<p><strong>ಕಲಬುರಗಿ</strong>: ‘ದೇಶಭಕ್ತಿ ಸಂಘಟನೆಯಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ನಿಷೇಧ ಮಾಡುವುದು ಇಂದಿರಾ ಗಾಂಧಿ ಅವರ ಅಪ್ಪ ಜವಹರಲಾಲ್ ನೆಹರೂ ಅವರಿಂದಲೂ ಆಗಿಲ್ಲ. ಹೀಗಾಗಿ, ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ ಮಾತ್ರಕ್ಕೆ ನಿಷೇಧವಾಗುವುದಿಲ್ಲ. ಅಪ್ಪನ ಪ್ರಭಾವದಿಂದ ಸಚಿವರಾಗಿರುವ ಪ್ರಿಯಾಂಕ್ ಇನ್ನೂ ಎಳಸು’ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದರು.</p><p>ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೇಶದ ಹೆಮ್ಮೆಯ ದೇಶಭಕ್ತರ ಸಂಘಟನೆಯಾದ ಆರ್ಎಸ್ಎಸ್ಗೆ ಇದೀಗ 100 ವರ್ಷಗಳು ತುಂಬಿವೆ. ಪ್ರತಿ ವರ್ಷ ವಿವಿಧೆಡೆ ಲಕ್ಷಾಂತರ ಜನರು ಸೇರಿ ನಗರ, ಗ್ರಾಮೀಣ ಪ್ರದೇಶದಲ್ಲಿ ಪಥಸಂಚಲನ ನಡೆಸುತ್ತಾರೆ. ಆದರೂ, ಒಂದೇ ಒಂದು ಗಲಾಟೆ ಆಗಿಲ್ಲ. ಇಂತಹ ಸಂಘಟನೆಯನ್ನು ನಿಷೇಧ ಮಾಡುವ ಬಗ್ಗೆ ಮಾತನಾಡುವುದು ಖಂಡನೀಯ’ ಎಂದರು.</p><p>ಆರ್ಎಸ್ಎಸ್ ಹಾಗೂ ದೇಶದ ಗುಪ್ತಚರ ಸಂಸ್ಥೆ ‘ರಾ’ವನ್ನು ನಿಷೇಧಿಸುವ ಕುರಿತು ಅಮೆರಿಕದ ಸರ್ಕಾರಿ ಆಯೋಗವೊಂದು ವರದಿ ನೀಡಿರುವುದು ಖಂಡನೀಯ. ಭಾರತದಲ್ಲಿ ಆರ್ಎಸ್ಎಸ್ ಮಾಡಿದ ಜನಕಲ್ಯಾಣದ ಅರಿವು ಆಯೋಗದ ವರದಿ ತಯಾರಿಸಿದವರಿಗೆ ಇದ್ದಂತಿಲ್ಲ ಎಂದು ಈಶ್ವರಪ್ಪ ಹೇಳಿದರು.</p><p>‘ಮುಂಬರುವ ಉಪಚುನಾವಣೆ ಹಾಗೂ ವಿಧಾನಪರಿಷತ್ ಚುನಾವಣೆಗಳಲ್ಲಿ ನಾನು ಯಾವುದೇ ಪಕ್ಷದ ಪರ ಪ್ರಚಾರ ಮಾಡುವುದಿಲ್ಲ. ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು ಕರೆ ಮಾಡಿ ರಾಜ್ಯದಲ್ಲಿ ಪಕ್ಷದ ನೇತೃತ್ವ ವಹಿಸುವಂತೆ ಮನವಿ ಮಾಡಿದ್ದರು. ಕಾಂಗ್ರೆಸ್ನವರೂ ತಮ್ಮ ಪಕ್ಷಕ್ಕೆ ಆಹ್ವಾನಿಸಿದ್ದರು. ನನ್ನ ಜೀವನದಲ್ಲಿ ಬಿಜೆಪಿ ಹೊರತುಪಡಿಸಿ ಬೇರೆ ಪಕ್ಷವನ್ನು ಸೇರುವುದಿಲ್ಲ’ ಎಂದರು.</p>.<div><blockquote>ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರ ಅಭಿವೃದ್ಧಿಗೆ ₹1000 ಕೋಟಿ ನೀಡಿದ್ದಾರೆ. ಅಲ್ಪಸಂಖ್ಯಾತರ ಸಾಲ ಮನ್ನಾ, ಹಜ್ ಭವನ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಅವರಿಗೆ ದಲಿತರು, ಹಿಂದುಳಿದವರು ಕಾಣಲಿಲ್ಲವೇ? </blockquote><span class="attribution">ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವ</span></div>.<h2> ‘ಕುಟುಂಬ ರಾಜಕಾರಣದಿಂದ ಪಕ್ಷಕ್ಕೆ ಹಿನ್ನಡೆ’</h2><p>ಪ್ರಧಾನಿ ನರೇಂದ್ರ ಮೋದಿ ಅವರು ಕುಟುಂಬ ರಾಜಕಾರಣವನ್ನು ಒಪ್ಪುವುದಿಲ್ಲ. ಆದರೆ, ರಾಜ್ಯ ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿದ್ದರಿಂದ, ಪಕ್ಷದ ನಾಯಕರು ಸ್ವಜನ ಪಕ್ಷಪಾತದಲ್ಲಿ ತೊಡಗಿದ್ದರಿಂದ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆಯುಂಟಾಯಿತು ಎಂದು ವಿಜಯೇಂದ್ರ ಅವರ ಹೆಸರು ಪ್ರಸ್ತಾಪಿಸದೇ ಪರೋಕ್ಷವಾಗಿ ಟೀಕಿಸಿದರು.</p><p>‘ರಾಜ್ಯ ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಅಂತ್ಯವಾದ ಮೇಲೆ ನಾನು ಪಕ್ಷ ಸೇರುತ್ತೇನೆ. ನಾನೇನು ಸನ್ಯಾಸಿಯಲ್ಲ. ಮಾತುಕತೆಗೆ ಕುಳಿತಾಗ ಯಾವ ಸ್ಥಾನ ನೀಡುತ್ತಾರೋ ಎಂದು ನೋಡಿಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ</strong>: ‘ದೇಶಭಕ್ತಿ ಸಂಘಟನೆಯಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ನಿಷೇಧ ಮಾಡುವುದು ಇಂದಿರಾ ಗಾಂಧಿ ಅವರ ಅಪ್ಪ ಜವಹರಲಾಲ್ ನೆಹರೂ ಅವರಿಂದಲೂ ಆಗಿಲ್ಲ. ಹೀಗಾಗಿ, ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ ಮಾತ್ರಕ್ಕೆ ನಿಷೇಧವಾಗುವುದಿಲ್ಲ. ಅಪ್ಪನ ಪ್ರಭಾವದಿಂದ ಸಚಿವರಾಗಿರುವ ಪ್ರಿಯಾಂಕ್ ಇನ್ನೂ ಎಳಸು’ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದರು.</p><p>ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೇಶದ ಹೆಮ್ಮೆಯ ದೇಶಭಕ್ತರ ಸಂಘಟನೆಯಾದ ಆರ್ಎಸ್ಎಸ್ಗೆ ಇದೀಗ 100 ವರ್ಷಗಳು ತುಂಬಿವೆ. ಪ್ರತಿ ವರ್ಷ ವಿವಿಧೆಡೆ ಲಕ್ಷಾಂತರ ಜನರು ಸೇರಿ ನಗರ, ಗ್ರಾಮೀಣ ಪ್ರದೇಶದಲ್ಲಿ ಪಥಸಂಚಲನ ನಡೆಸುತ್ತಾರೆ. ಆದರೂ, ಒಂದೇ ಒಂದು ಗಲಾಟೆ ಆಗಿಲ್ಲ. ಇಂತಹ ಸಂಘಟನೆಯನ್ನು ನಿಷೇಧ ಮಾಡುವ ಬಗ್ಗೆ ಮಾತನಾಡುವುದು ಖಂಡನೀಯ’ ಎಂದರು.</p><p>ಆರ್ಎಸ್ಎಸ್ ಹಾಗೂ ದೇಶದ ಗುಪ್ತಚರ ಸಂಸ್ಥೆ ‘ರಾ’ವನ್ನು ನಿಷೇಧಿಸುವ ಕುರಿತು ಅಮೆರಿಕದ ಸರ್ಕಾರಿ ಆಯೋಗವೊಂದು ವರದಿ ನೀಡಿರುವುದು ಖಂಡನೀಯ. ಭಾರತದಲ್ಲಿ ಆರ್ಎಸ್ಎಸ್ ಮಾಡಿದ ಜನಕಲ್ಯಾಣದ ಅರಿವು ಆಯೋಗದ ವರದಿ ತಯಾರಿಸಿದವರಿಗೆ ಇದ್ದಂತಿಲ್ಲ ಎಂದು ಈಶ್ವರಪ್ಪ ಹೇಳಿದರು.</p><p>‘ಮುಂಬರುವ ಉಪಚುನಾವಣೆ ಹಾಗೂ ವಿಧಾನಪರಿಷತ್ ಚುನಾವಣೆಗಳಲ್ಲಿ ನಾನು ಯಾವುದೇ ಪಕ್ಷದ ಪರ ಪ್ರಚಾರ ಮಾಡುವುದಿಲ್ಲ. ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು ಕರೆ ಮಾಡಿ ರಾಜ್ಯದಲ್ಲಿ ಪಕ್ಷದ ನೇತೃತ್ವ ವಹಿಸುವಂತೆ ಮನವಿ ಮಾಡಿದ್ದರು. ಕಾಂಗ್ರೆಸ್ನವರೂ ತಮ್ಮ ಪಕ್ಷಕ್ಕೆ ಆಹ್ವಾನಿಸಿದ್ದರು. ನನ್ನ ಜೀವನದಲ್ಲಿ ಬಿಜೆಪಿ ಹೊರತುಪಡಿಸಿ ಬೇರೆ ಪಕ್ಷವನ್ನು ಸೇರುವುದಿಲ್ಲ’ ಎಂದರು.</p>.<div><blockquote>ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರ ಅಭಿವೃದ್ಧಿಗೆ ₹1000 ಕೋಟಿ ನೀಡಿದ್ದಾರೆ. ಅಲ್ಪಸಂಖ್ಯಾತರ ಸಾಲ ಮನ್ನಾ, ಹಜ್ ಭವನ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಅವರಿಗೆ ದಲಿತರು, ಹಿಂದುಳಿದವರು ಕಾಣಲಿಲ್ಲವೇ? </blockquote><span class="attribution">ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವ</span></div>.<h2> ‘ಕುಟುಂಬ ರಾಜಕಾರಣದಿಂದ ಪಕ್ಷಕ್ಕೆ ಹಿನ್ನಡೆ’</h2><p>ಪ್ರಧಾನಿ ನರೇಂದ್ರ ಮೋದಿ ಅವರು ಕುಟುಂಬ ರಾಜಕಾರಣವನ್ನು ಒಪ್ಪುವುದಿಲ್ಲ. ಆದರೆ, ರಾಜ್ಯ ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿದ್ದರಿಂದ, ಪಕ್ಷದ ನಾಯಕರು ಸ್ವಜನ ಪಕ್ಷಪಾತದಲ್ಲಿ ತೊಡಗಿದ್ದರಿಂದ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆಯುಂಟಾಯಿತು ಎಂದು ವಿಜಯೇಂದ್ರ ಅವರ ಹೆಸರು ಪ್ರಸ್ತಾಪಿಸದೇ ಪರೋಕ್ಷವಾಗಿ ಟೀಕಿಸಿದರು.</p><p>‘ರಾಜ್ಯ ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಅಂತ್ಯವಾದ ಮೇಲೆ ನಾನು ಪಕ್ಷ ಸೇರುತ್ತೇನೆ. ನಾನೇನು ಸನ್ಯಾಸಿಯಲ್ಲ. ಮಾತುಕತೆಗೆ ಕುಳಿತಾಗ ಯಾವ ಸ್ಥಾನ ನೀಡುತ್ತಾರೋ ಎಂದು ನೋಡಿಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>