‘ಕಳೆದ ಮೂರು ದಿನಗಳಿಂದ ನಗರ ಹಾಗೂ ಜಿಲ್ಲೆಯ ಎಲ್ಲೆಡೆ ಬಿರುಗಾಳಿ ಹೆಚ್ಚಾಗಿದೆ. ಜತೆಗೆ, ರಾತ್ರಿ ವೇಳೆ ಗಾಳಿಯ ಸಮೇತ ಧಾರಾಕಾರ ಮಳೆ ಸುರಿಯುತ್ತಿದೆ. ಈ ಸಂದರ್ಭದಲ್ಲಿ ಮರಗಳು ಬೀಳುವುದು, ಕೊಂಬೆಗಳು ವಿದ್ಯುತ್ ಪ್ರೇಷಣ ತಂತಿಗೆ ತಾಗುವುದು, ನೀರಿನಲ್ಲಿ ವಿದ್ಯುತ್ ಹರಿಯುದು, ಕಂಬಗಳು ಬೀಳುವುದು ಮುಂತಾದ ಅವಘಡಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ, ಎಲ್ಲಿ ಅನಿವಾರ್ಯವೋ ಅಲ್ಲಿ ಮಾತ್ರ ಕೆಲಕಾಲ ವಿದ್ಯುತ್ ತಡೆಯಲಾಗುತ್ತಿದೆ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.