<p><strong>ಚಿತ್ತಾಪುರ</strong>: ಮುಂಗಾರು ಮಳೆ ಆರಂಭಕ್ಕೂ ಮುಂಚೆ ರೋಹಿಣಿ ಮಳೆಯು ತಾಲ್ಲೂಕಿನಾದ್ಯಂತ ಹದವಾಗಿ ಸುರಿದಿದ್ದರಿಂದ ಭೂಮಿಯಲ್ಲಿ ತೇವಾಂಶ ವೃದ್ಧಿಯಾಗಿ ಅನೇಕ ಗ್ರಾಮಗಳಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಭರದಿಂದ ಶುರುವಾಗಿದೆ.</p>.<p>ಬೇಸಿಗೆಯ ಬಿಸಿಲಿಗೆ ಕಾದು ಕೆಂಡವಾಗಿದ್ದ ಭೂಮಿ ಮಳೆಯಿಂದ ತಂಪಾಗಿದೆ. ಧಾರಾಕಾರ ಮಳೆಯಿಂದ ಹೊಲಗಳಲ್ಲಿ ನೀರು ಹರಿದಾಡಿ ಬಿತ್ತನೆಗೆ ಅನುಕೂಲವಾಗಿದೆ. ರೈತರು ಎತ್ತಿನ ಕೂರಿಗೆಗಿಂತ ಟ್ರ್ಯಾಕ್ಟರ್ ಮೂಲಕ ಬಿತ್ತನೆ ಮಾಡುತ್ತಿದ್ದಾರೆ. ಒಟ್ಟು 75,390 ಹೆಕ್ಟೇರ್ ಮುಂಗಾರು ಹಂಗಾಮಿನ ಬಿತ್ತನೆ ಗುರಿ ಹೊಂದಲಾಗಿದ್ದು, ಈಗಾಗಲೇ ಚಾಲನೆ ನೀಡಲಾಗಿದೆ.</p>.<p>ತಾಲ್ಲೂಕಿನ ಡೋಣಗಾಂವ, ಅಲ್ಲೂರ್(ಕೆ), ಅಲ್ಲೂರ್(ಬಿ), ಭೀಮನಹಳ್ಳಿ, ರಾಜೋಳಾ, ಅಳ್ಳೊಳ್ಳಿ, ಯಾಗಾಪುರ, ಬೆಳಗೇರಾ, ರಾಂಪುರಹಳ್ಳಿ ಮುಂತಾದ ಗ್ರಾಮಗಳಲ್ಲಿ ಬಿತ್ತನೆ ಮಾಡಲಾಗುತ್ತಿದೆ. ಬಿತ್ತನೆಗಾಗಿ ರೈತರು ಸೇಡಂ, ಮುಧೋಳ, ಗುರುಮಠಕಲ್, ಯಾದಗಿರಿ ಮುಂತಾದೆಡೆಯಿಂದ ₹1,650 ರಿಂದ 1,800 ಬೆಲೆತೆತ್ತು ರಸಗೊಬ್ಬರ ತಂದು ಬಿತ್ತನೆ ಕಾರ್ಯ ಕೈಗೊಂಡಿದ್ದಾರೆ.</p>.<p>‘ಚಿತ್ತಾಪುರ ಪಟ್ಟಣದಲ್ಲಿ ಕೃಷಿ ಪರಿಕರ ಮಾರಾಟ ಮಾಡುವ ಖಾಸಗಿ ಅಂಗಡಿಗಳಲ್ಲಿ ₹1,800 ಬೆಲೆಗೆ ರಸಗೊಬ್ಬರ ಮಾರಾಟ ಮಾಡುತ್ತಿದ್ದು, ಅದಕ್ಕೆ ರಸೀದಿ ಕೊಡುತ್ತಿಲ್ಲ. ರಸೀದಿ ಕೇಳಿದರೆ ರಸಗೊಬ್ಬರ ಕೊಡಲು ನಿರಾಕರಿಸುತ್ತಿದ್ದಾರೆ’ ಎಂದು ಗ್ರಾಮೀಣ ಭಾಗದ ರೈತರು ಶನಿವಾರ <strong>‘ಪ್ರಜಾವಾಣಿ’</strong>ಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ.</p>.<p>‘ಬಿತ್ತನೆ ಸಮಯದಲ್ಲಿ ರೈತರು ಡಿಎಪಿ ಹಾಗೂ ಯುರಿಯಾಗಿಂತ ಕಾಂಪ್ಲೆಕ್ಸ್ ಗೊಬ್ಬರಕ್ಕೆ ಹೆಚ್ಚು ಮಹತ್ವ ನೀಡಬೇಕು. ಕಾಂಪ್ಲೆಕ್ಟ್ ಗೊಬ್ಬರವು ಭೂಮಿಯ ಫಲವತ್ತತೆಯ ಸಮತೋಲನ ಕಾಪಾಡುತ್ತದೆ’ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸಂಜೀವಕುಮಾರ ಮಾನಕರ್ ಅವರು ರೈತರಿಗೆ ಸಲಹೆ ನೀಡಿದ್ದಾರೆ.</p>.<p>‘ಮುಂಗಾರು ಹಂಗಾಮಿಗೆ ಕೃಷಿ ಇಲಾಖೆಯಿಂದ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಬಿತ್ತನೆ ಬೀಜ ಹಾಗೂ ರಸಗೊಬ್ಬರಕ್ಕೆ ಯಾವುದೇ ಕೊರತೆ ಇರುವುದಿಲ್ಲ. ತಾಲ್ಲೂಕಿನ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ತೊಗರಿ, ಹೆಸರು, ಉದ್ದು, ಸೋಯಾಬಿನ್ ಬಿತ್ತನೆ ಬೀಜಗಳು ಲಭ್ಯವಿರುತ್ತದೆ’ ಎಂದು ಮಾಹಿತಿ ನೀಡಿದ್ದಾರೆ.</p>.<p>ಬಿತ್ತನೆ ಕ್ಷೇತ್ರದ ಗುರಿ: 45,395 ಹೆಕ್ಟೇರ್ ತೊಗರಿ, 14,805 ಹೆಕ್ಟೇರ್ ಹೆಸರು, 3,185 ಹೆಕ್ಟೇರ್ ಉದ್ದು, 9,700 ಹೆಕ್ಟೇರ್ ಹತ್ತಿ 2,845 ಹೆಕ್ಟೇರ್ ಇತರೆ ಬೆಳೆಗಳು ಬಿತ್ತನೆ ಗುರಿ ಹೊಂದಲಾಗಿದೆ.</p>.<p>ಕೂರಿಗೆ ಬದಲು ಟ್ರ್ಯಾಕ್ಟರ್ ಮೂಲಕ ಬಿತ್ತನೆ ‘ದುಬಾರಿ ಬೆಲೆಗೆ ರಸಗೊಬ್ಬರ ಮಾರಾಟ’ ರಸೀದಿ ಕೇಳಿದರೆ ಗೊಬ್ಬರ ಕೊಡಲು ನಿರಾಕರಣೆ</p>.<p><strong>ಕೃಷಿ ಪರಿಕರ ಮಾರಾಟಗಾರರು ನಿಗದಿತ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಿದರೆ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ದೂರು ನೀಡಿ ಕ್ರಮ ಕೈಗೊಳ್ಳಲಾಗುತ್ತದೆ </strong></p><p><strong>-ಸಂಜಿವಕುಮಾರ ಮಾನಕರ್ ಸಹಾಯಕ ಕೃಷಿ ನಿರ್ದೇಶಕ</strong></p>.<p><strong>ಮುಂಗಾರು ಹಂಗಾಮು ಬಿತ್ತನೆಗೆ ಮುಂಚೆಯೆ ಕೃಷಿ ಇಲಾಖೆಯಿಂದ ರೈತರಿಗೆ ಅಗತ್ಯವಿರುವ ರಸಗೊಬ್ಬರ ಮತ್ತು ಬೀಜ ಪೂರೈಸಿದರೆ ಖಾಸಗಿ ಅಂಗಡಿಗಳಿಂದ ದುಬಾರಿ ಬೆಲೆಗೆ ಖರೀದಿಸುವುದಿಲ್ಲ </strong></p><p><strong>-ರವೀಂದ್ರ ಮುಡಬೂಳಕರ್ ಇಟಗಾ ರೈತ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿತ್ತಾಪುರ</strong>: ಮುಂಗಾರು ಮಳೆ ಆರಂಭಕ್ಕೂ ಮುಂಚೆ ರೋಹಿಣಿ ಮಳೆಯು ತಾಲ್ಲೂಕಿನಾದ್ಯಂತ ಹದವಾಗಿ ಸುರಿದಿದ್ದರಿಂದ ಭೂಮಿಯಲ್ಲಿ ತೇವಾಂಶ ವೃದ್ಧಿಯಾಗಿ ಅನೇಕ ಗ್ರಾಮಗಳಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಭರದಿಂದ ಶುರುವಾಗಿದೆ.</p>.<p>ಬೇಸಿಗೆಯ ಬಿಸಿಲಿಗೆ ಕಾದು ಕೆಂಡವಾಗಿದ್ದ ಭೂಮಿ ಮಳೆಯಿಂದ ತಂಪಾಗಿದೆ. ಧಾರಾಕಾರ ಮಳೆಯಿಂದ ಹೊಲಗಳಲ್ಲಿ ನೀರು ಹರಿದಾಡಿ ಬಿತ್ತನೆಗೆ ಅನುಕೂಲವಾಗಿದೆ. ರೈತರು ಎತ್ತಿನ ಕೂರಿಗೆಗಿಂತ ಟ್ರ್ಯಾಕ್ಟರ್ ಮೂಲಕ ಬಿತ್ತನೆ ಮಾಡುತ್ತಿದ್ದಾರೆ. ಒಟ್ಟು 75,390 ಹೆಕ್ಟೇರ್ ಮುಂಗಾರು ಹಂಗಾಮಿನ ಬಿತ್ತನೆ ಗುರಿ ಹೊಂದಲಾಗಿದ್ದು, ಈಗಾಗಲೇ ಚಾಲನೆ ನೀಡಲಾಗಿದೆ.</p>.<p>ತಾಲ್ಲೂಕಿನ ಡೋಣಗಾಂವ, ಅಲ್ಲೂರ್(ಕೆ), ಅಲ್ಲೂರ್(ಬಿ), ಭೀಮನಹಳ್ಳಿ, ರಾಜೋಳಾ, ಅಳ್ಳೊಳ್ಳಿ, ಯಾಗಾಪುರ, ಬೆಳಗೇರಾ, ರಾಂಪುರಹಳ್ಳಿ ಮುಂತಾದ ಗ್ರಾಮಗಳಲ್ಲಿ ಬಿತ್ತನೆ ಮಾಡಲಾಗುತ್ತಿದೆ. ಬಿತ್ತನೆಗಾಗಿ ರೈತರು ಸೇಡಂ, ಮುಧೋಳ, ಗುರುಮಠಕಲ್, ಯಾದಗಿರಿ ಮುಂತಾದೆಡೆಯಿಂದ ₹1,650 ರಿಂದ 1,800 ಬೆಲೆತೆತ್ತು ರಸಗೊಬ್ಬರ ತಂದು ಬಿತ್ತನೆ ಕಾರ್ಯ ಕೈಗೊಂಡಿದ್ದಾರೆ.</p>.<p>‘ಚಿತ್ತಾಪುರ ಪಟ್ಟಣದಲ್ಲಿ ಕೃಷಿ ಪರಿಕರ ಮಾರಾಟ ಮಾಡುವ ಖಾಸಗಿ ಅಂಗಡಿಗಳಲ್ಲಿ ₹1,800 ಬೆಲೆಗೆ ರಸಗೊಬ್ಬರ ಮಾರಾಟ ಮಾಡುತ್ತಿದ್ದು, ಅದಕ್ಕೆ ರಸೀದಿ ಕೊಡುತ್ತಿಲ್ಲ. ರಸೀದಿ ಕೇಳಿದರೆ ರಸಗೊಬ್ಬರ ಕೊಡಲು ನಿರಾಕರಿಸುತ್ತಿದ್ದಾರೆ’ ಎಂದು ಗ್ರಾಮೀಣ ಭಾಗದ ರೈತರು ಶನಿವಾರ <strong>‘ಪ್ರಜಾವಾಣಿ’</strong>ಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ.</p>.<p>‘ಬಿತ್ತನೆ ಸಮಯದಲ್ಲಿ ರೈತರು ಡಿಎಪಿ ಹಾಗೂ ಯುರಿಯಾಗಿಂತ ಕಾಂಪ್ಲೆಕ್ಸ್ ಗೊಬ್ಬರಕ್ಕೆ ಹೆಚ್ಚು ಮಹತ್ವ ನೀಡಬೇಕು. ಕಾಂಪ್ಲೆಕ್ಟ್ ಗೊಬ್ಬರವು ಭೂಮಿಯ ಫಲವತ್ತತೆಯ ಸಮತೋಲನ ಕಾಪಾಡುತ್ತದೆ’ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸಂಜೀವಕುಮಾರ ಮಾನಕರ್ ಅವರು ರೈತರಿಗೆ ಸಲಹೆ ನೀಡಿದ್ದಾರೆ.</p>.<p>‘ಮುಂಗಾರು ಹಂಗಾಮಿಗೆ ಕೃಷಿ ಇಲಾಖೆಯಿಂದ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಬಿತ್ತನೆ ಬೀಜ ಹಾಗೂ ರಸಗೊಬ್ಬರಕ್ಕೆ ಯಾವುದೇ ಕೊರತೆ ಇರುವುದಿಲ್ಲ. ತಾಲ್ಲೂಕಿನ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ತೊಗರಿ, ಹೆಸರು, ಉದ್ದು, ಸೋಯಾಬಿನ್ ಬಿತ್ತನೆ ಬೀಜಗಳು ಲಭ್ಯವಿರುತ್ತದೆ’ ಎಂದು ಮಾಹಿತಿ ನೀಡಿದ್ದಾರೆ.</p>.<p>ಬಿತ್ತನೆ ಕ್ಷೇತ್ರದ ಗುರಿ: 45,395 ಹೆಕ್ಟೇರ್ ತೊಗರಿ, 14,805 ಹೆಕ್ಟೇರ್ ಹೆಸರು, 3,185 ಹೆಕ್ಟೇರ್ ಉದ್ದು, 9,700 ಹೆಕ್ಟೇರ್ ಹತ್ತಿ 2,845 ಹೆಕ್ಟೇರ್ ಇತರೆ ಬೆಳೆಗಳು ಬಿತ್ತನೆ ಗುರಿ ಹೊಂದಲಾಗಿದೆ.</p>.<p>ಕೂರಿಗೆ ಬದಲು ಟ್ರ್ಯಾಕ್ಟರ್ ಮೂಲಕ ಬಿತ್ತನೆ ‘ದುಬಾರಿ ಬೆಲೆಗೆ ರಸಗೊಬ್ಬರ ಮಾರಾಟ’ ರಸೀದಿ ಕೇಳಿದರೆ ಗೊಬ್ಬರ ಕೊಡಲು ನಿರಾಕರಣೆ</p>.<p><strong>ಕೃಷಿ ಪರಿಕರ ಮಾರಾಟಗಾರರು ನಿಗದಿತ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಿದರೆ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ದೂರು ನೀಡಿ ಕ್ರಮ ಕೈಗೊಳ್ಳಲಾಗುತ್ತದೆ </strong></p><p><strong>-ಸಂಜಿವಕುಮಾರ ಮಾನಕರ್ ಸಹಾಯಕ ಕೃಷಿ ನಿರ್ದೇಶಕ</strong></p>.<p><strong>ಮುಂಗಾರು ಹಂಗಾಮು ಬಿತ್ತನೆಗೆ ಮುಂಚೆಯೆ ಕೃಷಿ ಇಲಾಖೆಯಿಂದ ರೈತರಿಗೆ ಅಗತ್ಯವಿರುವ ರಸಗೊಬ್ಬರ ಮತ್ತು ಬೀಜ ಪೂರೈಸಿದರೆ ಖಾಸಗಿ ಅಂಗಡಿಗಳಿಂದ ದುಬಾರಿ ಬೆಲೆಗೆ ಖರೀದಿಸುವುದಿಲ್ಲ </strong></p><p><strong>-ರವೀಂದ್ರ ಮುಡಬೂಳಕರ್ ಇಟಗಾ ರೈತ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>