‘ಇದು ಹಿಂಸಾತ್ಮಕ, ಉಗ್ರವಾದದ ಹೇಳಿಕೆಯಾಗಿದ್ದು, ನೆಲದ ಕಾನೂನಿಗೆ ಮತ್ತು ಸಂವಿಧಾನಕ್ಕೆ ಮಾಡಿರುವ ಅಪಮಾನ. ತುಮಕೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಸವರಾಜ ಅವರು ಹಿಂಸಾಕೃತ್ಯದ, ಪ್ರಚೋದನಕಾರಿ ಭಾಷಣ ಮಾಡಿರುವುದಲ್ಲದೆ ಹೆಣ್ಣುಮಕ್ಕಳ ಬಗ್ಗೆಯೂ ಮಾತನಾಡಿದ್ದಾರೆ. ಈ ಸಂಬಂಧ ಅವರ ವಿರುದ್ಧ ಅಲ್ಲಿಯ ಪೊಲೀ ಸರು ಸ್ವಯಂ ಪ್ರೇರಿ ತವಾಗಿ ಪ್ರಕರಣ ದಾಖಲಿಸಿಕೊಂಡು, ಈ ಕೂಡಲೇ ಅವರನ್ನು ಬಂಧಿ ಸುವ ಕೆಲಸ ಮಾಡಬೇಕು’ ಎಂದು ಸಂಘ ಟನೆಯ ರಾಜ್ಯ ಘಟಕದ ಕಾರ್ಯದರ್ಶಿ ಗೌರಮ್ಮ, ಅಧ್ಯಕ್ಷೆ ದೇವಿ, ಉಪಾಧ್ಯಕ್ಷೆ ಕೆ.ನೀಲಾ ಮತ್ತು ಸದಸ್ಯೆ ನಂದಾದೇವಿ ಮಂಗೊಂಡಿ ಅವರು
ಒತ್ತಾಯಿಸಿದ್ದಾರೆ.