ಇದಕ್ಕಾಗಿ ತಮ್ಮ ತಂದೆ ಹೆಸರಿನಲ್ಲಿರುವ ದಿ. ಚಂದ್ರಶೇಖರ ಪಾಟೀಲ ರೇವೂರ ಫೌಂಡೇಷನ್ ಮೂಲಕ ವಿಶೇಷ ರೈಲಿನ ವ್ಯವಸ್ಥೆ ಮಾಡಿದ್ದು, ಶನಿವಾರ ವಿವಿಧ ಮಠಾಧೀಶರ ನೇತೃತ್ವದಲ್ಲಿ ರೈಲಿಗೆ ಹಸಿರು ನಿಶಾನೆ ತೋರಿಸಿದರು. ಯಾತ್ರಿಕರೊಂದಿಗೆ ದತ್ತಾತ್ರೇಯ ಅವರ ತಾಯಿ, ಮಾಜಿ ಶಾಸಕಿ ಅರುಣಾದೇವಿ ಪಾಟೀಲ, ಪತ್ನಿ ಲಕ್ಷ್ಮಿ ಪಾಟೀಲ, ಸಹೋದರ ಡಾ. ಅಲೋಕ್ ಪಾಟೀಲ ಸೇರಿದಂತೆ ಅವರ ಕುಟುಂಬ ಸದಸ್ಯರು ತೆರಳಿದ್ದಾರೆ.