ರೈತರಾದ ಮಕ್ಬೂಲಸಾಬ್ ಕರೀಂಸಾಬ್, ರಮೇಶ ಶರಣಪ್ಪ ವಗ್ಗೆ, ಭೀಮಶಾ ಹುಸೇನಿ ದಂಡಿನ, ಶರಣರೆಡ್ಡಿ ಶಿವರಾಯ, ಮಲ್ಲಿಕಾರ್ಜುನ ಶಿವರಾಯ, ಸಿದ್ರಾಮ ಬಸಂತರಾವ್, ಇಸ್ಮಾಯಿಲಸಾಬ್ ಮೋದಿನಸಾಬ್ ಅವರು ಹೆಸರು ಬಿತ್ತನೆ ನಡೆಸಿದ್ದು, ಬೆಳೆ ಕಾಯಿ ಬಿಟ್ಟಿಲ್ಲ ಇದರಿಂದ ತಮಗೆ ನಷ್ಟವಾಗಿದೆ ಎಂದು ತಾಲ್ಲೂಕಿನ ಚಿಮ್ಮನಚೋಡ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಅಭಿಲಾಷ್ ಸುಬೇದಾರ ಅವರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.