದು ಒತ್ತಾಯಿಸಿದ್ದಾರೆ.