ಜಿಲ್ಲೆಯ ಕ್ರೀಡಾಪಟುಗಳಲ್ಲಿ ಸಾಮರ್ಥ್ಯವಿದ್ದರೂ ಮೂಲಸೌಕರ್ಯಗಳು ಹಾಗೂ ಕೋಚ್ಗಳ ಕೊರತೆಯಿಂದ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಸಾಧ್ಯವಾಗುತ್ತಿಲ್ಲ. ಇದನ್ನು ಮನಗಂಡು ಕೆಕೆಆರ್ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಅವರು ನಗರದ ಹೊರವಲಯದಲ್ಲಿ ಅಂತರರಾಷ್ಟ್ರೀಯ ಸುಸಜ್ಜಿತ ಕ್ರೀಡಾ ಸಂಕೀರ್ಣ ನಿರ್ಮಿಸಲು ಉದ್ದೇಶಿಸಿದ್ದರು. ಮೊದಲು ವಿ.ವಿ.ಯಿಂದ ಭೂಮಿ ಪಡೆಯುವ ಪ್ರಸ್ತಾವ ಇರಲಿಲ್ಲ. ಬದಲಾಗಿ ನಗರದ ಹೊರವಲಯದ ಹಡಗಿಲ್ ಹಾರುತಿ, ಉಪಳಾಂವ, ಕೋಟನೂರ (ಡಿ) ಗ್ರಾಮಗಳ ಬಳಿ ಕಂದಾಯ ಇಲಾಖೆಗೆ ಸೇರಿದ ಜಾಗವನ್ನು ಗುರುತಿಸುವಂತೆ ಪಾಟೀಲ ಅವರು ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಉಪವಿಭಾಗಾಧಿಕಾರಿಗಳಿಗೆ ಸೂಚಿಸಿದ್ದರು.