ಶ್ರೀಕಾಂತ ಅವರೊಂದಿಗೆ ನವನಿಹಾಳ ಗ್ರಾಮದ ಶ್ರೀನಾಥ ಸುಭಾಷ ಬಿರಾದಾರ (26), ನಾಗರಾಜ ಬಸಂತರಾಯ ಬಿರಾದಾರ (28), ಹಾಗೂ ಡೋರ ಜಂಬಗಾದ ವಿಜಯಕುಮಾರ ಶ್ರೀಮಂತ (27), ಚಂದ್ರಕಾಂತ ದೇವಿಂದ್ರಪ್ಪ (27) ಸೇರಿ ರೇಣುಕಾಚಾರ್ಯ ಜಯಂತಿ ನಿಮಿತ್ತ ಕಾರಿನಲ್ಲಿ ತೆಲಂಗಾಣದ ಕೊಲ್ಲಿಪಾಕಿಗೆ ತೆರಳುತ್ತಿದ್ದರು. ಡೊಂಗರಗಾಂವ ಕ್ರಾಸ್ ಬಳಿ ಮೇವು ತುಂಬಿಕೊಂಡು ಸಾಗುತ್ತಿದ್ದ ಟ್ರ್ಯಾಕ್ಟರ್ಗೆ ಕಾರು ಡಿಕ್ಕಿಯಾಗಿದೆ. ಕಾರಿನಲ್ಲಿ ಎದುರು ಬದಿಯ ಆಸನದಲ್ಲಿ ಕುಳಿತಿದ್ದ ಶ್ರೀಕಾಂತ ಗಂಭೀರ ಗಾಯಗೊಂಡಿದ್ದು ಸ್ಥಿತಿ ಚಿಂತಾಜನಕವಾಗಿತ್ತು. ದಿನ ಕಳೆದರೂ ಚೇತರಿಕೆ ಕಾಣಲಿಲ್ಲ. ಭಾನುವಾರ ಕೊನೆಯುಸಿರೆಳೆದರು. ಉಳಿದವರೆಲ್ಲರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.