ಘಟನೆಗೆ ಹಳೆ ವೈಷಮ್ಯ ಕಾರಣವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸಂಗಾಪುರ ಗ್ರಾಮದಿಂದ ಹೋಗುತ್ತಿದ್ದ ಬಾಬು ಅವರನ್ನು ತಡೆದ ದುಷ್ಕರ್ಮಿಗಳು ಕೊಡಲಿಯಿಂದ ಕುತ್ತಿಗೆಗೆ ಕೊಚ್ಚಿದ್ದಾರೆ. ಇದರಿಂದಾಗಿ ರುಂಡ ಹಾಗೂ ಮುಂಡಗಳು ಬೇರ್ಪಟ್ಟಿದ್ದು, ಕೊಲೆಗೆ ಬಳಸಿದ ಕೊಡಲಿಯನ್ನು ಅಲ್ಲಿಯೇ ಎಸೆದು ಪರಾರಿಯಾಗಿದ್ದಾರೆ. ಗಾಣಗಾಪುರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.