ಬೆಳಿಗ್ಗೆ 8 ಗಂಟೆ ಸುಮಾರಿಗೆ ನಗರದ ಕೇಂದ್ರ ಬಸ್ ನಿಲ್ದಾಣಕ್ಕೆ ಬಂದ ಕೆಎಸ್ಆರ್ಟಿಸಿಯ ಒಂದೊಂದು ಬಸ್ನಲ್ಲಿ ತಲಾ 30 ಪ್ರಯಾಣಿಕರು ಇದ್ದರು. ಅವರು ಕೆಳಗಿಳಿಯುತ್ತಿದ್ದಂತೆಯೇ ಪೊಲೀಸ್ ಸಿಬ್ಬಂದಿ, ‘ಎಲ್ಲಿಂದ ಬಂದರು,
ಎಲ್ಲಿಗೆ ಹೊರಟಿದ್ದಾರೆ’ ಎಂಬುದು ಸೇರಿದಂತೆ ಅಗತ್ಯ ವಿವರಗಳನ್ನು ಬರೆದುಕೊಂಡರು. ಊರಿಗೆ ಹೋಗಲು ಬಸ್ ವ್ಯವಸ್ಥೆ ಇದೆಯೇ ಎಂಬ ಹಲವು ಪ್ರಯಾಣಿಕರ ಪ್ರಶ್ನೆಗಳಿಗೆ ಇಲ್ಲಿಂದ ಯಾವುದೇ ಗಾಡಿ ಇಲ್ಲ ಎನ್ನುತ್ತಿದ್ದಂತೆಯೇ ಚಿಂತಾಕ್ರಾಂತರಾದರು.