‘ಗ್ರಾಮ ವಾಸ್ತವ್ಯಕ್ಕೆ ನಮ್ಮದೇನೂ ತಕರಾರು ಇಲ್ಲ. ಅದೊಂದು ಉತ್ತಮ ಪ್ರಯತ್ನ. ಮಂತ್ರಿಗಳು ಹಳ್ಳಿ ಜನರ ಜತೆಗೆ ಇದ್ದು ಕೆಲಸ ಮಾಡುವುದು ಒಳ್ಳೆಯ ಬೆಳವಣಿಗೆ. ಆದರೆ, ಈವರೆಗೆ ಕುಮಾರಸ್ವಾಮಿ ವಾಸ್ತವ್ಯ ಮಾಡಿದ ಯಾವ ಗ್ರಾಮ ಉದ್ಧಾರವಾಗಿದೆ? 2006ರಲ್ಲಿ ಜಿಲ್ಲೆಯ ಮಣ್ಣೂರ ಗ್ರಾಮದಲ್ಲೂ ಅವರು ವಾಸ್ತವ್ಯ ಮಾಡಿದ್ದರು. ‘ಸುವರ್ಣ ಗ್ರಾಮ’ ಯೋಜನೆಗೂ ಇದನ್ನು ಆಯ್ಕೆ ಮಾಡಿದ್ದರು. ಆದರೆ, ಒಂದೇಒಂದು ಮೂಲ ಸೌಕರ್ಯವೂ ಅಲ್ಲಿ ಇಲ್ಲ. ಆದ್ದರಿಂದ ಈ ವಾಸ್ತವ್ಯ ಬರೀ ಫೋಕಸ್ ಆಗದಿರಲಿ ಎಂಬುದಷ್ಟೇ ನಮ್ಮ ಕಳಕಳಿ’ ಎಂದು ಹೇಳಿದರು.