‘ನಗರದ ಶರಣಬಸವೇಶ್ವರ ರೆಸಿಡೆನ್ಶಿಯಲ್ ಶಾಲೆಯಲ್ಲಿ ಎಲ್ಕೆಜಿಯಿಂದ ಪಿಯುಸಿವರೆಗೆ ಓದಿದೆ. ನಂತರ ಎಂಜಿನಿಯರಿಂಗ್ ಪದವಿ ಓದಲು ಬೆಂಗಳೂರಿಗೆ 2013ರಲ್ಲಿ ತೆರಳಿದೆ. ಎಂಜಿನಿಯರಿಂಗ್ ಅಂತಿಮ ಸೆಮಿಸ್ಟರ್ನಲ್ಲಿರುವಾಗಲೇ ಅಣ್ಣನ ಸಲಹೆಯಂತೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಿದೆ. 2017ರ ಆಗಸ್ಟ್ನಲ್ಲಿ ಕೆಎಎಸ್ ಪ್ರಿಲಿಮ್ಸ್ ಪರೀಕ್ಷೆ ಬರೆದ ಬಳಿಕ ಡಿಸೆಂಬರ್ನಲ್ಲಿ ಮೇನ್ಸ್ ಪರೀಕ್ಷೆ ಬರೆದೆ. ಪಾಸಾಗುವೆ ಎಂಬ ನಂಬಿಕೆ ಇತ್ತು. ನನ್ನ ತಂದೆ–ತಾಯಿ, ಅಣ್ಣನ ಹಾರೈಕೆಯಿಂದ ನನ್ನ ಕನಸು ಈಡೇರಿದೆ’ ಎಂದರು.