ಸಚಿವ ಬಿ.ಸಿ. ಪಾಟೀಲ ಅವರೊಂದಿಗೆ ಕೃಷಿ ಮಹಾವಿದ್ಯಾಲಯದಲ್ಲಿ ನಡೆದ ವಿಸ್ತರಣಾ ಘಟಕದ ಕಟ್ಟಡದ ಶಂಕು ಸ್ಥಾಪನೆ ಸಮಾರಂಭದಲ್ಲಿ ಭಾಗವಹಿಸಿ ಅವರೊಂದಿಗೇ ಕಾರಿನಲ್ಲಿ ವಿಮಾನ ನಿಲ್ದಾಣದತ್ತ ಹೊರಟಿದ್ದರು. ಸಚಿವರು ತಂದಿದ್ದ ಹೆಲಿಕಾಪ್ಟರ್ ಆದಷ್ಟು ಬೇಗ ಟೇಕಾಫ್ ಆಗಬೇಕಿದ್ದುದರಿಂದ ಕಾರು ವೇಗವಾಗಿ ಹೊರಟಿತ್ತು. ರೋಡ್ ಬ್ರೇಕ್ ಬಂದಿದ್ದರಿಂದ ಬೆಂಗಾವಲು ಪಡೆಯ ವಾಹನ ನಿಧಾನಗೊಂಡಿತು. ಸಚಿವರಿದ್ದ ಕಾರು ನಿಯಂತ್ರಣ ತಪ್ಪಿ ಎದುರಿನ ವಾಹನಕ್ಕೆ ಡಿಕ್ಕಿ ಹೊಡೆಯಿತು. ಮಧ್ಯದ ಸೀಟಿನಲ್ಲಿ ಕುಳಿತಿದ್ದ ಸಂಸದರು ಚಾಲಕನ ಬಳಿ ಚಲಿಸಿದರು. ಹೀಗಾಗಿ ಕೈಗೆ ಗಾಯವಾಯಿತು.