ಮಲಘಾಣಗ್ರಾಮದ ಸಂಗೀತಾ ಮಾಳಿಂಗರಾಯ ಬರಗಾಲಿ ಎಂಬುವವರು ಇತ್ತೀಚೆಗೆ ನಗರದ ಕೋಟೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅವರನ್ನು ಮಾತನಾಡಿಸಿದ ಆರೋಪಿ, ಮಲಘಾಣ ಗ್ರಾಮದಲ್ಲಿ ತಮ್ಮ ಪರಿಚಯದವರು ಇದ್ದಾರೆ. ಅಲ್ಲಿಗೆ ಕರೆದೊಯ್ಯುವುದಾಗಿ ಹೇಳಿ ಹಾಗರಗಾ ಕ್ರಾಸ್ ಬಳಿ ಗಾಡಿ ನಿಲ್ಲಿಸಿ ಬೆದರಿಕೆ ಹಾಕಿ ಕೊರಳಲ್ಲಿದ್ದ 10 ಗ್ರಾಂ ಚಿನ್ನದ ಲಾಕೆಟ್ ಹಾಗೂ 12 ಗ್ರಾಂ ಚಿನ್ನದ ತಾಳಿ ಸರ ಸುಲಿಗೆ ಮಾಡಿ ಪರಾರಿಯಾಗಿದ್ದ.