ಅಂದು ಬೆಳಿಗ್ಗೆ ರಿಂಗ್ ರಸ್ತೆಯಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಹಿಂದಿನಿಂದ ಬೊಲೆರೊ ವಾಹನದಲ್ಲಿ ಬಂದ ಅಬ್ದುಲ್ ರಹೀಂ ಅವರ ತಮ್ಮನ ಅಳಿಯ ಮಕ್ಬೂಲ್ ಅಬ್ದುಲ್ ಹಮೀದ್ ಸೌದಾಗರ ಎಂಬಾತ ಡಿಕ್ಕಿ ಪಡಿಸಿದ್ದರಿಂದ ಗಾಯಗೊಂಡು ಮೃತಪಟ್ಟರು. ಶುಕ್ರವಾರ ಯಾವದೋ ವಾಹನ ಡಿಕ್ಕಿ ಹೊಡೆದಿರಬಹುದು ಎಂದು ಪೊಲೀಸರು ಭಾವಿಸಿದ್ದರು. ಆದರೆ, ಭಾನುವಾರ ಸಂಚಾರ ಠಾಣೆಗೆ ಹಾಜರಾದ ಮೃಯ ಅಬ್ದುಲ್ ಘನಿ ಅವರ ಪುತ್ರ ಅಜ್ಮೋದ್ದೀನ್, ತಂದೆಯವರ ಬಳಿ ಹಣ ಕೇಳಿದ್ದ. ಆದರೆ, ಕೊಡಲು ನಿರಾಕರಿಸಿದ್ದರು. ಇದೇ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಿದ್ದಾನೆ ಎಂದು ತನಿಖಾಧಿಕಾರಿಯಾದ ಸಂಚಾರ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಶಾಂತಿನಾಥ ಅವರಿಗೆ ಹೇಳಿಕೆ ನೀಡಿದ್ದರು. ಅವರ ಹೇಳಿಕೆ ಆಧರಿಸಿ ಮಕ್ಬೂಲ್ನನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಕಮಿಷನರ್ ಸತೀಶಕುಮಾರ್ ಎನ್. ತಿಳಿಸಿದರು.