ಬುಧವಾರ ಸಂಜೆ ಸ್ವಲ್ಪ ಕಾಲ ಸಂಚಾರ ಸ್ಥಗಿತಗೊಂಡಿತ್ತು. ಆದರೆ ಬುಧವಾರ ರಾತ್ರಿ ನೀರು ಹರಿದು ಬಂದ ಪರಿಣಾಮ ರಾತ್ರಿಯಿಂದ ಗುರುವಾರ ರಾತ್ರಿಯವರೆಗೂ ಸಂಪರ್ಕ ಸ್ಥಗಿತಗೊಂಡಿತ್ತು. ಲಾರಿ, ಬಸ್ಗಳು ಚಿತ್ತಾಪುರ, ರಾವೂರ ಮಾರ್ಗವಾಗಿ ಕಲಬುರ್ಗಿಗೆ ತೆರಳಿದವು. ನದಿ ನೀರಿನ ಆರ್ಭಟ ಹೆಚ್ಚಿರುವುದರಿಂದ ನದಿ ದಂಡೆಯ ಹೊಲಗಳಿಗೆ ನೀರು ನುಗ್ಗಿದೆ. ರೈತರು ಸಂಕಷ್ಟ ಎದುರಿಸುವಂತಾಗಿದೆ.