ಟಿಪ್ಪರ್ ಚಾಲಕರಾಗಿ ಕೆಲಸ ಮಾಡುತ್ತಿರುವ ರಾಮಣ್ಣ ಕಾಲೊನಿಯಲ್ಲಿನ ತಮ್ಮ ಮನೆ ಎದುರಿಗೆ ಕೊಠಡಿ ಖಾಲಿ ಇದ್ದುದರಿಂದ ತಮ್ಮ ಪರಿಚಯದ ಇಬ್ಬರಿಗೆ ಕೊಡಿಸಿದ್ದರು. ಆದರೆ, ಆ ಕೊಠಡಿ ಹಂಚಿಕೆ ವಿಚಾರವಾಗಿ ರಾಜಪ್ಪ ಶಿವಶರಣಪ್ಪ ಪೂಜಾರಿ ಅವರಿಗೆ ಅಸಮಾಧಾನವಿತ್ತು. ಹೀಗಾಗಿ, ಸರಿಯಾಗಿ ಮನೆ ಹಂಚಿಕೆ ಆಗಿಲ್ಲ. ಹೀಗಾಗಿ ನೀನೇಕೆ ಹುಡುಗರನ್ನು ಕರೆದುಕೊಂಡು ಬಂದಿದ್ದೀಯ ಎಂದು ಪ್ರಶ್ನಿಸಿ, ಸೆ.17ರಂದು ರಾಮಣ್ಣ ಜಮಾದಾರ ಅವರ ಮೇಲೆ ಕುರುಪಿ ಹಾಗೂ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ರಾಮಣ್ಣ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.