‘ಐಎನ್ಸಿಯು ಮೂರು ವರ್ಷದ ‘ಜಿಎನ್ಎಂ’ ಕೋರ್ಸ್ ರದ್ದುಪಡಿಸಿ, ಅದರನ್ನು ನಾಲ್ಕು ವರ್ಷದ ಬಿಎಸ್ಸಿಯೊಂದಿಗೆ ವಿಲೀನ ಮಾಡುವಂತೆ ಕೋರಿತ್ತು. ಜಿಎನ್ಎಂಗೆ ಕಲೆ, ವಾಣಿಜ್ಯ ಕ್ಷೇತ್ರ ಆಯ್ದುಕೊಂಡವರೂ ಸೇರಬಹುದಾಗಿದೆ. ಆದರೆ, ಬಿಎಸ್ಸಿ ಜತೆಗೆ ವಿಲೀನ ಮಾಡಿದರೆ ಕೇವಲ ವಿಜ್ಞಾನ ವಿಭಾಗದವರು ಮಾತ್ರ ಅರ್ಹರಾಗುತ್ತಾರೆ. ಇದರಿಂದ ಕಲಾ, ವಾಣಿಜ್ಯ ಹಾಗೂ ತತ್ಸಮಾನ ಕೋರ್ಸ್ ಮುಗಿಸಿದ ಸಾವಿರಾರು ವಿದ್ಯಾರ್ಥಿಗಳಿಗೆ ಅವಕಾಶ ಸಿಗುತ್ತಿರಲಿಲ್ಲ’ ಎಂದು ಕಾರ್ಯದರ್ಶಿ ಡಾ.ಕಿರಣ ಜಾರ್ಜ್ ಹೇಳಿದರು.
‘ಮೇಲಾಗಿ ಗ್ರಾಮೀಣ ಮಟ್ಟದಲ್ಲಿ ಕೆಲಸ ಮಾಡಲು ಜಿಎನ್ಎಂ ಪದವಿ ಪಡೆದವರೇ ಹೆಚ್ಚಾಗಿ ಹೋಗುತ್ತಾರೆ. ಬಿಎಸ್ಸಿ ನಂತರ ಪದವಿ ಪಡೆದವರು ಕೇವಲ ನಗರದ ಪ್ರದೇಶಗಳಲ್ಲಿ ಕೇವಲ ಬೋಧನಾ ಕ್ಷೇತ್ರಕ್ಕೆ ಆದ್ಯತೆ ಕೊಡುತ್ತಾರೆ. ಹಾಗಾಗಿ, ಜಿಎನ್ಎಂ ಅನ್ನು ಮೊದಲಿನಂತೆಯೇ ಮುಂದುವರಿಸುವುದ ಬಹಳ ಅಗತ್ಯವಾಗಿದೆ’ ಎಂದೂ ಅವರು ವಿವರಿಸಿದರು.