ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಸಸಿ ಮಾತನಾಡಿ, ‘ವಿಜ್ಞಾನವು ನಮ್ಮ ತಾಯಂದಿರು ಮಾಡುವ ಅಡುಗೆಯಿಂದಲೇ ಆರಂಭವಾಗುತ್ತದೆ. ಅನ್ನವನ್ನು ಕುಕ್ಕರ್ನಲ್ಲಿ ಇಟ್ಟಾಗ ಎಷ್ಟು ಸೀಟಿ ಹೊಡೆದ ಬಳಿಕ ಬೆಂದಿರುತ್ತದೆ. ಬೇಯುತ್ತಿರುವ ಮೊಟ್ಟೆ ಒಡೆಯದಂತೆ ಉಪ್ಪು ಸೇರಿಸಬೇಕು ಎಂಬುದೂ ವೈಜ್ಞಾನಿಕ ಆಧಾರದ ಮೇಲೆ ನಿರ್ಧಾರವಾಗುತ್ತದೆ’ ಎಂದರು.