ಮಾರ್ಚ್ 13ರಂದು ವರ್ಧಂತಿ ಉತ್ಸವವಿದ್ದು 450 ವಾದ್ಯ ಕಲಾವಿದರು ಪ್ರಾತಃಕಾಲದಿಂದ ರಾತ್ರಿವರೆಗೂ ‘ನಾದಹಾರ ಸಮರ್ಪಣೆ’ ಮಾಡುವರು. ತಿರುಪತಿ ತಿರುಮಲ ಶ್ರೀ ಶ್ರೀನಿವಾಸ ದೇವಸ್ಥಾನದಿಂದ ಶೇಷವಸ್ತ್ರ ಸಮರ್ಪಿಸಲಾಗುವುದು. ಪ್ರತಿನಿತ್ಯ ಅನ್ನಪ್ರಸಾದ, ಅಭಿಷೇಕ, ವಿಶೇಷ ಪೂಜೆಗಳು, ಅರ್ಚನೆ ನಡೆಯಲಿವೆ. ಸಂಗೀತ, ಸಾಂಸ್ಕೃತಿಕ ಮತ್ತು ನೃತ್ಯರೂಪಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.