ಕಲಬುರ್ಗಿ: ಕೊರೊನಾ ಉಪಟಳದ ಕಾರಣ ಲಾಕ್ಡೌನ್ ಸಂದರ್ಭದಲ್ಲಿ ಉಂಟಾದ ಹಾನಿ ಭರಿಸಲು, ವೆಚ್ಚಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಸರ್ಕಾರವು ಕಲ್ಯಾಣ ಕರ್ನಾಟಕದ ಭಾಗದ ವೃಂದ ವಿವಿಧ ಹುದ್ದೆಗಳ ಹಾಗೂ ಹಿಂಬಾಕಿ ಹುದ್ದೆಗಳನ್ನು ನೇಮಕ ಮಾಡುವ ಪ್ರಕ್ರಿಯೆಗೆ ತಡೆ ಹಿಡಿದಿದೆ.
ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನೀಡಿದ ಸೂಚನೆಯಂತೆ, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐಎಂಎನ್ ಪ್ರಸಾದ ಅದೇಶ ಹೊರಡಿಸಿದ್ದಾರೆ.