ಜೆ.ಎಂ. ಕೊರಬು ಫೌಂಡೇಷನ್ನ ಸಂಸ್ಥಾಪಕ ಅಧ್ಯಕ್ಷ ಜೆ.ಎಂ.ಕೊರಬು ಮಾತನಾಡಿ, ‘ಈಗಾಗಲೇ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳಲ್ಲಿ ಎಸ್ಸಿ, ಎಸ್ಟಿ ಮೀಸಲಾತಿ ಜಾರಿ ಇರುವಂತೆ ಹಿಂದುಳಿದ ವರ್ಗಕ್ಕೂ (ಒಬಿಸಿ) ಕೂಡಲೇ ಮೀಸಲಾತಿ ನಿಗದಿ ಮಾಡಬೇಕು. ಅತ್ಯಂತ ಹಿಂದುಳಿದ ಕುರುಬ ಸಮಾಜವು ಮುಖ್ಯವಾಹಿನಿಗೆ ಬರಬೇಕಾದರೆ ರಾಜಕೀಯ ಪ್ರಾತಿನಿಧ್ಯ ಮುಖ್ಯ. ಆದ್ದರಿಂದ ಎಲ್ಲ ಪಕ್ಷಗಳೂ ಜಿಲ್ಲೆಯಲ್ಲಿ ತಲಾ ಒಂದೊಂದು ಕ್ಷೇತ್ರವನ್ನು ಕುರುಬ ಸಮಾಜಕ್ಕೇ ಬಿಡಬೇಕು’ ಎಂದರು. ವಕೀಲ ದುರುಗೇಶ ಕ್ಯಾತ್ನಟ್ಟಿ ಇದ್ದರು.