‘ತಾಲ್ಲೂಕಿನ ಮಟಕಿ ಗ್ರಾಮದ ಒಡೆದ ಕೆರೆಯ ಸ್ಥಳಕ್ಕೆ ಗುರುವಾರ ಭೇಟಿ ನೀಡಿ ಸಂತ್ರಸ್ತ ರೈತರೊಂದಿಗೆ ಮಾತನಾಡಿದ ಅವರು, ಮಟಕಿ ಕೆರೆ ಒಡೆದ ಪರಿಣಾಮ ಮಟಕಿ, ಹೆಬಳಿ, ಜೀರಹಳ್ಳಿ, ಶಕಾಪುರ ಗ್ರಾಮ ವ್ಯಾಪ್ತಿಯ ರೈತರ ಬೆಳೆ, ಹೊಲಬಾವಿ ಗ್ರಾಮಗಳ ಬದುಗಳು ಸಂಪೂರ್ಣ ಹಾಳಾಗಿವೆ. ಮಟಕಿ ಗ್ರಾಮದಲ್ಲಿ ನೀರು ನುಗ್ಗಿದೆ. ತಾಲ್ಲೂಕು ಆಡಳಿತವು ತುರ್ತು ಸಮಸ್ಯೆಗಳಿಗೆ ಸ್ಪಂದಿಸದ ಕಾರಣ ಇಂತಹ ಅನಾಹುತ ಎದುರಿಸುವಂತಾಗಿದೆ. ಇಲ್ಲಿ ಶಾಸಕ ಸುಭಾಷ ಗುತ್ತೇದಾರ ವೈಪಲ್ಯ ಎದ್ದುಕಾಣುತ್ತಿದೆ’ ಎಂದರು.