ಕುಟುಂಬಸ್ಥರು ರಾತ್ರಿಯಿಡಿ ಹುಡುಕಾಡಿದ್ದಾರೆ. ಕಮಲಾಪುರ ತಾಲ್ಲೂಕಿನ ನಾವದಗಿ (ಬಿ) ಸಿದ್ದಪ್ಪ ಪತ್ನಿಯ ತವರಾಗಿದ್ದು, ಆ ಕಡೆ ಕುಟುಂಬಸ್ಥರು ಹುಡುಕುತ್ತ ತೆರಳಿದ್ದಾರೆ. ರಾಷ್ಟೀಯ ಹೆದ್ದಾರಿ ಪಕ್ಕದ ತೊಗರಿ ಹೊಲವೊಂದರಲ್ಲಿ ಸಿದ್ದಪ್ಪ ಬೈಕ್ ಪತ್ತೆಯಾಗಿದೆ. ಮುಂದೆ ತೆರಳಿ ನೋಡಿದಾಗ ಒಂದೆಡೆ ಗಿಡಕ್ಕೆ ಕಟ್ಟಿದ ಮತ್ತೊಂದೆಡೆ ಕುತ್ತಿಗೆಗೆ ಹಗ್ಗ ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಬಟ್ಟೆ ಬಿಚ್ಚಿದ್ದು ತಲೆಗೆ ಬಲವಾದ ಪೆಟ್ಟು ಬಿದ್ದು ರಕ್ತಸ್ರಾವವಾಗಿದೆ. ಹೀಗಾಗಿ ಕುಟುಂಬಸ್ಥರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ.