ಜೇವರ್ಗಿ: ಪಟ್ಟಣದ ರಾಘವೇಂದ್ರ ಸ್ವಾಮಿ ಮಠದಲ್ಲಿ ಹಮ್ಮಿಕೊಂಡ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಹಿಳೆಯರು ರಾತ್ರಿ 12 ಗಂಟೆಗೆ ಶ್ರೀಕೃಷ್ಣನ ಜನನ ನಿಮಿತ್ತ ತೊಟ್ಟಿಲೋತ್ಸವ ನೆರವೇರಿಸಿದರು.
ಇದಕ್ಕೂ ಮುನ್ನ ಮಠದ ಅರ್ಚಕ ಪವನ ಆಚಾರ್ಯ ಜೋಶಿ ವಿಶೇಷ ಪೂಜೆ, ಅಲಂಕಾರ ನೆರವೇರಿಸಿದ್ದರು. ನಂತರ ಸ್ಥಳೀಯ ಮಹಿಳೆಯರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಕಿಶನರಾವ್ ಕುಲಕರ್ಣಿ ಹೇಮನೂರ, ಗುರುರಾಜ ಪೊದ್ದಾರ, ಕಲ್ಯಾಣರಾವ್ ಕಣಮೇಶ್ವರ, ಮನೋಜ ಕುಲಕರ್ಣಿ ಖಜೂರಿ, ದತ್ತಾತ್ರೆಯರಾವ್ ಕುಲಕರ್ಣಿ ರೇವನೂರ, ನಾರಾಯಣ ನೀಲೂರ ಸೇರಿದಂತೆ ಪಟ್ಟಣದ ಮಹಿಳೆಯರು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.