ಚಿಂಚೋಳಿ: ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕರೆ ಮಾಡಿ ಕೊಲೆ ಬೆದರಿಕೆ ಹಾಕಿರುವುದು ಆಘಾತಕಾರಿ ಬೆಳವಣಿಗೆಯಾಗಿದೆ. ಈ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಬೇಕು ಎಂದು ಕಾಂಗ್ರೆಸ್ ಮುಖಂಡ ಸುಭಾಷ ರಾಠೋಡ್ ಬುಧವಾರ ಇಲ್ಲಿ ಒತ್ತಾಯಿಸಿದರು.
ಕೊಲೆ ಬೆದರಿಕೆಯನ್ನು ಖಂಡಿಸಿ ದಿಢೀರ್ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅನಿಲಕುಮಾರ ಜಮಾದಾರ, ಚಂದ್ರಾಸಿಂಗ್, ಶಿವಕುಮಾರ, ಗೋಪಾಲರಾವ್, ಮಹೇಮೂದ್ ಪಟೇಲ್ , ರಾಮಶೆಟ್ಟಿ ಪವಾರ್, ಆರ್. ಗಣಪತರಾವ್, ಕೆ.ಎಂ ಬಾರಿ, ಅಬ್ದುಲ ಬಾಷೀತ್ ಮಾತನಾಡಿದರು.
ಡಾ.ತುಕಾರಾಮ ಪವಾರ, ಸಂತೋಷ ಗುತ್ತೇದಾರ, ಅಮರ ಲೊಡ್ಡನೋರ್, ಖಲೀಲ್ ಪಟೇಲ್, ರಾಧಾಕೃಷ್ಣ, ವಿಜಯಕುಮಾರ ಗಂಗನಪಳ್ಳಿ ಇದ್ದರು. ಇದಕ್ಕೂ ಮೊದಲು ಪಟ್ಟಣದಲ್ಲಿ ಸಭೆ ಸೇರಿದ ಕಾಂಗ್ರೆಸ್ ಕಾರ್ಯಕರ್ತರು ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ ಶಿವಕುಮಾರ ಪದಗ್ರಹಣ ಕಾರ್ಯಕ್ರಮಕ್ಕೆ ತಾಲ್ಲೂಕಿನಿಂದ ಪಾಲ್ಗೊಳ್ಳುವ ಕುರಿತು ಚರ್ಚಿಸಿದರು.