ಈ ಸಂದರ್ಭದಲ್ಲಿ ನಾಗತಿಹಳ್ಳಿಯವರು ಮಾತನಾಡಿ, ‘ಸಂಕಷ್ಟಕ್ಕೆ ಸಿಲುಕಿರುವ ನಮ್ಮ ಹಳ್ಳಿಗಳನ್ನು ನಾವೇ ಸುಧಾರಿಸಿಕೊಳ್ಳಬೇಕು. ಬೇರೆಯವರು ಬಂದು ಕಷ್ಟ ನೀಗಿಸುತ್ತಾರೆ ಎಂದು ಕಾಯಕೂಡದು. ಒಂದು ಹಳ್ಳಿಯಲ್ಲಿ ಹತ್ತು ಯುವಕರು, ಹತ್ತು ಯುವತಿಯರು ಹಾಗೂ ಹತ್ತು ಮಕ್ಕಳು ಸೇರಿ ಗುಂಪು ಕಟ್ಟಿಕೊಂಡರೆ ಸಾಕು; ಸಾಕಷ್ಟು ಬದಲಾವಣೆ ತರಬಹುದು. ಇದನ್ನು ನಾನು ನನ್ನ ಹುಟ್ಟೂರಾದ ನಾಗತಿಹಳ್ಳಿಯಲ್ಲಿ ಪ್ರಯೋಗ ಮಾಡಿದ್ದೇನೆ. ನಿಮ್ಮಲ್ಲಿ ಆತ್ಮಸ್ಥೈರ್ಯ ತುಂಬಿ, ಭಾವನಾತ್ಮಕ ಸಂಬಂಧ ಬೆಸೆದುಕೊಳ್ಳಲು ಬಂದಿದ್ದೇನೆ’ ಎಂದರು.