ಸಭೆಯಲ್ಲಿ ಮಾತನಾಡಿದ ಸಂಸದ ಡಾ.ಜಾಧವ, ಕಲಬುರಗಿ ಬೈಪಾಸ್ ರಸ್ತೆಯ ಮಹತ್ವ ಹಾಗೂ ಅನಿವಾರ್ಯ ಕಾರಣಗಳನ್ನು ಬಿಚ್ಚಿಟ್ಟರು. ಜತೆಗೆ,ಹುಮನಾಬಾದ್ ಹಾಗೂ ಆಳಂದ ರಸ್ತೆಯಲ್ಲಿ ‘ಫ್ಲೈಓವರ್’ ನಿರ್ಮಾಣ ಮಾಡುವ ಬಗ್ಗೆಯೂ ಅವರು ಅಧಿಕಾರಿಗಳ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ರವಿ ಪ್ರಸಾದ, ಆದಷ್ಟು ಬೇಗ ಫ್ಲೈಓವರ್ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದರು.