ನಾನು ಪ್ರಸಕ್ತ ವರ್ಷ 30ಕ್ಕೂ ಹೆಚ್ಚು ಕೊರೊನಾ ಸೋಂಕಿತರ ಆರೈಕೆ ಮಾಡಿದ್ದೇನೆ. ಮೂಲತಃ ಬೀದರ್ ನಗರದವನಾಗಿದ್ದು, ಚಂದಾಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದೇನೆ. ಚಿಂಚೋಳಿ ತಾಲ್ಲೂಕು ಆಸ್ಪತ್ರೆಯಲ್ಲಿ ಕೆಲಸ ಸೇರಿದಾಗಿನಿಂದ ನನ್ನ ನೌಕರಿಯೇ ನನಗೆ ಜೀವನಾಧಾರ. ಅದಕ್ಕಿಂತ ಹೆಚ್ಚಾಗಿ ಮಾನವೀಯ ನೆಲೆಗಟ್ಟಿನಲ್ಲಿ ಕೆಲಸ ಮಾಡಿದರೆ ಎಂಥ ಸೋಂಕು, ರೋಗಿನ ವಿರುದ್ಧವೂ ಹೋರಾಡಿ ಗೆಲ್ಲಬಹುದು ಎಂಬುದು ನನ್ನ ಅನಿಸಿಕೆ.