ದ್ವಾರ ಬಾಗಿಲು ಪ್ರತಿಷ್ಠಾಪನೆ: ಶ್ರೀಮಠದ ಮಹಾದ್ವಾರ ಶನಿವಾರ ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಲಾಯಿತು. 10x10 ಅಡಿ ಅಳತೆಯ ದ್ವಾರ ಬಾಗಿಲಲ್ಲಿ ದ್ವಾರಪಾಲಕರು, ರೇಣುಕಾರ್ಯರು ಹಾಗೂ ಇತರರ ಮೂರ್ತಿಗಳನ್ನು ಕೆತ್ತಲಾಗಿದೆ. ಪೂಜೆ ಸಂದರ್ಭದಲ್ಲಿ ಪಂಪಾಪತಿ ದೇವರು, ಚನ್ನಬಸಯ್ಯ ಸ್ವಾಮಿ, ಬಸವರಾಜ ಬಿ. ಸಜ್ಜನಶೆಟ್ಟಿ, ಸುಭಾಷ ದಬ್ಬಾ, ಅರವಿಂದ ಬಸುದೆ, ಅರ್ಜುನ ತಳವಾರ, ಜಗದೀಶ್ವರಯ್ಯ ಪತ್ರಿ, ನಾಗಣ್ಣ ನಿಡಗುಂದಿ ಸೇರಿ ಹಲವು ಭಕ್ತರು ಇದ್ದರು.